WhatsApp Group Join Now
Telegram Group Join Now

Spandana vijay Raghavendra Brother Rakshith Shivaram: ಸ್ನೇಹಿತರೆ, ಸ್ಪಂದನ ಎಂಬ ಸೌಮ್ಯ ಸ್ವಭಾವದ ಹುಡುಗಿಯನ್ನು ಭಗವಂತ ಬಹು ಬೇಗ ತನ್ನೆಡೆಗೆ ಕರೆದುಕೊಂಡು ಒಳ್ಳೆಯವರಿಗೆ ಈ ಪ್ರಪಂಚದಲ್ಲಿ ಕಾಲವಿಲ್ಲ ಎಂಬುದನ್ನು ಮತ್ತೊಮ್ಮೆ ಸಾಭೀತುಪಡಿಸಿಕೊಂಡುಬಿಟ್ಟ. ಹೃದಯ ಶ್ರೀಮಂತಿಕೆ ಉಳ್ಳುವಂತಹ ಚಿರು ಸರ್ಜಾ ಪುನೀತ್ ರಾಜಕುಮಾರ್ ಹಾಗೂ ಸ್ಪಂದನ ವಿಜಯ ರಾಘವೇಂದ್ರನಂತಹ ಅಪರೂಪದ ಕಲಾವಿದರನ್ನು ಕಳೆದುಕೊಂಡ ಕನ್ನಡ ಸಿನಿಮಾ ರಂಗ ಇಂದು ಅನಾಥವಾಗಿದೆ.

ಎಲ್ಲರೊಂದಿಗೆ ಬಹಳಾನೇ ಲವಲವಿಕೆಯಿಂದ ಓಡಾಡಿಕೊಂಡಿದ್ದಂತಹ ಸ್ಪಂದನ ಸ್ನೇಹಿತರೊಂದಿಗೆ ಕಳೆದ ವಾರ ಥೈಲ್ಯಾಂಡ್ ಪ್ರವಾಸಕ್ಕೆ ಹೋದಾಗ ಲಘು ಹೃದಯಘಾತ ಉಂಟಾಗಿ ಮಲಗಿದ್ದಾಗಲೇ ಪ್ರಾಣ ಪಕ್ಷಿ ಹಾರಿಹೋಗಿದೆ. ಸ್ಪಂದನ ರವರ ಸಾವು ಗೊತ್ತು ಗುರಿ ಇಲ್ಲದಂತಹ ನಮ್ಮಂತವರಿಗೆ ಅಘಾತವಾದ ನೋವು ತಂದಿರುವಾಗ ಅವರ ಪ್ರೀತಿಯ ಪತಿ ವಿಜಯ್ ರಾಘವೇಂದ್ರ ಹಾಗೂ ಮಗ ಶೌರ್ಯ ಮತ್ತು ಕುಟುಂಬಸ್ಥರಿಗೆ ಎಷ್ಟರ ಮಟ್ಟದ ದುಃಖವನ್ನು ನೀಡಿರಬಹುದು?

ಸ್ಪಂದನರವರ ಅಗಲಿಕೆಯ ಸುದ್ದಿ ಹೊರಬಂದ ದಿನದಿಂದ ಹಿಡಿದು ಇಂದಿನ ವರೆಗೂ ಸೋಶಿಯಲ್ ಮೀಡಿಯಾದಲ್ಲಿ ಸ್ಪಂದನ ಹಾಗೂ ಆಕೆಯ ಕುರಿತಾದ ಕೆಲ ಮಾಹಿತಿಗಳು ಭಾರಿ ವೈರಲ್ ಆಗುತ್ತಿದ್ದು, ನಗುವಿನ ರಾಜಕುಮಾರಿಯನ್ನು ಬಹು ಬೇಗ ಕರೆದುಕೊಂಡಂತಹ ಭಗವಂತನಿಗೆ ನೆಟ್ಟಿಗರು ಶಾಪ ಹಾಕ ತೊಡಗಿದ್ದಾರೆ. ಅದರಂತೆ ಸದ್ಯ ಸ್ಪಂದನ ತನ್ನ ಅಣ್ಣನೊಂದಿಗೆ ಕಾಲ ಕಳೆದ ಸುಮಧುರ ಕ್ಷಣಗಳ ಕೆಲ ಫೋಟೋಗಳು ಭಾರಿ ವೈರಲ್ ಆಗುತ್ತಿದ್ದು,

ಅಣ್ಣ ತಂಗಿಯರ ಬಾಂಧವ್ಯ ಕಂಡು ನೆಟ್ಟಿಗರು ಮರುಗುತ್ತಿದ್ದಾರೆ. ಹೌದು ಗೆಳೆಯರೇ ಸ್ಪಂದನ ಅವರಿಗೆ ರಕ್ಷಕ್ ಶಿವರಾಂ ಎಂಬ ಅಣ್ಣನಿದ್ದು ಬಾಲ್ಯದಿಂದಲೂ ಅಣ್ಣನಿಗೆ ತಂಗಿಯ ಮೇಲೆ ಅಪಾರವಾದ ಪ್ರೀತಿ. ತಂದೆ ಶಿವರಾಮ್ ಅವರು ಡ್ಯೂಟಿ ನಿಮಿತ್ತ ಸ್ಟೇಷನ್ನಲ್ಲಿ ಉಳಿದುಕೊಳ್ಳುತ್ತಿದ್ದಂತಹ ದಿನಗಳಲ್ಲೆಲ್ಲ ಸ್ಪಂದನ ಅವರನ್ನು ರಕ್ಷಕವರೇ ಜೋಪಾನ ಮಾಡುತ್ತಿದ್ದರಂತೆ ಒಂದಲ್ಲ ಒಂದು ಕಾರಣದಿಂದ ಈ ಅಣ್ಣ ತಂಗಿಯರು ಏನಾದರೂ ಕಿತ್ತಾಡಿಕೊಂಡರೆ

ಅದನ್ನು ತಮ್ಮ ತಂದೆ ಬರುವವರೆಗೂ ರಿವೆಂಜ್ ತೆಗೆದುಕೊಳ್ಳದೆ ಕಾದಿಟ್ಟುಕೊಂಡು ತಂದೆ ಬಂದ ಕೂಡಲೇ ಸ್ಪಂದನ ಅಣ್ಣ ತನಗೆ ಹೊಡೆದದ್ದನ್ನೆಲ್ಲ ಇಂಚು ಇಂಚು ಬಿಡದೆ ಹೇಳುತ್ತಿದ್ದರು. ಈ ಕಾರಣದಿಂದ ಸ್ಪಂದನ ಅವರನ್ನು ಮನೆಯಲ್ಲಿ ಚಾಡಿ ಬುರುಕಿ ಎಂದು ಹೀಯಾಳಿಸುತ್ತಿದ್ದರಂತೆ. ಹೀಗೆ ಬೆಳೆದು ದೊಡ್ಡವರಾದ ಮೇಲು ಅಷ್ಟೇ ಪ್ರೀತಿ ಒಲವನ್ನು ಬೆಳೆಸಿಕೊಂಡಿದ್ದ ಈ ಅಣ್ಣ ತಂಗಿಯರು ದೂರಾಗಿರುವುದನ್ನು ನೋಡಲಾಗುತ್ತಿಲ್ಲ. ಇದನ್ನೂ ಓದಿ Kannada Actor Prem: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಪ್ರೇಮ್ ದಂಪತಿಗಳು!

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: