Singer Hanumantha: ನಾನು ಮದುವೆಯಾಗಬೇಕು ಅಂದ್ರೆ ಈ ನಟಿ ತರಾನೇ ಹುಡುಗಿ ಸಿಗಬೇಕು ಎಂದ ಕುರಿಗಾಹಿ ಹನುಮಂತಣ್ಣ!

0

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಆಂಕರ್ ಅನುಶ್ರೀ(Anushree) ಅವರ ನೇತೃತ್ವದಲ್ಲಿ ಮೂಡಿ ಬರುವಂತಹ ಸರಿಗಮಪ ಕಾರ್ಯಕ್ರಮವು ಒಂದಲ್ಲ ಒಂದು ವಿಭಿನ್ನವಾದ ಪ್ರತಿಭೆಯನ್ನು ಕರ್ನಾಟಕಕ್ಕೆ ಪರಿಚಯಿಸುತ್ತಲೆ ಇರುತ್ತದೆ. ಅದರಂತೆ ಸರಿಗಮಪ ಸೀಸನ್ 15 (Saregamapa season 15)ರಲ್ಲಿ ತನ್ನ ಮುಗ್ಧತೆ ಹಾಗೂ ಹಾವೇರಿ (Haveri) ಸೊಗಡಿನ ಜವಾರಿ ಹಾಡಿನ ಮೂಲಕ ಕನ್ನಡಿಗರ ಮನಸನ್ನು ಗೆಲ್ಲುವಲ್ಲಿ ಯಶಸ್ವಿ ಆಗಿದ್ದಂತಹ ಹನುಮಂತಣ್ಣ

ತಮ್ಮ ಗ್ರಾಮದಲ್ಲಿ ಫೇಮಸ್ ಆಗಿರುವಂತಹ ಅರ್ಥಗರ್ಭಿತವಾದ ಹಾಡುಗಳನ್ನು ಹಳ್ಳಿ ಭಾಷೆಯಲ್ಲಿ ಹಾಡುತ್ತ ಅಸಂಖ್ಯಾತ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದರು. ಹನುಮಂತನ(Hanumanth) ನಡವಳಿಕೆಯನ್ನು ನೋಡುವ ಸಲುವಾಗಿಯೇ ಅದೆಷ್ಟೋ ಜನ ಸರಿಗಮಪ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಂತಹ ಉದಾಹರಣೆಯೂ ಇದೆ. ಇದಕ್ಕಾಗಿ ಸಾಕಷ್ಟು ಕಾರ್ಯಕ್ರಮಗಳಲ್ಲಿ ಹನುಮಂತಣ್ಣನಿಗೆ ಅವಕಾಶಗಳನ್ನು ಒದಗಿ ಬಂದವು,

ಹಾಗೆ ಡಾನ್ಸರ್ ಆಗಿ ಗುರುತಿಸಿಕೊಂಡಂತಹ ಹನುಮಂತ ಈಗ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದ ಮೂಲಕ ಜನರ ಮನಸ್ಸನ್ನು ಸೆಳೆಯುತ್ತಿದ್ದಾರೆ. ಈ ವೇದಿಕೆಯ ಮೇಲೆ ಮಾತನಾಡುವಾಗ ತಮ್ಮಗೆ ಯಾವ ರೀತಿ ಹುಡುಗಿ ಬೇಕೆಂಬುದನ್ನು ರಿವೀಲ್ ಮಾಡಿರುವ ಹನುಮಂತಣ್ಣ ನಟಿ ರಚಿತಾ ರಾಮ್ ಅವರ ಹೆಸರೇಳಿದ್ದಾರೆ. ಭರ್ಜರಿ ಬ್ಯಾಚುಲರ್ಸ್(Barjari Bachelor) ಕಾರ್ಯಕ್ರಮದಲ್ಲಿ ಜನರಿಗೆ ಜಬರ್ದಸ್ತ್ ಎಂಟರ್ಟೈನ್ಮೆಂಟ್ ಕೊಡುವ

ಸಲುವಾಗಿ ವೀಕೆಂಡ್ ನಲ್ಲಿ ಕೆಜಿಎಫ್ ರಾಕಿಬಾಯ್(Rakhi Bhai) ರೀತಿ ಗಡ್ಡ ಬಿಟ್ಟು ಕಪ್ಪು ಬಣ್ಣದ ಬಟ್ಟೆಯನ್ನು ಧರಿಸಿ ಎಂಟ್ರಿ ಕೊಟ್ಟ ಹನುಮಂತಣ್ಣನಿಗೆ ಮಾತಿನ ಮಲ್ಲ ಎಂದು ಕರೆಯಲ್ಪಡುವ ಆಂಕರ್ ಅಕುಲ್(Akul) ಕಾಲೆಳೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಿನ್ನ ಮದುವೆ ವಿಚಾರ ತುಂಬಾ ಟ್ರೆಂಡ್ ಆಗುತ್ತಿದೆ ಮದುವೆ ಮಾಡಿಕೊಳ್ಳಲು ಯಾವ ರೀತಿ ಹುಡುಗಿ ಬೇಕು ಹೇಳು? ಎನ್ನುವ ಕೇಳಿದಾಗ ನನಗೆ ರಚಿತಾ ರಾಮ್(Rachitha Ram) ತರ ಇರುವ ಹುಡುಗಿ ಸಿಕ್ಕರೆ ಸಾಕು ಎಂದು ಹೇಳಿದ್ದಾನೆ. ಇದನ್ನು ಕೇಳಿದಂತಹ ರಚ್ಚು ಖುದ್ದು ಸ್ಮೈಲ್ ಮಾಡಿ ಸೈಲೆಂಟ್ ಆದಾಗ ನಿಮ್ಮ ರೀತಿ ಹುಡುಗಿ ಸಿಕ್ಕಿದರೆ ಸಾಕು ಎಂದು ನಮ್ಮ ಜವಾರಿ ಹುಡುಗ ಹನುಮಂತ ಹೇಳಿದ್ದು ಇದನ್ನು ಕೇಳಿದಂತಹ ಹಲವಾರು ಅಚ್ಚರಿಗೊಳಗಾಗಿದ್ದಾರೆ.

ಇದನ್ನೂ ಓದಿ ಶೃತಿ ಹಾಗೂ ಸುಧಾರಣೆ ಮಕ್ಕಳ ಜೊತೆ ಗೋಲ್ಡನ್ ಸ್ಟಾರ್ ಗಣೇಶ್ ಅಪರೂಪದ ಫೋಟೋಸ್

Leave A Reply

Your email address will not be published.

error: Content is protected !!
Footer code: