ಸಾಲಮುಕ್ತ ಮಂತ್ರ: ಈ ಮಂತ್ರ ಓದಿದ್ರೆ ಕೆಲವೇ ದಿನದಲ್ಲಿ ಸಾಲದಿಂದ ಮುಕ್ತರಾಗುತ್ತೀರಿ

0

ಸಾಲದಿಂದ ಹೊರ ಬರಲು ಯಾರಿಗೆ ತಾನೆ ಇಷ್ಟ ಇರುವುದಿಲ್ಲ. ಇನ್ನು 2024ರ ಹೊಸ ವರ್ಷದ ಪ್ರಾರಂಭದಿಂದ ಕಾಲ ಭೈರವನ ಮಂತ್ರವನ್ನು ಪಠಿಸಿ ಹೆಚ್ಚಿನ ಶ್ರದ್ಧೆ ಮತ್ತು ಭಕ್ತಿಯಿಂದ ಮನಸನ್ನು ಒಂದು ಕಡೆ ತಂದು ಏಕಾಗ್ರತೆಯಿಂದ ಪೂಜೆ ಸಲ್ಲಿಸಿ ಶುದ್ಧ ಮನಸ್ಸಿನಿಂದ ಮಂತ್ರ ಹೇಳಿದರೆ ಸಾಲದಿಂದ ಮುಕ್ತಿ ದೊರಕುವುದು. ಸಾಲದ ದೆಸೆಯಿಂದ 2023ರಲ್ಲಿ ಗಂಡಾಂತರ ಅನುಭವಿಸಿದ್ದರೆ ಖಂಡಿತ ಅದಕ್ಕೆ ಪರಿಹಾರ ದೊರಕುವುದು ಆದರೆ, ನಂಬಿಕೆ ಕೂಡ ಮುಖವಾಗಿ ಇರಬೇಕಾಗುತ್ತದೆ.

ಮನುಷ್ಯ ಜೀವನದಲ್ಲಿ ಕಷ್ಟಗಳು ಸರ್ವೇ ಸಾಮಾನ್ಯ, ಒಳಿತು ಕೆಡುಕುಗಳ ಏನೇ ಬಂದರೂ ಅದನ್ನು ಎದುರಿಸಿ ನಿಲ್ಲುವುದು ಮಾನವ ಗುಣ. ಇನ್ನು ಕಷ್ಟ ಕಾರ್ಪಣ್ಯಗಳನ್ನು ನಮಗೆ ಎದುರಿಸಿ ನಿಲ್ಲಲು ನಾವು ಅಸಮರ್ಥರಾದಾಗ ನಾವು ದೇವರೇ ದಿಕ್ಕು ಎಂದು ಅವನ ಮೋರೆ ಹೋಗಿ ಮತ್ತು ಇದನ್ನೆಲ್ಲ ಎದುರಿಸಲು ಶಕ್ತಿ ಮತ್ತು ಆತ್ಮಸ್ಥೈರ್ಯ ನೀಡು ಎಂದು ಬೇಡಿಕೆ ಇಡುತ್ತೇವೆ.

ಸಾಲ ಎಂದಾಗ ಯಾವುದೇ ಸಂಬಂಧಕರು, ಸ್ನೇಹಿತರ ನೆರವು ಸಿಗುವುದಿಲ್ಲ ಇದು ಮನುಷ್ಯರನ್ನು ಮಾನಸಿಕ ಮತ್ತು ದೈಹಿಕವಾಗಿ ಕುಗ್ಗಿಸುತ್ತದೆ. ದೇವರ ಅನುಗ್ರಹ ಪಡೆದರೆ ಕಗ್ಗಲ್ಲಿನಂತೆ ಇರುವ ಸಮಸ್ಯೆಗಳು ಮಂಜಿನಂತೆ ಕರಗಿ ನೀರಾಗಿ ಹೋಗುತ್ತವೆ. ಮಾಡುವ ವೃತ್ತಿ, ವ್ಯಾಪಾರ ಮತ್ತು ವ್ಯವಹಾರದಲ್ಲಿ ಪ್ರಗತಿ ಸಾಧನೆ ಮಾಡಿದರೆ ಮಾತ್ರ ಸಾಲದಿಂದ ಹೊರ ಬರಲು ಸಾಧ್ಯ.

ದೇವರ ಕೃಪೆ ಸಿಗಬೇಕು ಎಂದರೆ ಆದು ಶುದ್ಧ ಮನಸ್ಸಿನ ಭಕ್ತಿ, ಮಂತ್ರ ಹೇಳುವುದು, ಪೂಜೆ ಮತ್ತು ಪುನಸ್ಕಾರ ಮಾಡುವುದರಿಂದ ಒಳ್ಳೆಯ ಬೆಳವಣಿಗೆ ಕಾಣಬಹುದು.
ಅದೃಷ್ಟ ಯಾವುದಾದ್ರೂ ಒಂದು ರೀತಿಯಲ್ಲಿ ಪ್ರಾಪ್ತಿಯಾಗುತ್ತದೆ ಆದು ಕೇವಲ ದೇವರ ಸಕಾರಾತ್ಮಕ ಮತ್ತು ಅಧ್ಯಾತ್ಮದ ಶಕ್ತಿಯಿಂದ ಮಾತ್ರ ಸಾದ್ಯ.

ಆರೋಗ್ಯ ಸಮಸ್ಯೆ, ಋಣ ಭಾದೆ ಕಾಡುತ್ತಿದ್ದರೆ ಅದಕ್ಕೆ ಹೆಚ್ಚಿನ ಪರಿಹಾರ ಈ ಕಾಲ ಭೈರವನ ಮಂತ್ರವನ್ನು ಜಪಿಸುವುದರಿಂದ ಸಿಗುತ್ತದೆ. ಜೊತೆಗೆ ಮನೆಯಲ್ಲಿ ಏನಾದರೂ ಋಣಾತ್ಮಕ ಅಂಶಗಳು ಇದ್ದರೆ ಅದಕ್ಕೆ ಮುಕ್ತಿ ದೊರಕುವುದು. ಒಳ್ಳೆಯ ಗಳಿಗೆ ಹತ್ತಿರವಾಗಿ ಕೆಟ್ಟ ಗಳಿಗೆ ದೂರ ಆಗುವುದು.

ಕಾಲ ಭೈರವನ ಮಂತ್ರವನ್ನು 108 ಬಾರಿ ಜಪಿಸುವುದರಿಂದ ಸಕಲ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಹಣ ಕಾಸು ಮತ್ತು ಧಾನ್ಯ ಸಿದ್ದಿ ಆಗುವ ಸಾಧ್ಯತೆ ಇದೆ. ಇನ್ನು ಜಪ ಮಾಡುವ ವಿಧಾನ ಎಂದರೆ. ಒಂದು ಶುಭ್ರವಾದ ಬಿಳಿಯ ಹಾಳೆ ತೆಗೆದುಕೊಂಡು ಅದರ ಮೇಲೆ ಮಂತ್ರವನ್ನು ಸೀಸೆಯ ಸಹಾಯದಿಂದ ಬರೆದುಕೊಂಡು. ಅದರ ಮೇಲೆ ಬಿಳಿ ಸಾಸಿವೆ, ಅರಿಶಿಣ, ಕುಂಕುಮ, ಹೂವು ಮತ್ತು ಅಕ್ಷತೆ ಹಾಕಿ ಪೂಜೆ ಸಲ್ಲಿಸಬೇಕು.

ಮನಸಲ್ಲಿ ಒಂದು ಸಂಕಲ್ಪ ಮಾಡಿಕೊಂಡು. ಮನಸಲ್ಲಿ ಏಕಾಗ್ರತೆ ಮತ್ತು ಯಾವುದೇ ಸದ್ದು ಗದ್ದಲ ಇಲ್ಲದ ಪ್ರಶಾಂತತೆ ಮತ್ತು ಕ್ಲೀನ್ ಇರುವ ಜಾಗದಲ್ಲಿ ಚಕಳಂ ಬಕಳಂ ಹಾಕಿಕೊಂಡು ಕುಳಿತು 108 ಬಾರಿ ಜಪಿಸಬೇಕು. ಒಂದು ಮಂಡಲ ಪೂರ್ಣ ಆಗುವುದರ ಒಳಗೆ ನಿಮ್ಗೆ ಫಲಿತಾಂಶ ಗೋಚರ ಆಗುತ್ತದೆ.

ಯಾವುದಾದರೂ ಒಂದು ರೂಪದಲ್ಲಿ ಹಣ ಬಂದು ಕೈ ಸೇರುವಂತೆ ದೇವರು ವರ ದಾಯ ಪಾಲಿಸುತ್ತಾನೆ. ಅನಿರೀಕ್ಷಿತ ಧನ ಪ್ರಾಪ್ತಿ ಅಗಿ ಎಲ್ಲಾ ಸಂಕಷ್ಟಗಳು ದೂರ ಆಗುತ್ತವೆ. ದಿನ ಕಳೆದಂತೆ ಸಾಲದ ಭಾರ ದೂರ ಆಗುತ್ತದೆ. ಇನ್ನು ಆ ಮಂತ್ರ ಯಾವುದು ಎಂದು ತಿಳಿಯೋಣ.

ಮಂತ್ರ: ಓಂ ನಮೋ ಭಗವತೇ ಸ್ವರ್ಣಕರ್ಷಣಾಯ ಧನ ಧಾನ್ಯಂ ವೃದ್ಧಿ ಕರಾಯ
ಶೀಘ್ರ ಧನಧಾನ್ಯಂ ಸ್ವರ್ಣಂ ದೇಹಿ ದೇಹಿ ದಸ್ಯ ದಸ್ಯ ಕುರು ಕುರು ಸ್ವಾಹ.
ಕಾಲ ಭೈರವನ ಮಂತ್ರವನ್ನು ಪ್ರತಿನಿತ್ಯ ಬೆಳಿಗ್ಗೆ ಅಥವಾ ಸಂಜೆ ಪಟನೆ ಮಾಡಿ ನಿಮ್ಮ ಸಾಲದ ಭಾರ ದಿನ ಕಳೆದಂತೆ ಕಡಿಮೆ ಆಗುತ್ತಾ ಹೋಗುತ್ತೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: