ತುಳಸಿ ಪೂಜೆ ಮಾಡುವ ಸಮಯದಲ್ಲಿ ಹೇಳಬೇಕಾದ ಮಂತ್ರ

0

ಮನೆಯಲ್ಲಿ ತುಳಸಿ ಗಿಡ ಇದ್ದರೆ ಅದು ಮನೆಗೆ ಒಳ್ಳೆಯ ಸಕಾರಾತ್ಮಕ ಶಕ್ತಿ ತರುತ್ತದೆ. ಇನ್ನು ವೈಜ್ಞಾನಿಕವಾಗಿ ನೋಡುವುದಾದರೆ ತುಳಸಿ ಗಿಡ ಆಮ್ಲಜನಕ ಪೂರೈಕೆ ಮಾಡಿ ಆರೋಗ್ಯ ವೃದ್ಧಿ ಮಾಡುತ್ತದೆ. ಕೆಮ್ಮು, ಕಫ, ಶೀತಾದಂತಹ ಕಾಯಿಲೆಗಳಿಗೆ ರಾಮಬಾಣ ಕೂಡ ಹೌದು.

ಹಿಂದೂ ಧರ್ಮದಲ್ಲಿ ತುಳಸಿ ಪೂಜೆಗೆ ವಿಶೇಷವಾದ ಮಹತ್ವವಿದೆ. ತುಳಸಿ ಗಿಡವನ್ನು ತಾಯಿ ಲಕ್ಷ್ಮಿ ದೇವಿಯ ಇನ್ನೊಂದು ರೂಪ ಎಂದು ತಿಳಿಯಲಾಗಿದೆ. ಯಾವ ಮನೆಯಲ್ಲಿ ಪ್ರತಿದಿನ ತಪ್ಪದೆ ತುಳಸಿ ಪೂಜೆಯನ್ನು ಮಾಡುವರೋ ಆ ಮನೆಯಿಂದ ಎಂದಿಗೂ ದೌರ್ಭಾಗ್ಯ, ದರಿದ್ರ ಹಾಗೂ ಬಡತನ ಎನ್ನುವುದು ದೂರ ಉಳಿಯುತ್ತದೆ.

ಆ ಗೃಹದಲ್ಲಿ ಎಂದಿಗೂ ತಾಯಿ ಲಕ್ಷ್ಮೀದೇವಿ ವಾಸ ಮಾಡುವಳು. ತುಳಸಿ ಪೂಜೆ ಪ್ರತಿ ದಿನ ಮಾಡುವ ಕಾರಣ ಮೋಕ್ಷ ಕೂಡ ಪ್ರಾಪ್ತಿ ಆಗುತ್ತದೆ. ಅದರೊಂದಿಗೆ ಜನರು ಮಾಡಿರುವ ಪಾಪ ಕರ್ಮಗಳ ನಾಶ ಸಹ ಆಗುತ್ತದೆ. ತುಳಸಿ ದೇವಿ ಮನೆಯಲ್ಲಿ ಇರುವ ಋಣಾತ್ಮಕ ಅಂಶಗಳನ್ನು ನಾಶ ಮಾಡಿ. ಮನೆಯಲ್ಲಿ ಧನಾತ್ಮಕ ಅಂಶಗಳು ಪ್ರವೇಶ ಮಾಡುವಂತೆ ಮಾಡುವಳು.

ಪೌರಾಣಿಕ ಕಥೆಯ ಪ್ರಕಾರ ದಿನ ತುಳಸಿ ಪೂಜೆಯನ್ನು ಮಾಡುವುದರಿಂದ ಧನ, ಕನಕ, ಸಂಪತ್ತು, ವೈಭವ, ಸುಖ, ಶಾಂತಿ ಸಿಗುತ್ತದೆ ಹಾಗೂ ತಾಯಿ ಲಕ್ಷ್ಮಿ ದೇವಿಯ ಕೃಪೆ ಸದಾಕಾಲ ಅವರ ಮೇಲೆ ಇರುತ್ತದೆ.ತುಳಸಿ ಗಿಡ ಇರುವ ಜಾಗದಲ್ಲಿ ತ್ರಿಮೂರ್ತಿಗಳು ಬ್ರಹ್ಮ ವಿಷ್ಣು ಮಹೇಶ್ವರ ವಾಸ ಮಾಡುವರು. ಇದರೊಂದಿಗೆ ತುಳಸಿ ಪೂಜೆ ಮಾಡುವ ದೆಸೆಯಿಂದ ಮಹಾ ಪಾಪಗಳು ಕೂಡ ನಾಶ ಆಗುತ್ತವೆ. ಈ ಒಂದು ಮಂತ್ರವನ್ನು ತುಳಸಿಗೆ ಪೂಜೆ ಮಾಡುವ ವೇಳೆಯಲ್ಲಿ ಜಪ ಮಾಡಿದರೆ ಸ್ವಲ್ಪ ದಿನಗಳ ಅಂತರದಲ್ಲಿ ಎಲ್ಲ ರೀತಿಯ ಕಷ್ಟಗಳು ದೂರವಾಗಿ ಶುಭ ಫಲಗಳು ಲಭಿಸುತ್ತದೆ.

ಮನೆಯಲ್ಲಿ ತಾಯಿ ಲಕ್ಷ್ಮೀದೇವಿ ಚಿರಕಾಲ ಇರುವಳು. ಇದರೊಂದಿಗೆ ಮನೆಯಲ್ಲಿ ಸಂತಸದ ವಾತಾವರಣ ಸೃಷ್ಟಿ ಆಗುತ್ತದೆ. ಪ್ರತಿದಿನ ಮನೆಯಲ್ಲಿ ತುಳಸಿ ಪೂಜೆಯನ್ನು ಮುಗಿಸಿ. ತುಳಸಿ ಗಿಡದ ಬಳಿಗೆ ಹೋಗಿ ನಮಸ್ಕಾರ ಮಾಡಬೇಕು. ತುಳಸಿ ಗಿಡಕ್ಕೆ ಸ್ವಚ್ಚವಾದ ಮತ್ತು ಶುಭ್ರವಾದ ನೀರನ್ನು ಅರ್ಪಣೆ ಮಾಡಬೇಕು. ಅದಾದ ಮೇಲೆ ತುಳಸಿ ಗಿಡಕ್ಕೆ ಅರಿಶಿಣ ಕುಂಕುಮವನ್ನು ಹಚ್ಚಬೇಕು. ಇದರಿಂದ ತುಳಸಿ ದೇವಿಯ ಅಲಂಕಾರ ಆಗುತ್ತದೆ. ಇದರ ಜೊತೆಗೆ ತುಳಸಿ ಸಸ್ಯದ ಬಳಿ ತುಪ್ಪದ ದೀಪವನ್ನು ಹಚ್ಚಬೇಕು ಮತ್ತು ದೂಪ ಹಾಗೂ ಆಗರಬತ್ತಿಯನ್ನು ಸಮರ್ಪಣೆ ಮಾಡಬೇಕು.

ತುಳಸಿ ಕಟ್ಟೆಯನ್ನು 7 ಸುತ್ತು ಸುತ್ತಬೇಕು. ತುಳಸಿ ಬಳಿ ಕುಳಿತುಕೊಂಡು 11 ಬಾರಿ ಈ ಮಂತ್ರವನ್ನು ಜಪ ಮಾಡಬೇಕು. ಮಂತ್ರ ಪಠಿಸಿದ ಮೇಲೆ ಮನಸ್ಸಿನ ಬೇಡಿಕೆಗಳನ್ನು ತುಳಸಿ ಬಳಿ ಬೇಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ಮನಸ್ಸಿನ ಬೇಡಿಕೆಗಳು ನೆರವೇರುತ್ತದೆ.

ಮಂತ್ರ :- ಮಹಾಪ್ರಸಾದ ಜನನಿ ಸರ್ವ ಸೌಭಾಗ್ಯ ವರ್ಧಿನಿ ಅಧಿ ವ್ಯಾಧಿಹರ ನಿತ್ಯಂ ತುಳಸಿ ತ್ವಂ ನಮೋಸ್ತುತೆ||

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: