Actor Prem: ಕಾವೇರಿ ವಿಚಾರದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ತಮ್ಮ ರ’ಕ್ತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದ ನೆನಪಿರಲಿ ಪ್ರೇಮ್!

0

Actor Prem: ಸ್ನೇಹಿತರೆ, ರಾಜ್ಯದಲ್ಲಿ ಕಾವೇರಿ ಹೋರಾಟ(Cauvery Dispute) ದಿನೇ ದಿನೇ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು, ರೈತರು ಕನ್ನಡ ಪರ ಹೋರಾಟಗಾರರು ಹಾಗೂ ಕನ್ನಡ ಸಿನಿಮಾ ರಂಗದ ಸೆಲೆಬ್ರಿಟಿಗಳು ಪ್ರತಿಭಟನೆ ಮಾಡಿದರು ಕೂಡ ಸರಿಯಾದ ನ್ಯಾಯ ಸಿಗದಂತಹ ಪರಿಸ್ಥಿತಿಯಲ್ಲಿದ್ದೇವೆ. ಹೀಗಿರುವಾಗ ಕನ್ನಡ ಸಿನಿಮಾ ರಂಗದ ನಟ ನಟಿಯರು ತಮ್ಮ ಹೋರಾಟವನ್ನು ನಿಲ್ಲಿಸದೆ ಸಾಮಾಜಿಕ ಜಾಲತಾಣಗಳ ಮೂಲಕ ಕಾವೇರಿಯ ಕುರಿತು ಎಚ್ಚರಿಕೆಯ ಸಂದೇಶ ಹಾಗೂ ಯಾವ ನಿಲುವನ್ನು ತೆಗೆದುಕೊಂಡರೆ ಕಾವೇರಿ ನಮ್ಮಲ್ಲಿಯೇ ಉಳಿದುಕೊಳ್ಳುತ್ತಾಳೆ ಎಂಬ ಎಲ್ಲಾ ಸಲಹೆಯನ್ನು ಸಹ ನೀಡತೊಡಗಿದ್ದಾರೆ.

ಹೀಗಿರುವಾಗ ತಮ್ಮ ಮನೋಜ್ಞ ಅಭಿನಯದ ಮೂಲಕವೇ ಬಹುದೊಡ್ಡ ಮಟ್ಟದಲ್ಲಿ ಹೆಸರುವಾಸಿ ಆಗಿರುವಂತಹ ನೆನಪಿರಲಿ ಪ್ರೇಮ್(Nenapirali Prem) ಅವರು ತಮ್ಮ ರಕ್ತದಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾವೇರಿ ವಿಚಾರವಾಗಿ ಪತ್ರ ಒಂದನ್ನು ಬರೆದಿದ್ದು, ಅದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ವೈರಲ್ ಆಗಿದ್ದಾರೆ‌. ಹೌದು ಗೆಳೆಯರೇ ನಿನ್ನೆಯಷ್ಟೇ ನೆನಪಿರಲಿ ಪ್ರೇಮ್ ಅವರು ತಮ್ಮ instagram ನಲ್ಲಿ ಮಾಡಿರುವಂತಹ ಪೋಸ್ಟ್ ಇದಾಗಿದ್ದು,

“ಇವರಿಗೆ: ನರೇಂದ್ರ ಮೋದಿಜಿ, ಭಾರತದ ಪ್ರಧಾನ ಮಂತ್ರಿ. ದಯಮಾಡಿ ಕಾವೇರಿ ಮತ್ತು ಕರ್ನಾಟಕಕ್ಕೆ ನ್ಯಾಯ ಕೊಡಿಸಿ ‘ಕಾವೇರಿ ನಮ್ಮದು’ ನೆನಪಿರಲಿ ಪ್ರೇಮ್ ಚಿತ್ರನಟ” ಎಂದು ತಮ್ಮ ರಕ್ತದಲ್ಲಿ ಬರೆದ ಪ್ರೇಮ್ ಅವರು ಸಿದ್ಧ ಕಣೋ ಪ್ರಾಣ ಕೊಡೋಕೆ ಈ ನೆಲ ಜಲ ನಾಡು ನುಡಿಗೆ ಎಂಬ ತಮ್ಮದೇ ಸಿನಿಮಾದ ಹಾಡಿನ ಕ್ಯಾಪ್ಷನ್ ಬರೆದಿದ್ದಾರೆ. ಈ ಫೋಟೋಗಳು ವೈರಲ್ ಆದ ಬೆನ್ನಲ್ಲೇ ನೆಟ್ಟಿಗರು ಭಿನ್ನ ವಿಭಿನ್ನವಾಗಿ ಕಮೆಂಟ್ ಮಾಡುತ್ತಾ ನಟ ಪ್ರೇಮ್ ಅವರ ಈ ನಡೆಯ ಕುರಿತು ತಮ್ಮ ಗೌರವವನ್ನು ವ್ಯಕ್ತಪಡಿಸುವುದರ ಜೊತೆಗೆ

ಇನ್ನಷ್ಟು ಮಂದಿ ಎರಡು ರಾಜ್ಯಗಳ ನಡುವೆ ಕಲಹಗಳು ಉಂಟಾದರೆ ಕೇಂದ್ರ ಸರ್ಕಾರ ಅದ್ರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವಂತಿಲ್ಲ, ಅದಕ್ಕೆ ನಮ್ಮ ಕಾನೂನಿನಲ್ಲಿ ಅವಕಾಶವಿಲ್ಲ, ಇದನ್ನು ಸುಪ್ರೀಂ ಕೋರ್ಟ್(Supreme Court) ಹಾಗೂ ಎರಡು ರಾಜ್ಯದ ಮುಖ್ಯಮಂತ್ರಿಯವರೇ ಚರ್ಚಿಸಿ ತೀರ್ಮಾನಿಸಬೇಕು ಎಂದು ಪ್ರೇಮ್ ಅವರಿಗೆ ಅರ್ಥ ಮಾಡಿಸುವ ಕೆಲಸ ಮಾಡಿದ್ದಾರೆ. ಸದ್ಯ ಕಾವೇರಿ ವಿಚಾರವಾಗಿ ಕರ್ನಾಟಕ ಹಾಗೂ ತಮಿಳುನಾಡಿನ(Tamil Nadu) ಮಧ್ಯೆ ಜಟಾಪಟಿಯೇ ನಡೆಯುತ್ತಿದ್ದು, ಈ ವಿವಾದವು ಸುಪ್ರೀಂ ಕೋರ್ಟ್ ಅಂಗಳದಲ್ಲಿದ್ದು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

ನಟಿ ಸಂಯುಕ್ತ ಹೆಗ್ಡೆ ಜೊತೆ ಕಿಶನ್ ಅವರ ರೋಮ್ಯಾಂಟಿಕ್ ಡ್ಯಾನ್ಸ್ ಮೂವ್ಸ್, ಸರಿಯಾಗಿ ಬಟ್ಟೆ ಹಾಕ್ಕೊಳ್ಳಮ್ಮ ಎಂದ ನೆಟ್ಟಿಗರು!

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯ ಪೀಠಂ ಪಂಡಿತ್ ಶ್ರೀ ವಾಸುದೇವನ್ ದೀಕ್ಷಿತ್ 9972074730 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ ,ಇಷ್ಟಪಟ್ಟವರು ನಿಮ್ಮಂತಾಗಲು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ದಾಂಪತ್ಯದಲ್ಲಿ ತೊಂದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ ,ಸಂತಾನ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಆಗಬೇಕ?ಸ್ಥಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ?ಭೂ ಪಿತ್ರಾರ್ಜಿತ ಆಸ್ತಿಪಾಸ್ತಿಗಳಿಗೆ ಬಗ್ಗೆ ತಿಳಿಯಬೇಕೆ? ಸ್ತ್ರೀ -ಪುರುಷ ಪ್ರೇಮ ವಿಚಾರದಂತಹ ಸಮಸ್ಯೆ ,ನಿಮ್ಮ ಜೀವನದ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9972074730 ಇದಲ್ಲದೆ ಅಮಾವಾಸ್ಯೆ ಹುಣ್ಣಿಮೆ ಪೂಜೆ ಅನುಷ್ಠಾನಗಳಿಂದ ಅಷ್ಟಮಂಡಲ ಪ್ರಶ್ನೆ ಕವಡೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9972074730.

Leave A Reply

Your email address will not be published.

error: Content is protected !!
Footer code: