WhatsApp Group Join Now
Telegram Group Join Now

Sri Gururagavendra Swamy: ಹಿಂದೂ ಧರ್ಮದ ಧಾರ್ಮಿಕ ಕ್ಷೇತ್ರಗಳಲ್ಲಿ ಮಂತ್ರಾಲಯವು ಒಂದು ಗುರು ರಾಘವೇಂದ್ರ ಸ್ವಾಮಿಯನ್ನು ನೆನೆದರೆ ಸಾಕು ಮಂತ್ರಾಲಯ ಕಣ್ಣ ಮುಂದೆ ಬಂದಂತೆ ಆಗುತ್ತದೆ ಮಂತ್ರಾಲಯದಲ್ಲಿ ಹಿಂದೂ ಧರ್ಮದ ಸಾಂಪ್ರದಾಯಿಕ ಉಡುಗೆಯನ್ನು ಹಾಕಲಾಗುತ್ತದೆ ಕಷ್ಟವೆಂದು ಗುರು ರಾಯರನ್ನು ನೆನೆದರೆ ಸಾಕು ಸಕಲ ಕಷ್ಟವನ್ನು ನಿವಾರಿಸುತ್ತದೆ ದೇಶ ವಿದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬರುತ್ತಾರೆ ರಾಘವೇಂದ್ರ ಸ್ವಾಮಿಗಳು ಹಿಂದೂ ಧರ್ಮದ ಪ್ರಭಾವಿ ಸಂತರು ಹಾಗೂ ದ್ವೈತ ತತ್ವಶಾಸ್ತ್ರವನ್ನು ಪ್ರತಿಪಾದಿಸಿ ದರು. ಬೆಳಗ್ಗೆ6ಗಂಟೆಯಿಂದ ಮಧ್ಯಾಹ್ನ 2ಗಂಟೆಯ ವರೆಗೆ ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಈ ದೇವಾಲಯ ತೆರೆದಿರುತ್ತದೆ

ಶ್ರೀ ಗುರು ರಾಘವೇಂದ್ರ ಸ್ವಾಮಿಯವರನ್ನು ನರಸಿಂಹ ಅವತಾರದಲ್ಲಿ ವಿಷ್ಣುವಿನಿಂದ ರಕ್ಷಿಸಲ್ಪಟ್ಟ ಭಕ್ತ ಪ್ರಹಲ್ಲಾದನ ಪುನರ್ಜನ್ಮವೆಂದು ಪರಿಗಣಿಸಲಾಗಿದೆ ಶ್ರೀ ಗುರು ರಾಘವೇಂದ್ರ ಸ್ವಾಮಿ ವೈಷ್ಣವ ಪಂಥವನ್ನು ಅನುಸರಿಸಿದರು ಪ್ರತಿಯೊಬ್ಬರೂ ಸಹ ಭೇಟಿ ನೀಡಬೇಕಾದ ಸ್ಥಳಗಳಲ್ಲಿ ಮಂತ್ರಾಲಯವು ಒಂದು ರಾಯರ ದರ್ಶನ ಮಾಡಿದರೆ ಎಲ್ಲ ಸಂಕಷ್ಟಗಳು ದೂರ ಆಗುತ್ತದೆ ನಾವು ಈ ಲೇಖನದ ಮೂಲಕ ಶ್ರೀ ಗುರು ರಾಘವೇಂದ್ರ ಸ್ವಾಮಿಯವರ ಪತ್ನಿಯ ಆತ್ಮ ಬಂದದ್ದು ಏಕೆ ಎಂಬುದನ್ನು ತಿಳಿದುಕೊಳ್ಳೊಣ.

ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ವಿಷ್ಣು ದೇವರನ್ನು ಪೂಜಿಸುವ ವೈಷ್ಣವ ಧರ್ಮವನ್ನು ಅನುಸರಿಸುವರು ಅವರು 1671ರಲ್ಲಿ ಆಂಧ್ರಪ್ರದೇಶದಲ್ಲಿ ಸ್ವ ಶರೀರ ಬೃಂದಾವನವನ್ನು ಸ್ವೀಕರಿಸಿದ್ದಾರೆ ಭಾರತದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ ಭಕ್ತರು ಭೌತಿಕ ಹಾಗೂ ಆಧ್ಯಾತ್ಮಿಕ ರೂಪದಲ್ಲಿ ರಾಯರನ್ನು ನೋಡುತ್ತಾರೆ ರಾಯರು ವೆಂಕಣ್ಣ ಭಟ್ಟರಾಗಿ ಜನಿಸಿದ್ದರು ತಿಮಣ್ಣ ಭಟ್ಟ ಹಾಗೂ ಶ್ರೀಮತಿ ಯವರ ಮಗನಾಗಿ ಜನಿಸಿದ್ದರು 1590ರಲ್ಲಿ ಫಾಲ್ಗುಣಿ ಮಾಸದ ಶುಕ್ಲ ಸಪ್ತಮಿಯಂದು ಚಂದ್ರನು ಮೃಗಶಿರ ನಕ್ಷತ್ರದಲ್ಲಿ ಇದ್ದಾಗ ಇಂದಿನ ತಮಿಳುನಾಡು ರಾಜ್ಯದ ಚಿದಂಬರಂ ಬಳಿಯ ಭುವನಗಿರಿಯಲ್ಲಿ ರಾಘವೇಂದ್ರ ಸ್ವಾಮಿಗಳು ಜನಿಸುತ್ತಾರೆ.

ರಾಯರು ಚಿಕ್ಕನಂದಿನಿನ್ನಂದಲೆ ಅದ್ಬುತವಾದ ವಿದ್ವಾಂಸರಾಗಿ ಇದ್ದರೂ ತಂದೆಯ ನಿಧನದ ಬಳಿಕ ಸಹೋದರ ಮನೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ ಹಾಗೆಯೇ ರಾಯರು ವಿದ್ಯಾಭ್ಯಾಸವನ್ನು ಸೋದರಮಾವನಾದ ಲಕ್ಷ್ಮೀನರಸಿಂಹಚಾರ್ಯರ ಬಳಿ ಪಡೆದುಕೊಂಡಿದ್ದಾರೆ ಮದುರೈನಿಂದ ಹಿಂದಿರುಗಿದ ನಂತರ ವೆಂಕಟನಾಥರು ಶ್ರೀಮಂತ ಕುಟುಂಬದಿಂದ ಬಂದ ಸರಸ್ವತಿಯನ್ನು ವಿವಾಹ ಆಗುತ್ತಾರೆ ತಮ್ಮ ಇಂದ್ರಿಯದ ಮೇಲೆ ಹಿಡಿತ ಹೊಂದಿದವರ ಮೇಲೆ ವಿವಾಹಿತ ಜೀವನ ಕಲಿಕೆಗೆ ಅಡ್ಡಿಯಾಗುವುದಿಲ್ಲ ಎಂದು ಶಾಸ್ತ್ರಗಳು ಹೇಳುತ್ತದೆ.

ಕುಂಭಕೋಣಂ ನಲ್ಲಿ ಸುದಿಂಧ್ರ ತೀರ್ಥರ ಆಶ್ರಯದೊಂದಿಗೆ ದ್ವೈತ ವೇದಾಂತ ಹಾಗೂ ವ್ಯಾಕರಣ ಇತರ ಶಾಸ್ತ್ರಗಳ ಮೇಲಿನ ಸುಧಾರಿತ ಕೃತಿಯನ್ನು ಅಧ್ಯಯನ ಮಾಡುತ್ತಾರೆ ಅನೇಕ ಚರ್ಚೆಯಲ್ಲಿ ಭಾಗವಹಿಸಿ ತನಗಿಂತ ಹೆಚ್ಚಿನ ವಿದ್ವಾಂಸರನ್ನು ಸೋಲಿಸುತ್ತಾರೆ ಅವರ ಅಪಾರ ಜ್ಞಾನವನ್ನು ತಿಳಿದುಕೊಂಡ ಸುದಿಂಧ್ರ ತೀರ್ಥರು ವೆಂಕಟನಾಥರಿಗೆ ಮಹಾಭಾಷ್ಯ ವೆಂಕಟನಾಥಚಾರ್ಯ ಎನ್ನುವ ಬಿರುದನ್ನು ಕೊಡುತ್ತಾರೆ ಒಮ್ಮೆ ಪತ್ನಿಯೊಂದಿಗೆ ಕುಂಭಕೋಣಂ ಅಲ್ಲಿ ಪ್ರವಾಸ ಮಾಡುತ್ತಿದ್ದಾಗ ಶ್ರೀ ವೆಂಕಟನಾಥ ಅವರ ಕುಟುಂಬವನ್ನು ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಿದ್ದರು ಅಲ್ಲಿ ಅವರನ್ನು ಚೆನ್ನಾಗಿ ನಡೆಸಿಕೊಳ್ಳುವುದು ಇಲ್ಲ ಬದಲಾಗಿ ಮನೆ ಕೆಲಸದವರಂತೆ ನೋಡಿಕೊಳ್ಳಲು ಪ್ರಾರಂಭ ಮಾಡುತ್ತಾರೆ ಅತಿಥೇಯರು ತಿಲಕ ಇಟ್ಟುಕೊಳ್ಳಲು ಶ್ರೀಗಂಧ ಲೇಪನ ಸಿದ್ದ ಮಾಡಲು ಆಜ್ಞೆಯನ್ನು ಮಾಡುತ್ತಾರೆ ಆಗ ವೆಂಕಟನಾಥರು ಅಗ್ನಿಸುತ್ಮ ಪಠಿಸುತ್ತಾ ಶ್ರೀಗಂಧ ಲೇಪನ ಮಾಡುತ್ತಾರೆ

ಅತಿಥೇಯರು ದೇಹಕ್ಕೆ ಲೇಪನ ಮಾಡಿಕೊಂಡಂತೆ ಉರಿ ಆರಂಭ ಆಗುತ್ತದೆ. ಉರಿಯನ್ನು ಶಮನ ಮಾಡುವಂತೆ ವೆಂಕಟನಾಥರನ್ನು ಕೇಳಿಕೊಂಡರು ವೈದಿಕ ಮಂತ್ರವನ್ನು ಪಠಿಸುತ್ತಾ ಶ್ರೀಗಂಧ ಲೇಪನ ಸಿದ್ದ ಮಾಡಿದರು ಇದನ್ನು ಹಚ್ಚಿಕೊಂಡ ಬಳಿಕ ದೇಹದ ಉರಿ ಕಡಿಮೆ ಆಗುತ್ತದೆ ರಾಯರ ಶಕ್ತಿ ಭಕ್ತಿ ತಿಳಿಯದೆ ಮಾತನಾಡಿದ ಬಗ್ಗೆ ಅತಿಥೇಯರು ಕ್ಷಮೆಯನ್ನು ಕೇಳುತ್ತಾರೆ ಹಾಗೆಯೇ ಸುದಿಂಧ್ರ ತೀರ್ಥರು ಅವರ ನಂತರ ಮಠಕ್ಕೇ ಉತ್ತಾರಾಧಿಕಾರಿಯನ್ನು ಹುಡುಕುತ್ತಿದ್ದರು ಹಾಗೆಯೇ ಅವರ ನಂತರ ಮಠಕ್ಕೇ ಉತ್ತಾರಾಧಿಕಾರಿಯಾಗಲೂ ವೆಂಕಟನಾಥರು ಸೂಕ್ತವೆಂದು ನಿರ್ಧರಿಸುತ್ತಾರೆ .

ವೆಂಕಟನಾಥರು ತನ್ನ ಪತ್ನಿ ಹಾಗೂ ಮಗನ ಮೇಲಿನ ಜವಬ್ದಾರಿಯಿಂದ ಉತ್ತರಾಧಿಕಾರಿ ಆಗಲು ನಿರಾಕರಿಸುತ್ತಾರೆ ಮರುದಿನ ಕನಸ್ಸಿನಲ್ಲಿ ವಿದ್ಯಾಲಕ್ಷ್ಮಿ ಬಂದು ಸೂಚನೆ ನೀಡುತ್ತಾಳೆ ನಂತರದಲ್ಲಿ ಸನ್ಯಾಸ ದೀಕ್ಷೆ ತೆಗೆದುಕೊಳ್ಳಲು ನಿರ್ಧರಿಸುತ್ತಾರೆ ಸನ್ಯಾಸ ದೀಕ್ಷೆ ತೆಗೆದುಕೊಳ್ಳುವ ದಿನದಂದು ಪತ್ನಿಗೆ ಗಂಡನ ಮುಖ ನೋಡುವ ನೆನಪು ಆಗುತ್ತದೆ ಆದರೆ ಬಲವಾದ ಗಾಳಿಯು ಅವಳನ್ನು ಮುಂದೆ ಹೋಗಲು ನಿರ್ಬಂಧಿಸುತ್ತದೆ ಇದರಿಂದ ಮನನೊಂದ ಸರಸ್ವತಿ ದೇವಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅವರ ಆತ್ಮವು ಭೂಮಿ ಹಾಗೂ ಸ್ವರ್ಗದ ನಡುವೆ ಸಿಕ್ಕಿ ಹಾಕಿ ಕೊಳ್ಳುತ್ತದೆ ಕಾರಣವೇನೆಂದರೆ ಸಮಯಕ್ಕಿಂತ ಮೊದಲೇ ಸಾವಿಗೆ ಶರಣಾಗಿದ್ದರು ಸರಸ್ವತಿಯ ದೇವಿಯ ಆತ್ಮವು ಮಠಕ್ಕೆ ಹೋಗುತ್ತದೆ ಆದರೆ ಅಲ್ಲಿ ಅವರ ಪತಿ ರಾಘವೇಂದ್ರ ತೀರ್ಥ ರಾಗಿದ್ದರು ರಾಘವೇಂದ್ರ ತೀರ್ಥರು ತಮ್ಮ ಪತ್ನಿಯ ಆತ್ಮವನ್ನು ಗ್ರಹಿಸುತ್ತಾರೆ

ಕೊನೆಯ ಆಸೆಯನ್ನು ನೆರವೇರಿಸುವ ಸಲುವಾಗಿ ಸ್ವಲ್ಪ ನೀರನ್ನು ಸಿಂಪಡಿಸುತ್ತಾರೆ ಈ ಪ್ರಕ್ರಿಯೆಯು ಆತ್ಮವನ್ನು ಮುಕ್ತಿಗೊಳಿಸುತ್ತದೆ. ರಾಘವೇಂದ್ರ ಸ್ವಾಮಿಗಳು ದಕ್ಷಿಣ ಭಾರತದ ಪ್ರವಾಸವನ್ನು ಕೈಗೊಂಡು ದ್ವೈತ ತತ್ವ ಶಾಸ್ತ್ರವನ್ನು ಹರಡುತ್ತಾರೆ ರಾಮೇಶ್ವರಂ ಹಾಗೂ ಶ್ರೀರಂಗಂ ಎನ್ನುವ ಪ್ರಸಿದ್ಧ ಸ್ಥಳಗಳಿಗೆ ಸಹ ಭೇಟಿ ಕೊಡುತ್ತಾರೆ ರಾಯರು ಉಡುಪಿ ಕನ್ಯಾಕುಮಾರಿ ತಿರುವನಂತಪುರಂ ವಿಷ್ಣು ಮಂಗಳ ಕುಕ್ಕೆ ಸುಬ್ರಮಣ್ಯ ಮುಂತಾದ ಕೇಂದ್ರಗಳಿಗೆ ಸಂಚರಿಸುತ್ತಾರೆ ದ್ವೈತ ಶಾಸ್ತ್ರದ ಪಾಂಡಿತ್ಯವನ್ನು ಎಲ್ಲರಿಗೂ ತಿಳಿಸುತ್ತಾರೆ

ರಾಯರು 1671 ರಲ್ಲಿ ಶ್ರಾವಣ ಕೃಷ್ಣ ಪಕ್ಷದ ದ್ವಿತೀಯ ದಿನದಂದು ಜೀವ ಸಮಾಧಿಯನ್ನು ಪಡೆಯುತ್ತಾರೆ ಸ್ವಶರೀರ ಬೃಂದಾವನವು ಆಂಧ್ರಪ್ರದೇಶದ ತುಂಗಭದ್ರಾ ನದಿಯ ತಟದಲ್ಲಿದೆ ಮಂತ್ರಾಲಯವು ಕರ್ನಾಟಕದ ರಾಯಚೂರಿನಿಂದ 1ಕಿಲೋಮೀಟರ್ ನಷ್ಟು ದೂರವಿದೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ ಪ್ರತಿವರ್ಷ ಶ್ರಾವಣ ಕೃಷ್ಣ ಪಕ್ಷ ಪಾಡ್ಯದಿಂದ ಶ್ರಾವಣ ಕೃಷ್ಣ ಪಕ್ಷ ತದಿಗೆ ವರೆಗೆ ಭವ್ಯವಾದ ಆರಾಧನೆ ನಡೆಯುತ್ತದೆ ತಮ್ಮ ಭಕ್ತಾದಿಗಳಿಗೆ 700 ವರ್ಷ ಇರುತ್ತೇನೆ ಎಂದು ವಚನ ನೀಡಿದ್ದಾರೆ ಹಾಗೆಯೇ ದೇಶ ವಿದೇಶದಿಂದ ಭಕ್ತರು ಬರುತ್ತಾರೆ ಹೀಗೆ ರಾಘವೇಂದ್ರ ಸ್ವಾಮಿಯ ಮಂತ್ರಾಲಯ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ ಹಾಗೆಯೇ ರಾಯರು ಇಂದಿಗೂ ಸಹ ಭಕ್ತಾದಿಗಳಿಗೆ ಆಶೀರ್ವಾದ ನೀಡುತ್ತಾರೆ

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: