ಗಂಡ ಹೆಂಡತಿಯ ಸಂಬಂಧ, ಒಂದು ಸುಂದರ ಅನುಬಂಧ, ಇಬ್ಬರು ಸಂಸಾರವನ್ನು ಸರಿಸಮನಾಗಿ ನಡೆಸಿಕೊಂಡು ಬಾಳಿದರೆ ಅದೇ ಸ್ವರ್ಗ. ಅದೇ, ಎತ್ತು ಏರಿಗೆ ಎಳೆದರೆ ಕೋಣ ನೀರಿಗೆ ಎಳೆಯಿತು ಎನ್ನುವಂತೆ ಆದರೆ ಮನಸ್ಸುಗಳು ಒಡೆದು ದೂರ ಆಗುತ್ತವೆ.
ಹೆಣ್ಣು ಸಹನೆಯ ಪ್ರತಿ ರೂಪ ಅವಳು ಮಾಡುವ ಕೆಲವು ತಪ್ಪುಗಳು ಅವಳ ಜೀವನವನ್ನೇ ನರಕ ಮಾಡುವ ಸಾಧ್ಯತೆ ಇದೆ. ಗಂಡಸರಿಗೆ ನೂರೆಂಟು ಕೆಲಸ, ಜವಾಬ್ದಾರಿ, ತಾಳ್ಮೆ ಕಡಿಮೆ ಹೆಣ್ಣು ಮಕ್ಕಳು ಮನೆ ಮತ್ತು ಕೆಲಸವನ್ನು ಸರಿದೂಗಿಸಿಕೊಂಡು ಹೋಗಬೇಕು ಅದಕ್ಕೆ ಅವಳನ್ನು ಭೂಮಿ ತಾಯಿಗೆ ಹೋಲಿಕೆ ಮಾಡುವುದು. ಮೂರ್ಖ ಮಹಿಳೆ ಅವಳ ಗಂಡನನ್ನು ಗುಲಾಮನಾಗಿ ಮಾಡಿಕೊಂಡು ಅವಳು ಗುಲಾಮನ ಹೆಂಡತಿಯಾಗಿ ಇರುತ್ತಾಳೆ. ಅದೇ, ಬುದ್ದಿವಂತ ಮಹಿಳೆ ಗಂಡನನ್ನು ಅರಸನಾಗಿ ನೋಡಿಕೊಂಡು ಅವಳು ರಾಣಿಯಂತೆ ಬಾಳುವಳು.

ಮೂರ್ಖ ಮಹಿಳೆ ಅವಳ ಗಂಡನನ್ನು ಬುಗುರಿ ತರ ಕುಣಿಸುವಳು. ಬೇರೆ ಮನೆ ಮಾಡೋಣ ಎಂದು ರಚ್ಚೆ ಹಿಡಿಯುವಳು. ಅವಳಿಗೆ, ಗಂಡನ ಮನೆಯವರ ಜೊತೆ ಕೂಡಿ ಬಾಳಲು ಇಷ್ಟ ಇರುವುದಿಲ್ಲ. ಅದೇ, ಬುದ್ದಿವಂತ ಮಹಿಳೆ ಸಂಸಾರದಲ್ಲಿ ಯಾವುದೇ ರೀತಿಯ ಕಷ್ಟ ಎದುರಾದರು. ಅದಕ್ಕೆ, ಹೊಂದಿಕೊಂಡು ಪರಿಸ್ಥಿತಿಯನ್ನು ದಿನ ಅರ್ಥಮಾಡಿಕೊಂಡು ಎಲ್ಲರ ಜೊತೆಗೆ ಕೂಡಿ ಬಾಳುವ ಆಸಕ್ತಿ ಹೊಂದಿರುವಳು.
ಮೂರ್ಖ ಮಹಿಳೆಯರು ಅವಳ ಮಕ್ಕಳು ಏನಾದರೂ ತಪ್ಪು ಮಾಡಿದರೆ ಎಲ್ಲರ ಮುಂದೆ ಬಾಯಿಗೆ ಬಂದಂತೆ ಬೈದು ಹೊಡೆದು ಮಕ್ಕಳಿಗೆ ಪಾಠ ಕಲಿಸುವಳು. ಬುದ್ಧಿವಂತ ಮಹಿಳೆ ಮಕ್ಕಳು ಏನೇ ತಪ್ಪು ಮಾಡಿದರು. ಅದನ್ನು, ಸಮಾಧಾನವಾಗಿ ತಾಳ್ಮೆಯಿಂದ ತಿಳಿಸಿ ಬುದ್ಧಿ ಮಾತು ಹೇಳುವಳು.
ಭಾವನೆಗಳೇ ಇಲ್ಲದ ಹೆಣ್ಣಿನ ಮನಸ್ಸು ಹೂವೇ ಇಲ್ಲದೆ ಬರಿದಾಗಿ ಹೋಗಿರುವ ಅತೀ ದೊಡ್ಡ ತೋಟದಂತೆ ಕೇವಲ, ನಾಮಕಾವಸ್ತೆಗೆ ಮಾತ್ರ ಅದು, ದೊಡ್ಡದಾದ ತೋಟ. ಆದರೆ, ಯಾವುದಕ್ಕೂ ಅದು ಪ್ರಯೋಜನಕ್ಕೆ ಬರುವುದಿಲ್ಲ.
ಮೂರ್ಖ ಮಹಿಳೆ ಕುಟುಂಬ ಮತ್ತು ಗಂಡನ ಸ್ನೇಹಿತರ ಜೊತೆ ಅಸಭ್ಯವಾಗಿ ವರ್ತಿಸುತ್ತಾಳೆ. ಪತಿ ಮನೆಗೆ ದಣಿದು ಬಂದಾಗ ನಗುಮುಖದ ಬದಲು ಮುಖ ಸಿಂಡರಿಸಿ ಸ್ವಾಗತ ಮಾಡುತ್ತಾಳೆ. ಸಭ್ಯತೆ ಹೊಂದಿರುವ ಮಹಿಳೆ ಯಾವಾಗಲೂ, ಪ್ರೀತಿಯಿಂದ ಮಾತನಾಡುತ್ತಾಳೆ. ಬೇರೆಯವರ ಮುಂದೆ ಅಥವಾ ಮನೆಯಲ್ಲಿ ಗಂಡನಿಗೆ ಗೌರವ ನೀಡುತ್ತಾಳೆ.
ಬುದ್ದಿವಂತ ಹೆಣ್ಣಿಗೆ ಸಹನೆ ಇರುತ್ತದೆ. ಎಲ್ಲರ ಜೊತೆ ಹೊಂದಿಕೊಂಡು ಹೋಗುವ ಗುಣ ಇರುತ್ತದೆ. ಆದರೆ, ಸ್ವಾರ್ಥ ಮನೋಭಾವನೆ ಇರುವ ಹೆಣ್ಣಿಗೆ, ಊಟ – ತಿಂಡಿ, ಹಾಕುವ ಬಟ್ಟೆ ಉಪಯೋಗಿಸುವ ವಸ್ತುಗಳು, ಪ್ರತಿ ಒಂದರಲ್ಲಿ ನನ್ನದು ಎಂಬ ಸ್ವಾರ್ಥ ಹಾಗು ಅಹಂ ಭಾವ ತುಂಬಿರುತ್ತದೆ. ಅವರು ಯಾವತ್ತಿಗೂ ಖುಷಿಯಾಗಿ ಇರಲು ಸಾಧ್ಯ ಇಲ್ಲ.
ಹೆಂಡತಿ ಅವನ ಪತಿಯನ್ನು ರಾಜನಂತೆ ನೋಡಿಕೊಳ್ಳಲು ಬಯಸಿದರೆ, ಅವಳ ಗಂಡ ಸಹ ಅವಳನ್ನು ರಾಣಿಯಂತೆ ನೋಡಿಕೊಳ್ಳಬೇಕು. ತಾಳಿಯನ್ನು ಬಾರ ಎಂದು ಭಾವಿಸುವ ಯಾವುದೇ ಹೆಣ್ಣಿಗೆ ಸಂಸಾರ ನಡೆಸಲು ಅರ್ಹತೆ ಇರುವುದಿಲ್ಲ.
ಹೆಣ್ಣು ಅವನ ಮನೆಯ ಆಳು ಎಂದು ಭಾವಿಸುವ ಯಾವುದೇ ಗಂಡನಿಗೆ ಸಂಸಾರಿಯಾಗಿ ಬಾಳಲು ಅರ್ಹತೆ ಇರುವುದಿಲ್ಲ. ಗಂಡ ಮತ್ತು ಹೆಂಡತಿ ಇಬ್ಬರು ಹೊಂದಿಕೊಂಡು ಬಾಳಬೇಕು. ಯಾರು ಮೇಲು ಅಲ್ಲ, ಯಾರು ಕೀಳು ಅಲ್ಲ. ತಂದೆ ತಾಯಿ ಬಿಟ್ಟು ಬರುವ ಹೆಣ್ಣಿಗೆ ಗಂಡನ ಹೆತ್ತವರೇ ತಂದೆ ತಾಯಿಯಾಗಿ ಇರಬೇಕು. ಅವಳನ್ನು ಸೊಸೆಯಾಗಿ ಇಲ್ಲ ಮಗಳಾಗಿ ಕಂಡರೆ ಅವಳಿಗೆ ಅವಳ ಹೆತ್ತವರ ಎಂದಿಗೂ ನೆನಪೇ ಆಗುವುದಿಲ್ಲ.
ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519