ನೀವು ಶುದ್ಧ ಮನಸ್ಸಿನಿಂದ ಬೇಡಿಕೊಂಡರೆ ತಕ್ಷಣ ಆಂಜನೇಯ ಸ್ವಾಮಿಯ ಕಲ್ಲು ತಿರುಗುತ್ತೆ ನಿಮ್ಮ ಕಣ್ಣ ಮುಂದೆ ನಡೆಯುತ್ತೆ ಪವಾಡ

0

Anjaneya swami temple Bengalore: ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಆಂಜನೇಯ ಸ್ವಾಮಿಯ ದೇವಸ್ಥಾನವಿದೆ. ಭಾರತ ದೇಶದಲ್ಲಿ ಇನ್ನುವರೆಗೂ ಆಂಜನೇಯ ಸ್ವಾಮಿಯ ದೇವಸ್ಥಾನ ಎಷ್ಟಿದೆ ಎಂದು ಕಂಡುಹಿಡಿಯಲು ಯಾರಿಂದಲೂ ಸಾಧ್ಯವಾಗಿಲ್ಲ ಕೇವಲ ಭಾರತ ದೇಶವಲ್ಲದೇ ವಿದೇಶದಲ್ಲೂ ಕೂಡ ಲಕ್ಷಾಂತರ ಆಂಜನೇಯ ಸ್ವಾಮಿಯ ದೇವಸ್ಥಾನಗಳನ್ನು ನಾವು ನೋಡಬಹುದು.

ಹನುಮಂತ ದೇವರ ದೇವಸ್ಥಾನವನ್ನು ಭಾರತ ದೇಶದಲ್ಲಿ uncountable temple ಎಂದೂ ಘೋಷಣೆ ಮಾಡಲಾಗಿದೆ. ವಿಶ್ವದಲ್ಲಿ ಅತಿ ಹೆಚ್ಚು ಭಕ್ತಾದಿಗಳನ್ನು ಹೊಂದಿರುವ ದೇವರು ಎಂದರೆ ಅದು ಆಂಜನೇಯ ಸ್ವಾಮಿ ಅಷ್ಟೇ ಅಲ್ಲದೆ ಅತಿ ಹೆಚ್ಚು ಪವಾಡಗಳು ಕೂಡ ನಡೆಯುತ್ತದೆ. ಕರ್ನಾಟಕದ ರಾಜ್ಯಧಾನಿ ಬೆಂಗಳೂರುನಲ್ಲಿ ಅಪರೂಪದ ಪಂಚಮುಖಿ ಆಂಜನೇಯ ಸ್ವಾಮಿಯ ದೇವಸ್ಥಾನದ ಪವಾಡ ಗೊತ್ತಾದರೆ ನೀವು ಕೂಡ ಭೇಟಿ ನೀಡುತ್ತೀರಾ.

ಈ ದೇವಸ್ಥಾನಕ್ಕೆ ಒಮ್ಮೆ ಹೋಗಿ, ಆಂಜನೇಯ ಸ್ವಾಮಿಯ ನೈಜ್ಯ ದರ್ಶನವಾಗುತ್ತದೆ. ವಿಶ್ವದಲ್ಲಿ ಈ ರೀತಿಯ ಒಂದು ಅದ್ಭುತ ದೇವಸ್ಥಾನ ಮತ್ತೆಲ್ಲೂ ನೋಡಲು ಸಾಧ್ಯವಿಲ್ಲ. ಆಂಜನೇಯ ಸ್ವಾಮಿ ದೇವಸ್ಥಾನ ಬೆಂಗಳೂರಿನ ಅತ್ತಿಗುಪ್ಪೆ ಎಂಬ ನಗರದಲ್ಲಿದೆ‌ ಈ ದೇವಸ್ಥಾನವನ್ನು ಗುಟ್ಟಪ್ಪ ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನ ಎಂದು ಕರೆಯುತ್ತಾರೆ. ಈ ದೇವಸ್ಥಾನದ ಬಗ್ಗೆ ಮಾಹಿತಿ ತಿಳಿದುಕೊಳ್ಳಲು 09986001744 ಈ ಸಂಖ್ಯೆಗೆ ಕರೆ ಮಾಡಿ.

ಇತ್ತೀಚಿನ ದಿನಗಳಲ್ಲಿ ಈ ದೇವಸ್ಥಾನವು ಸಾಕಷ್ಟು ಪ್ರಸಿದ್ಧಿ ಪಡೆದುಕೊಳ್ಳುತ್ತಿದೆ ಮತ್ತು ಭಕ್ತರ ದಂಡೆ ಹರಿದು ಬರುತ್ತಿದೆ ಏಕೆಂದರೆ ಭಕ್ತಾದಿಗಳ ಕಷ್ಟವನ್ನು ಅತಿ ವೇಗವಾಗಿ ಪರಿಹರಿಸುತ್ತಿರುವ ಹನುಮಂತ ದೇವರು.ಈ ದೇವಸ್ಥಾನದಲ್ಲಿ ಒಂದು ಚಮತ್ಕಾರಿ ತಿರುಗುವ ಕಲ್ಲು ಇದೆ ಅದರ ಹೆಸರು ಗುಂಡಪ್ಪ ಇದನ್ನು ಸುದರ್ಶನ ಚಕ್ರ ಎಂದು ಕರೆಯುತ್ತಾರೆ. ದೇವಸ್ಥಾನಕ್ಕೆ ಬರುವ ಭಕ್ತರು ಬೇಡಿಕೊಂಡಿದ್ದು ಈಡೇರುತ್ತದೆ ಅಥವಾ ಇಲ್ಲವಾ ಎಂದು ಗುಂಡಪ್ಪ ಕಲ್ಲು ಹೇಳುತ್ತದೆ.

ನೀವೇನಾದರೂ ಈ ದೇವಸ್ಥಾನಕ್ಕೆ ಬಂದರೆ ಮೊದಲಿಗೆ ನಿಮ್ಮ ಮನೆ ದೇವರನ್ನು ನೆನೆಸಿ ಕೊಂಡು ಕಲ್ಲಿಗೆ ನಮಸ್ಕಾರ ಮಾಡಿ ಭಕ್ತಿಯಿಂದ ಕಲ್ಲಿನ ಮೇಲೆ ನಿಂತುಕೊಳ್ಳಬೇಕು. ಕಲ್ಲಿನ ಮೇಲೆ ನಿಂತುಕೊಂಡು ನಿಮ್ಮ ಕೋರಿಕೆಯ ಪ್ರಶ್ನೆಯನ್ನು ಆಂಜನೇಯ ಸ್ವಾಮಿಗೆ ತಿಳಿಸಬೇಕು ನೀವು ಕೇಳಿಕೊಂಡಿದ್ದು ನೆರವೇರುತ್ತದೆ ಎಂದರೆ ಕಲ್ಲು ಬಲಗಡೆ ತಿರುಗುತ್ತದೆ, ನೆರವೇರುವುದಿಲ್ಲ ವೆಂದರೆ ಕಲ್ಲು ಎಡಗಡೆ ತಿರುಗುತ್ತದೆ.

ಈ ಗುಂಡಪ್ಪ ಕಲ್ಲು ಎಲ್ಲ ಭಕ್ತಾದಿಗಳ ಮುಂದೆ ತನ್ನಷ್ಟಕ್ಕೆ ತಿರುಗುವುದು ಅತಿ ದೊಡ್ಡ ಪವಡವಾಗಿದೆ. ಈ ರೀತಿಯಾದ ಒಂದು ಕಲ್ಲಿನ ಪವಾಡವನ್ನು ಯಾರು ನೋಡಿರಲು ಸಾಧ್ಯವಿಲ್ಲ ಗುಂಡಪ್ಪ ಕಲ್ಲು ಎಷ್ಟು ಸಲ ತಿರುಗುತ್ತದೆಯೋ ಅಷ್ಟು ದಿನ ಅಥವಾ ಅಷ್ಟು ತಿಂಗಳು ನೀವು ಬೇಡಿಕೊಂಡಿದ್ದು ಈಡೇರಲಿ ಸಮಯ ತೆಗೆದುಕೊಳ್ಳುತ್ತದೆ ಎಂದರ್ಥ. ಈ ದೇವಸ್ಥಾನಕ್ಕೆ ಬಂದ ಭಕ್ತಾದಿಗಳು ಹೇಳುವ ಪ್ರಕಾರ ಎಷ್ಟೋ ವರ್ಷದಿಂದ ಬಳಲುತ್ತಿದ್ದ ತೊಂದರೆಯನ್ನು ಈ ಗುಂಡಪ್ಪನ ಬಳಿ ಬಳಿ ಬೇಡಿಕೊಂಡು ಹೋದಮೇಲೆ ಸ್ವಲ್ಪ ದಿನದಲ್ಲಿ ಪರಿಹಾರ ಗೊಂಡಿದೆ ಎಂದು ಹೇಳಿದ್ದಾರೆ.

ಮತ್ತೊಂದು ಅಚ್ಚರಿ ಸಂಗತಿ ಏನೆಂದರೆ, ದೇವಸ್ಥಾನಕ್ಕೆ ಬರುವ ಎಲ್ಲರಿಗೂ ಉತ್ತರ ಸಿಗುವುದಿಲ್ಲ ಅಂದರೆ ಏನೇ ಮಾಡಿದರು ಗುಂಡಪ್ಪ ಕಲ್ಲು ತಿರುಗುವುದಿಲ್ಲ ಬಲವಂತವಾಗಿ ಕಲ್ಲನ್ನು ತಿರುಗಿಸಲು ಹೋದರು ಅಲುಗಾಡುವುದಿಲ್ಲ. ಈ ಗುಂಡಪ್ಪ ಕಲ್ಲು ಸಾಲಿಗ್ರಾಮದ ಕಲ್ಲು, ಒಂದು ಸ್ವಾಮೀಜಿಯವರು ಈ ಕಲ್ಲನ್ನು ಈ ದೇವಸ್ಥಾನಕ್ಕೆ ಕೊಟ್ಟರು ಎಂದು ಹೇಳುತ್ತಾರೆ. ಕಲ್ಲಿನ ಬಗ್ಗೆ ಸಂಶೋಧನೆ ನಡೆಸಿದಾಗ ಈ ರೀತಿಯ ಕಲ್ಲು ಇಂಡೋನೇಷ್ಯಾ, ಭಾರತದ ಅಯೋಧ್ಯ, ಶ್ರೀಲಂಕದ ತಾಲಿಮನಾರ್ ನಲ್ಲಿ ಕಂಡು ಬಂದಿದೆ ಎಂದು ಹೇಳಿದ್ದಾರೆ.

Leave A Reply

Your email address will not be published.

error: Content is protected !!
Footer code: