ಮನೆಯನ್ನು ವಾಸ್ತು ಪ್ರಕಾರ ನಿರ್ಮಾಣ ಮಾಡಬೇಕು. ಇಲ್ಲದೆ ಹೋದರೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ಮನೆಯ ಉಳಿದ ಭಾಗಗಳಿಗಿಂತ ಅಡುಗೆ ಮನೆಯನ್ನು ಹೆಚ್ಚು ಪ್ರಮುಖವಾದ ಸ್ಥಳ ಎಂದು ಪರಿಗಣನೆ ಮಾಡಲಾಗಿದೆ.
ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯನ್ನು ನಿಯಮದ ಪ್ರಕಾರ ನಿರ್ಮಾಣ ಮಾಡಬೇಕು. ಆದ್ದರಿಂದ, ಯಾವುದೇ ರೀತಿಯ ತೊಂದರೆಗಳು ಬರುವುದಿಲ್ಲ ಎಂಬ ನಂಬಿಕೆಯಿದೆ. ಹಲವು ಜನರು ಅಡುಗೆ ಮನೆಯನ್ನು ಸೊಗಸಾಗಿ ಅಲಂಕಾರ ಮಾಡಿರುತ್ತಾರೆ. ಅಲ್ಲಿ ಎಲ್ಲಾ ರೀತಿಯ ಅಡುಗೆ ಮಾಡುವ ಸಾಮಾಗ್ರಿಗಳು, ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಇಟ್ಟಿರುವರು.
ಇನ್ನು, ಹಲವು ಜನರ ಅಡುಗೆ ಮನೆಯನ್ನು ತುಂಬ ಕೊಳಕಾಗಿ ಮತ್ತು ಅಸ್ತವ್ಯಸ್ತವಾಗಿ ಇಟ್ಟಿರುವರು. ಅಡುಗೆ ಸಾಮಾಗ್ರಿಗಳನ್ನು ವ್ಯವಸ್ಥಿತವಾಗಿ ಜೋಡಣೆ ಮಾಡದೆ, ಊಟ ಮಾಡಿದ ಮೇಲೆ ಆ ಪಾತ್ರೆಗಳನ್ನು ತೊಳೆಯದೆ ಹಾಗೆ ಇಟ್ಟಿರುವರು.ಇನ್ನು ಹಲವು ಮನೆಗಳಲ್ಲಿ, ಪಾತ್ರೆಗಳನ್ನು ತಲೆಕೆಳಗಾಗಿ ಇಲ್ಲವೇ ಸರಿಯಾದ ದಿಕ್ಕಿನಲ್ಲಿ ಪಾತ್ರೆಗಳನ್ನು ಇಟ್ಟಿರಿವುದಿಲ್ಲ. ಜನರು ಪಾತ್ರೆಗಳನ್ನು ತೊಳೆದ ಮೇಲೆ ಮತ್ತು ಬಳಕೆ ಮಾಡಿದ ಮೇಲೆ ತಲೆಕೆಳಗಾಗಿ ಇಡುತ್ತಾರೆ.
ಈ ರೀತಿ ಮಾಡುವುದರಿಂದ ನಕಾರಾತ್ಮಕ ಅಂಶಗಳನ್ನು ಬರುವುದರ ಜೊತೆಗೆ ಅದು ಅಶುಭ ಫಲಗಳನ್ನು ಕೊಡುತ್ತದೆ. ಪಾತ್ರೆಗಳನ್ನು ತಲೆಕೆಳಗಾಗಿ ಇಡುವುದರ ಪರಿಣಾಮ ಯಾವೆಲ್ಲ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಎಂದು ತಿಳಿಯೋಣ. ಯಾವ ಪಾತ್ರೆಗಳನ್ನು ಕೂಡ ತಲೆಕೆಳಗಾಗಿ ಇಡುವುದು ತಪ್ಪು. ರಾತ್ರಿ ಸಮಯದಲ್ಲಿ ಊಟ ಮಾಡಿದ ಮೇಲೆ ಪಾತ್ರೆಗಳನ್ನು ಸ್ವಚ್ಚ ಮಾಡದೆ ಹಾಗೇ ಇಡುವುದು ಒಳ್ಳೆಯದು ಅಲ್ಲ. ಇನ್ನು ಹಲವು ಪಾತ್ರೆಗಳನ್ನು ತಲೆಕೆಳಗಾಗಿ ಇಡುವುದು ತಪ್ಪು. ಕೆಲವು ಪಾತ್ರೆಗಳಿಗೆ ಇದು ಕಡ್ಡಾಯವಾಗಿ ಅನ್ವಯ ಆಗುತ್ತದೆ.
ರೊಟ್ಟಿ ಹೆಂಚು ( ಕಾವಲಿ ) :-ಶಾಸ್ತ್ರದ ಪ್ರಕಾರ, ರೊಟ್ಟಿ ಮಾಡಿದ ಮೇಲೆ ರೊಟ್ಟಿ ಕಾವಲಿಯನ್ನು ಎಂದಿಗೂ ತಲೆಕೆಳಗಾಗಿ ಇಡಬಾರದು ಮತ್ತು ಖಾಲಿಯಾದ ಕಾವಲಿಯನ್ನು ಒಲೆಯ ಮೇಲೆ ಬಿಡಬಾರದು.ಇದು, ಜೀವನದ ಮೇಲೆ ಅಶುಭ ಪ್ರಭಾವ ಬೀರುತ್ತದೆ. ಅಪ್ಪಿ ತಪ್ಪಿಯೂ ಕೂಡ ಈ ತಪ್ಪನ್ನು ಮಾಡಬಾರದು. ರೊಟ್ಟಿ ಅಥವಾ ಯಾವುದೇ ರೀತಿಯ ಆಹಾರವನ್ನು ತಯಾರಿಸಿದ ಮೇಲೆ ಆ ಪಾತ್ರೆಯನ್ನು ಉಲ್ಟಾ ಇಡಬಾರದು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಹಣ ಕಾಸಿನ ಸಮಸ್ಯೆ ಎದುರಾಗುತ್ತದೆ. ಆರ್ಥಿಕ ಸಂಕಷ್ಟ ಉಂಟಾಗುತ್ತದೆ. ಇನ್ನು ಸಾಲದ ಮೊತ್ತ ಬೆಳೆಯುತ್ತಾ ಹೋಗುತ್ತದೆ.
ಕಡಾಯಿ :-ಕಾವಲಿಯಂತೆ ಕಡಾಯಿಯನ್ನು ಸಹ ಯಾವತ್ತಿಗೂ ತಲೆಕೆಳಗಾಗಿ ಇಡಬಾರದು. ಶಾಸ್ತ್ರದ ಪ್ರಕಾರ, ಅಡುಗೆಮನೆಯಲ್ಲಿ ಬಾಣಲೆಯನ್ನು ತೊಳೆದ ಮೇಲೆ ತಲೆಕೆಳಗಾಗಿ ಇಡಬಾರದು. ಇದು ಮನೆಗೆ ಋಣಾತ್ಮಕ ಶಕ್ತಿಯನ್ನು ಆಹ್ವಾನಿಸುತ್ತದೆ. ಈ ಪಾತ್ರೆಗಳಿಂದ ಅಡುಗೆಯನ್ನು ಮಾಡಿದ ಮೇಲೆ ಸ್ವಚ್ಛ ಮಾಡಿ ಇಡಬೇಕು. ಇಲ್ಲದೆ ಹೋದರೆ ಬದುಕಿನಲ್ಲಿ ಬಡತನದ ತೊಂದರೆಗಳು ಉಂಟಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಈ ಎರಡೂ ಪಾತ್ರೆಗಳನ್ನು ತಲೆಕೆಳಗಾಗಿ ಇಡುವುದರ ಪರಿಣಾಮ ರಾಹು ಗ್ರಹದ ದೋಷ ಬರುತ್ತದೆ. ಈ ಕಾರಣದಿಂದ ಪಾತ್ರೆಗಳನ್ನು ಬಳಕೆ ಮಾಡಿದ ಮೇಲೆ ರಾತ್ರಿ ವೇಳೆಯಲ್ಲಿ ಅದನ್ನು ಶುಭ್ರ ಮಾಡಿ ಇಡುವುದು ಉತ್ತಮ. ಈ ಪಾತ್ರೆಯನ್ನು ಸ್ವಚ್ಚ ಮಾಡದೆ ಇಟ್ಟರೆ ಇಲ್ಲವೇ ತಲೆಕೆಳಗಾಗಿ ಇಟ್ಟರೆ ಪರಿವಾರದ ಜನರ ಪ್ರಗತಿಗೆ ಅಡ್ಡಿಯಾಗಿ ಪರಿಣಮಿಸಬಹುದು. ಮನೆಯಲ್ಲಿ ಅಪಶ್ರುತಿ ಮತ್ತು ಅಶಾಂತಿ ಕೂಡ ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ.
ಇನ್ನು ಪಾತ್ರೆಗಳನ್ನು ಯಾವ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದು ನೋಡೋಣ :-
ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ಜೋಡಿಸಿ ಇಡುವುದಕ್ಕೂ ಕೆಲವು ನಿಶ್ಚಿತ ದಿಕ್ಕು ಇದೆ. ಪಾತ್ರೆಗಳನ್ನು ಎಂದಿಗೂ ಪಶ್ಚಿಮ ದಿಕ್ಕಿನಲ್ಲಿ ಇಟ್ಟರೆ ಒಳ್ಳೆಯದು.
ಅದರಲ್ಲಿ ಹಿತ್ತಾಳೆ, ತಾಮ್ರ, ಉಕ್ಕು ಮತ್ತು ಕಂಚಿನ ಪಾತ್ರೆಗಳನ್ನು ಪಶ್ಚಿಮ ದಿಕ್ಕಿನಲ್ಲೇ ಇಡಬೇಕು ಮತ್ತು ಬೇರೆ ಯಾವುದೇ ದಿಕ್ಕಿನಲ್ಲಿ ಇಡುವುದು ಸರಿಯಲ್ಲ. ಇನ್ನು, ಬಿಸಿ ಕಾವಲಿಯ ಮೇಲೆ ಅಥವಾ ಇನ್ನಾವುದೇ ಅಡುಗೆ ತಯಾರಿಸುವ ಪಾತ್ರೆಗೆ ನೀರನ್ನು ಹಾಕಬಾರದು. ಈ ರೀತಿ ಮಾಡಿದ ಮೇಲೆ ಅದರಿಂದ ಹೊರಬರುವ ಹೊಗೆ ಮನೆಯೊಳಗೆ ಋಣಾತ್ಮಕ ಶಕ್ತಿಯನ್ನು ತರುತ್ತದೆ. ಬದುಕಿನಲ್ಲಿ ಬೇರೆ ಬೇರೆ ರೀತಿಯ ತೊಂದರೆಗಳು ಉಂಟಾಗಬಹುದು. ಪಾತ್ರೆಗಳನ್ನು ಉಲ್ಟಾ ಅಥವಾ ತಪ್ಪು ದಿಕ್ಕಿನಲ್ಲಿ ಇಟ್ಟರೆ ತಾಯಿ ಅನ್ನಪೂರ್ಣೇಶ್ವರಿ ದೇವಿಗೆ ಕೂಡ ಕೋಪ ಬರುತ್ತದೆ.
ಅಡುಗೆ ಮನೆಯಲ್ಲಿ ಪಾತ್ರೆಗೆ ಸಂಬಂಧ ಪಟ್ಟಂತೆ ಈ ತಪ್ಪುಗಳನ್ನು ಮಾಡಲೇಬಾರದು. ಈ ತಪ್ಪುಗಳನ್ನು ಮಾಡುವುದರಿಂದ ಮನೆಯಲ್ಲಿ ಋಣಾತ್ಮಕ ಅಂಶಗಳು ಹೆಚ್ಚಾಗಬಹುದು. ಹಣ ಕಾಸಿನ ತೊಂದರೆಗಳು ಕಾಣಿಸಿಕೊಳ್ಳುತ್ತವೆ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು