WhatsApp Group Join Now
Telegram Group Join Now

ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಮಹತ್ತರವಾದ ಸ್ಥಾನವನ್ನು ನೀಡಲಾಗಿದೆ ಅದರಂತೆ ಬಿಲ್ವಪತ್ರೆಗೂ ಕೂಡ ಅಷ್ಟೇ ಶ್ರೇಷ್ಠವಾಗಿದೆ ಶಿವನಿಗೆ ಪ್ರಿಯವಾದ ಎಲೆಯೆಂದರೆ ಬಿಲ್ವಪತ್ರೆ ಇದು ಶಿವನ ಪೂಜೆಯಲ್ಲಿ ಮಾತ್ರವಲ್ಲದೆ ಆರೋಗ್ಯಕ್ಕೂ ಕೂಡ ಅಷ್ಟೇ ಒಳ್ಳೆಯದು ಬಿಲ್ವಪತ್ರೆ ಇಲ್ಲದೆ ಶಿವನ ಪೂಜೆ ಅಪೂರ್ಣ ಎನ್ನಲಾಗುತ್ತದೆ ಬಿಲ್ವಪತ್ರೆಯಲ್ಲಿ ಅನೇಕ ಔಷಧೀಯ ಗುಣವನ್ನು ಹೊಂದಿದೆ ಪುರಾಣಗಳ ಪ್ರಕಾರ ಶಿವನು ವಿಷವನ್ನು ಸೇವಿಸಿದಾಗ ಶಿವನಿಗೆ ಗಂಟಲು ಉರಿಯುತ್ತಿತ್ತು ಹಾಗೆಯೇ ಬಿಲ್ವಪತ್ರೆ ಎಲೆಯಲ್ಲಿ ವಿಷವನ್ನು ಹೊರಹಾಕುವ ಗುಣ ಇರುವ ಕಾರಣ ಮತ್ತು ಬಿಲ್ವಪತ್ರೆ ಎಲೆಯು ತಂಪಿನ ಗುಣ ಹೊಂದಿದೆ

ಶಿವನು ಸೇವಿಸಿದ್ದನು ಇದರಿಂದಾಗಿ ಶಿವನಿಗೆ ಬಿಲ್ವಪತ್ರೆ ಎಂದರೆ ತುಂಬಾ ಪ್ರಿಯ ಹಾಗಾಗಿ ಶಿವನ ಪೂಜೆಯನ್ನು ಬಿಲ್ವಪತ್ರೆ ಇಲ್ಲದೆ ಶಿವನ ಪೂಜೆಯನ್ನು ಮಾಡುವುದು ಇಲ್ಲ .ಬಿಲ್ವಪತ್ರೆಯಲ್ಲಿ ಅನೇಕ ರೋಗಗಳ ನಿವಾರಕ ಶಕ್ತಿ ಇರುತ್ತದೆ ಪುರಾಣದ ಪ್ರಕಾರ ಬಿಲ್ವಪತ್ರೆಯಿಂದ ಶಿವನನ್ನು ಪೂಜಿಸಿದರೆ ಶಿವನು ಒಲಿಯುವನೆಂಬ ನಂಬಿಕೆಯಿದೆ ನಾವು ಈ ಲೇಖನದ ಮೂಲಕ ಧನ ಸಂಪತ್ತನ್ನು ವೃದ್ಧಿಸುವ ಬಿಲ್ವಪತ್ರೆಯ ಬಗ್ಗೆ ತಿಳಿದುಕೊಳ್ಳೋಣ.

ತುಳಸಿ ಗಿಡಕ್ಕೆ ಪವಿತ್ರ ಸ್ಥಾನವಿದೆ ಭಗವಂತ ವಿಷ್ಣುವಿಗೆ ತುಳಸಿಯನ್ನು ಅರ್ಪಿಸಲಾಗುತ್ತದೆ ಹಾಗೆಯೇ ಶಿವನಿಗೆ ತುಳಸಿಯನ್ನು ಅರ್ಪಿಸಬಾರದು ತುಳಸಿ ಗಿಡಕ್ಕೆ ನೀರನ್ನು ಹಾಕುವುದರಿಂದ ಮತ್ತು ದೀಪ ಹಚ್ಚಿ ಪೂಜೆ ಮಾಡುವುದರಿಂದ ಮನೆ ಸಂವೃದ್ದಿ ಕಂಡು ಬರುತ್ತದೆ ಇಷ್ಟಾರ್ಥ ಸಿದ್ದಿ ಆಗುತ್ತದೆ ಅದರಂತೆಯೇ ಬಿಲ್ವಪತ್ರೆ ಮರವು ಸಹ ತುಂಬಾ ವಿಶೇಷತೆಯನ್ನು ಹೊಂದಿದೆ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಮನಸ್ಸಿನ ಎಲ್ಲ ಇಚ್ಛೆಗಳನ್ನು ಸಿದ್ದಿ ಆಗುತ್ತದೆ.

ಬಿಲ್ವಪತ್ರೆ ಮರ ಎಲ್ಲರ ಮನೆಯಲ್ಲಿ ಇರುವುದು ಇಲ್ಲ ಈ ಮರ ಇದ್ದರೆ ತುಂಬಾ ಅನುಕೂಲಕರವಾಗುತ್ತದೆ ಈ ಮರದ ಬಗ್ಗೆ ಶಿವ ಪುರಾಣದಲ್ಲಿ ಸಹ ಉಲ್ಲೇಖ ಇರುತ್ತದೆ ಬಿಲ್ವಪತ್ರೆ ಎಲೆ ಶಿವನಿಗೆ ಅತಿ ಪ್ರಿಯವಾದ ಎಲೆಯಾಗಿದೆ ರವಿವಾರದ ದಿನ ತುಳಸಿ ಗಿಡಕ್ಕೆ ನೀರನ್ನು ಹಾಕಬಾರದು ಹಾಗೂ ಅದರ ಎಲೆಯನ್ನು ಸಹ ತೆಗೆಯಬಾರದು ಇದೆ ಪ್ರಕಾರವಾಗಿ ಬಿಲ್ವಪತ್ರೆ ಸಸ್ಯಕ್ಕೆ ಕೆಲವು ಕ್ರಮಗಳು ಇರುತ್ತದೆ ಶಿವನಿಗೆ ಬಿಲ್ವಪತ್ರೆ ಎಲೆಯನ್ನು ಅರ್ಪಿಸಬಹುದಾಗಿದೆ ಹಾಗೆಯೇ ಪ್ರತಿದಿನ ಶಿವನಿಗೆ ಅರ್ಪಿಸಬಹುದಾಗಿದೆ.

ಮನೆಯಲ್ಲಿ ಇಲ್ಲವಾದರೂ ಬೇರೆ ಕಡೆಯಿಂದ ತಂದು ತೊಳೆದು ಉಪಯೋಗಿಸಬಹುದು ಒಣಗುವ ವರೆಗೂ ಸಹ ಬಿಲ್ವಪತ್ರೆ ಎಲೆಯನ್ನು ತೊಳೆದು ದೇವರಿಗೆ ಅರ್ಪಿಸಬಹುದಾಗಿದೆ ಬಿಲ್ವಪತ್ರೆ ಎಲೆಯನ್ನು ಅಷ್ಟಮಿ ಹುಣ್ಣಿಮೆ ಅಮಾವಾಸ್ಯೆ ಹಾಗೂ ಸೋಮವಾರ ದಿನದಂದು ಕತ್ತರಿಸಬಾರದು ಒಂದು ವೇಳೆ ಸೋಮವಾರ ಶಿವನಿಗೆ ಪೂಜೆ ಮಾಡಬೇಕಾದರೆ ರವಿವಾರದಂದು ಕತ್ತರಿಸಬಹುದಾಗಿದೆ ಈ ರೀತಿಯಾಗಿ ಮಾಡುವುದರಿಂದ ಮನಸ್ಸಿನ ಇಚ್ಚೆಗಳು ಬಹು ಬೇಗನೆ ಈಡೇರುತ್ತದೆ ಹಣಕಾಸಿನ ಸಮಸ್ಯೆಗಳು ದೂರ ಆಗುತ್ತದೆ ಅಷ್ಟೇ ಅಲ್ಲದೆ ಪಾಪಗಳಿಂದ ಸಹ ಮುಕ್ತಿ ಸಿಗುತ್ತದೆ ಪ್ರತಿಯೊಬ್ಬರ ಮನೆಯಲ್ಲಿ ಬಿಲ್ವಪತ್ರೆ ಸಸ್ಯ ಇದ್ದರೆ ತುಂಬಾ ಒಳ್ಳೆಯದು

ಮನೆಯಲ್ಲಿ ಬಿಲ್ವಪತ್ರೆ ಗಿಡವನ್ನು ನೆಡುವುದರಿಂದ ಮನೆಯ ಸದಸ್ಯರು ಎಲ್ಲರೂ ಜೀವನದಲ್ಲಿ ಯಶಸ್ಸು ಆಗುತ್ತಾರೆ ಸಮಾಜದಲ್ಲಿ ಗೌರವ ಘನತೆಯನ್ನು ಪಡೆದುಕೊಳ್ಳುತ್ತಾರೆ ಇದರಿಂದಾಗಿ ಹಲವಾರು ಪಾಪಗಳಿಂದ ಮುಕ್ತಿ ಸಿಗುತ್ತದೆ ಯಾವ ಸ್ಥಾನದಲ್ಲಿ ಬಿಲ್ವಪತ್ರೆ ಗಿಡ ಇರುತ್ತದೆಯೋ ಅಲ್ಲಿ ಕಾಶಿ ತೀರ್ಥ ಕ್ಕೆ ಸಮಾನ ಆಗುತ್ತದೆ. ಮನೆಯಲ್ಲಿ ಬಿಲ್ವಪತ್ರೆ ಗಿಡ ಇರುವುದರಿಂದ ಹಲವಾರು ತಂತ್ರ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ ಇಡೀ ಮನೆಯೂ ಕೆಟ್ಟ ದೃಷ್ಟಿಯಿಂದ ದೂರ ಇರಲು ಸಾಧ್ಯ ಆಗುತ್ತದೆ

ಈ ಗಿಡವನ್ನು ಮನೆಯ ಉತ್ತರ ಹಾಗೂ ಪಶ್ಚಿಮ ದಿಕ್ಕಿನಲ್ಲಿ ನೆಟ್ಟರೆ ಸಮಾಜದಲ್ಲಿ ಗೌರವ ಸಿಗುತ್ತದೆ ಯಶಸ್ಸಿನ ಪ್ರಾಪ್ತಿ ಆಗುತ್ತದೆ ದಕ್ಷಿಣ ಮತ್ತು ಪೂರ್ವ ದಿಕ್ಕಿನಲ್ಲಿ ನೆಟ್ಟರೆ ಸುಖ ಶಾಂತಿ ಹೆಚ್ಚಾಗುತ್ತದೆ ಆರ್ಥಿಕ ಸಮಸ್ಯೆಯೂ ದೂರ ಆಗುತ್ತದೆ ಹಾಗೆಯೇ ಮನೆಯ ಮಧ್ಯ ಭಾಗದಲ್ಲಿ ನೆಟ್ಟರೆ ಎಲ್ಲ ಪ್ರಕಾರದ ಸುಖದ ಪ್ರಾಪ್ತಿ ಆಗುತ್ತದೆ ಹೀಗೆ ಬಿಲ್ವಪತ್ರೆಯು ಪೂಜೆ ಮಾತ್ರ ಸೀಮಿತ ಆಗದೆ ಮನೆಯಲ್ಲಿ ಸುಖ ಸಂವೃದ್ದಿಯನ್ನು ಹೆಚ್ವಿಸಲು ಸಾಧ್ಯ ಆಗುತ್ತದೆ ಬಿಲ್ವಪತ್ರೆಗೆ ತುಳಸಿ ಅಷ್ಟೇ ಮಹತ್ವವನ್ನು ನೀಡಲಾಗುತ್ತದೆ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: