Darshan: ಕಿಡ್ನಿ ಫೆಲ್ಯೂರ್ ಇಂದ ಬಳಲುತ್ತಿದ್ದವರಿಗೆ ಡಿಬಾಸ್ ಇಂದ ಸಹಾಯ.. ಅಭಿಮಾನಿಗಳು ಫಿದಾ..

0

ನಟ ದರ್ಶನ್ ಅವರ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರ ಒಳ್ಳೆಯತನ, ಅವರ ವ್ಯಕ್ತಿತ್ಯ, ಜನರಿಗೆ ಅಭಿಮಾನಿಗಳಿಗೆ ಅವರು ಮಾಡುವ ಸಹಾಯ ಇಂಥ ಹಲವು ಕೆಲಸಗಳಿಂದ ದರ್ಶನ್ ಅವರು ಅಭಿಮಾನಿಗಳ ಮನಸ್ಸಿನಲ್ಲಿ ಸ್ಥಾನ ಗಳಿಸಿ, ಇಲ್ಲರ ಮೆಚ್ಚಿನ ನಟ ಮಾತ್ರವಲ್ಲ, ಎಲ್ಲರೂ ಇಷ್ಟಪಡುವ ವ್ಯಕ್ತಿ ಆಗಿದ್ದಾರೆ. ಕರ್ನಾಟಕದಲ್ಲಿ ಅವರಿಗೆ ಇರುವ ಹಾಗೆ ದೊಡ್ಡ ಮಟ್ಟದ ಮಾಸ್ ಫ್ಯಾನ್ ಬೇಸ್ ಯಾರಿಗೂ ಇಲ್ಲ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ದರ್ಶನ್ ಅವರು ಯಾವುದೇ ಕಾರಣಕ್ಕೆ ಹೊರಗಡೆ ಬಂದರು, ಎಲ್ಲೇ ಕಾಣಿಸಿಕೊಂಡರು ಸಹ ಸುದ್ದಿಯಾಗುತ್ತಾರೆ. ಅಭಿಮಾನಿಗಳು ಅವರನ್ನು ಸುತ್ತುವರೆದಿರುತ್ತಾರೆ. ಅಭಿಮಾನಿಗಳಿಗೆ ಅವರನ್ನು ಕಂಡರೆ ಆ ಮಟ್ಟಗಿನ ಕ್ರೇಜ್ ಇದೆ. ಇನ್ನು ಡಿಬಾಸ್ ಅವರ ಬಗ್ಗೆ ಅವರ ಬಗ್ಗೆ ಒಂದಲ್ಲಾ ಒಂದು ಸುದ್ದಿಗಳು, ಅವರು ಮಾಡುವ ಒಳ್ಳೆಯ ಕೆಲಸಗಳು ವೈರಲ್ ಆಗುತ್ತಲೇ ಇರುತ್ತದೆ. ಇತ್ತೀಚೆಗೆ ರಕ್ಷಾಬಂಧನ ಹಬ್ಬದ ದಿನ ಕೂಡ ದರ್ಶನ್ ಅವರು ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು..

ರಕ್ಷಾಬಂಧನ ಹಬ್ಬದ ದಿನ ಮತ್ತು ರಕ್ಷಾಬಂಧನದ ಮರುದಿನ ದರ್ಶನ್ ಅವರನ್ನು ಅಣ್ಣ ಎಂದು ಗೌರವಿಸುವ ಅವರ ಸಾಕಷ್ಟು ಅಭಿಮಾನಿಗಳು ಮನೆಗೆ ಬಂದು ದರ್ಶನ್ ಅವರಿಗೆ ರಾಖಿ ಕಟ್ಟಿ ಹೋಗಿದ್ದರು. ಇನ್ನು ನಟಿ ಸೋನಲ್ ಕೂಡ ಡಿಬಾಸ್ ಅವರಿಗೆ ರಾಖಿ ಕಟ್ಟಿದ್ದರು. ದರ್ಶನ್ ಅವರು ಕೂಡ ರಾಖಿ ಕಟ್ಟಿದ ಎಲ್ಲರಿಗೂ ಧನ್ಯವಾದ ತಿಳಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಈ ವಿಚಾರಗಳ ಜೊತೆಗೆ ನಟ ದರ್ಶನ್ ಅವರು ಈಗ ಮತ್ತೊಂದು ವಿಚಾರದಿಂದ ಸುದ್ದಿಯಾಗಿದ್ದಾರೆ.

ಅದೇನು ಎಂದರೆ, ದರ್ಶನ್ ಅವರು ಆದರ್ಶ್ ಎನ್ನುವ ವ್ಯಕ್ತಿಯೊಬ್ಬರಿಗೆ ಎರಡು ಕಿಡ್ನಿ ಫೆಲ್ಯೂರ್ ಆಗಿ, ಅದರಿಂದ ಅವರ ಆರೋಗ್ಯ ಗಂಭೀರ ಸ್ಥಿತಿಯಲ್ಲಿದ್ದಾಗ, ದರ್ಶನ್ ಅವರು ಆ ವ್ಯಕ್ತಿಗೆ ಸಹಾಯ ಮಾಡಿದ್ದು, ಈ ವಿಚಾರವನ್ನು ಸ್ವತಃ ಆದರ್ಶ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ಡಿಬಾಸ್ ಇಂದ ತಮಗೆ ಆದ ಉಪಕಾರವನ್ನು ಹೊಗಳಿದ್ದಾರೆ. ಅಭಿಮಾನಿಗಳು ಈ ಸುದ್ದಿ ಕೇಳಿ ದರ್ಶನ್ ಅವರ ಗುಣವನ್ನು ಮೆಚ್ಚಿಕೊಂಡಿದ್ದಾರೆ.

“ಆದರ್ಶ್ ಅಂತ ನನ್ನ ಹೆಸರು..ನಾನು ಡಿಬಾಸ್ ಅಭಿಮಾನಿ. ನನ್ನ ಎರಡೂ ಕಿಡ್ನಿ ಫೆಲ್ಯೂರ್ ಆಗಿತ್ತು. ಒಂದು ಸಾರಿ ದರ್ಶನ್ ಅವರನ್ನು ಭೇಟಿ ಮಾಡಬೇಕು ಎನ್ನುವುದು ನನ್ನ ಬಹಳ ವರ್ಷಗಳ ಆಸೆ. ದರ್ಶನ್ ಅವರೊಡನೆ ಕ್ಲೋಸ್ ಆಗಿರುವ ನಾಗರಾಜ್ ಅಣ್ಣ ಅವರ ಹತ್ತಿರ ಒಂದು ಸಾರಿ ಅವರನ್ನ ಭೇಟಿ ಮಾಡಿಸಿ ಅಂತ ಕೇಳಿಕೊಂಡಿದ್ದೆ. ದರ್ಶನ್ ಅವರನ್ನ ನಾಗರಾಜ್ ಅಣ್ಣ ಭೇಟಿ ಮಾಡಿಸಿದರು. ದರ್ಶನ್ ಸರ್ ಮತ್ತು ಗೋವಿಂದಣ್ಣ ಇಬ್ಬರಿಗೂ ತುಂಬಾ ಥ್ಯಾಂಕ್ಸ್..” ಎಂದು ಆದರ್ಶ್ ವಿಡಿಯೋದಲ್ಲಿ ಹೇಳಿದ್ದಾರೆ.

ದರ್ಶನ್ ಅವರು ಒಬ್ಬ ಮೇರು ನಟನ ಮಗ ಆಗಿದ್ದರು ಕೂಡ ಅವರು ಸಹ ಕಷ್ಟದಲ್ಲಿ ಬೆಳೆದವರು. ಬಡತನ ಮತ್ತು ಕಷ್ಟದ ಜೀವನ ಏನು ಎಂದು ದರ್ಶನ್ ಅವರಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ದರ್ಶನ್ ಅವರು ಕಷ್ಟ ಏನು ಹೇಳುವ ವ್ಯಕ್ತಿಗೆ ಸಹಾಯ ಮಾಡದೆ ಇರುವುದಿಲ್ಲ. ಈ ಒಂದು ಹುಣದಿಂದಲೇ ದರ್ಶನ್ ಅವರನ್ನು ಕಂಡರೆ ಎಲ್ಲಾ ಅಭಿಮಾನಿಗಳಿಗೂ ಅಷ್ಟು ಪ್ರೀತಿ ಮತ್ತು ಹುಚ್ಚು ಅಭಿಮಾನ.

Leave A Reply

Your email address will not be published.

error: Content is protected !!
Footer code: