WhatsApp Group Join Now
Telegram Group Join Now

ಬೊಜ್ಜು ತುಂಬಿದ ದೇಹವನ್ನು ಸಣ್ಣಗಾಗಿಸುವುದು ಅಷ್ಟು ಸುಲಭದ ಕೆಲಸವಲ್ಲ ಕೆಲವರಿಗಂತೂ ಏನೇ ವರ್ಕೌಟ್‌ ಮಾಡಿದರು ದೇಹ ಮೊದಲಿನಂತಾಗುವುದಿಲ್ಲ ಹೀಗಾಗಿ ವೇಗವಾಗಿ ತೂಕ ಇಳಿಸುವ ಸಲುವಾಗಿ ಅನೇಕ ಉತ್ಪನ್ನಗಳನ್ನು ಬಳಸಲು ಆರಂಭಿಸುತ್ತಾರೆ. ತೂಕ ಇಳಿಸಿಕೊಳ್ಳಲು ಏಷ್ಟೋ ಜನರು ಅತಿಯಾದ ವ್ಯಾಯಾಮ ಹಾಗೂ ಊಟ ಮಾಡದೇ ಇರುವುದು ಮತ್ತಿತರ ಔಷಧಿ ಮುಂತಾದವನ್ನು ಬಳಸುತ್ತಾರೆ ಆದರೂ ಸಹ ಬೊಜ್ಜು ಕಡಿಮೆ ಆಗುವುದಿಲ್ಲ

ನಾವು ಸೇವಿಸುವ ಆಹಾರದಲ್ಲಿ ಜೀರ್ಣ ಕ್ರಿಯೆ ಸರಿಯಾಗಿ ನಡೆದರೆ ನಾವು ಆರೋಗ್ಯವಾಗಿ ಇರುತ್ತೇವೆ ಹಾಗೂ ಕೊಬ್ಬಿನ ಅಂಶವು ನಿಯಂತ್ರಣದಲ್ಲಿ ಇರುತ್ತದೆ. ನಮ್ಮ ದೇಹದಲ್ಲಿ ಅತಿಯಾದ ಕೊಲೆಸ್ಟ್ರಾಲ್ ಇಂದ ತೂಕ ಹೆಚ್ಚಾಗುತ್ತದೆ ಹಾಗೂ ಇದರಿಂದ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ ಅದರಲ್ಲಿ ಬಿಪಿ ಶುಗರ್ ಮುಂತಾದ ರೋಗಗಳು ಕಾಣಿಸಿಕೊಳ್ಳುತ್ತದೆ ನಾವು ಈ ಲೇಖನದ ಮೂಲಕ ತೂಕ ಇಳಿಸಿಕೊಳ್ಳುವ ಮಾರ್ಗಗಳ ಬಗ್ಗೆ ತಿಳಿದುಕೊಳ್ಳೋಣ.

ಇಂದಿನ ದಿನಮಾನದಲ್ಲಿ ಬೊಜ್ಜು ಎಲ್ಲರಿಗೂ ಸರ್ವೆ ಸಾಮಾನ್ಯವಾದ ಕಾಯಿಲೆಯಾಗಿದೆ ಅಗ್ನಿಮಾಂದ್ಯ ತೂಕ ಹೆಚ್ಚಾಗಲು ಕಾರಣವಾಗಿದೆ ನಾವು ಸೇವಿಸಿದ ಆಹಾರ ಜೀರ್ಣ ವಾದ ಮೇಲೆ ಒಳ್ಳೆಯ ಕಣಗಳು ರಕ್ತ ಸಂಚಾರಕ್ಕೆ ಸಹಾಯ ಮಾಡುತ್ತದೆ ಹಾಗೂ ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ ಹಾಗೆಯ ಕೆಟ್ಟ ಕಣ ಮಲದ ರೂಪದಲ್ಲಿ ತ್ಯಾಜ್ಯವಾಗಿ ಹೊರಗೆ ಹೋಗುತ್ತದೆ.

ಈ ತರ ದೇವರು ಮನುಷ್ಯನನ್ನು ಸೃಷ್ಠಿ ಮಾಡಿದ್ದಾನೆ ಆದರೆ ನಾವು ಸೇವಿಸುವ ಆಹಾರ ಸರಿಯಾಗಿ ಜೀರ್ಣ ಆಗದೆ ಇದ್ದಾಗ ಒಳ್ಳೆಯ ಕಣವು ಅದರ ಕೆಲಸ ಮಾಡುವುದಿಲ್ಲ ಹಾಗೆಯೇ ಕೆಟ್ಟ ಕಣವೂ ಅದರ ಕೆಲಸ ನಿರ್ವಹಿಸುವುದಿಲ್ಲ ಹೀಗೆ ಅರ್ಧ ಕಾರ್ಯವನ್ನು ಮಾಡಿದ ಆಹಾರವನ್ನು ದೇಹದಲ್ಲಿ ಶೇಖರಣೆ ಮಾಡಿ ಇಡುತ್ತದೆ ಮೊದಲು ಲಿವರ್ ಅಲ್ಲಿ ಶೇಕರಣೆ ಮಾಡುತ್ತದೆ ನಂತರ ಇನ್ನುಳಿದ ಭಾಗದಲ್ಲಿ ಶೇಖರಣೆ ಮಾಡುತ್ತದೆಇದರಿಂದ ನಮ್ಮ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗುತ್ತದೆ.

ಕೊಬ್ಬಿನ ಅಂಶ ಜಾಸ್ತಿ ಆದಾಗ ನಮ್ಮ ದೇಹದ ತೂಕ ಕೂಡ ಹೆಚ್ಚಾಗುತ್ತದೆ ಆಗ ಸ್ವಲ್ಪವೇ ಆಹಾರ ಸೇವಿಸಿದರು ಕೂಡ ದೇಹದ ತೂಕ ಹೆಚ್ಚಾಗುವುದು ಇಂತಹ ಸಂದರ್ಭದಲ್ಲಿ ವ್ಯಾಯಾಮ ಮಾಡಿದರು ಕೂಡ ತೂಕ ಹೆಚ್ಚಾಗುತ್ತದೆ ಕೆಲವರು ಅನುವಂಶಿಕವಾಗಿ ದಪ್ಪ ಇದ್ದಾರೆ ಎಂದು ಹೇಳುವುದು ಸರಿಯಲ್ಲ

ಜಠರದಲ್ಲಿ ಜೀರ್ಣ ಕ್ರಿಯೆ ಸರಿಯಾಗಿ ಆಗದೆ ಇದ್ದಾಗ ಕೊಬ್ಬಿನ ಅಂಶ ಹೆಚ್ಚಾಗಿ ದೇಹದ ತೂಕ ಹೆಚ್ಚಾಗುವುದು ಭೋಜನದ ಮುಂಚೆ ಹಸಿ ಶುಂಠಿ ಸಣ್ಣ ತುಂಡಿಗೆ ಅದರ ಮೇಕೆ ಸೈಂಧವ ಲವಣವನ್ನು ಇಟ್ಟು ಚಪ್ಪರಿಸಿ ಚಪ್ಪರಿಸಿ ತಿನ್ನಬೇಕು ಒಂದೇ ಬಾರಿಗೆ ತಿನ್ನಬಾರದು ಚಪ್ಪರಿಸಿ ತಿನ್ನಬೇಕು ಈ ಪದಾರ್ಥಗಳನ್ನು ತಿಂದಾಗ ಜಠರ ಅಗ್ನಿ ದೀಪ್ತಿ ಯಾಗುತ್ತದೆ ಅಂದರೆ ಹೊಟ್ಟೆಯಲ್ಲಿ ಹಸಿವು ಜಾಸ್ತಿ ಆಗುತ್ತದೆ.

ನಾವು ತಿಂದ ಆಹಾರ ಸಂಪೂರ್ಣ ಆಗಿ ಜೀರ್ಣ ಆಗುತ್ತದೆ ಸಾರ ಭಾಗ ಹಾಗೂ ಕೆಟ್ಟ ಭಾಗಗಳಾಗಿ ಬೇರ್ಪಡುತ್ತದೆ ಇದರಿಂದ ಸಾರ ಭಾಗದ ಕಣಗಳು ರಕ್ತಕ್ಕೆ ಸೇರುತ್ತದೆ ಹಾಗೆಯೇ ಕೆಟ್ಟ ಭಾಗದಲ್ಲಿ ತ್ಯಾಜ್ಯವನ್ನು ಹೊರಹಾಕಲಾಗುತ್ತದೆ ಆಗ ಕೊಬ್ಬಿನ ಅಂಶ ಕಂಡು ಬರುವುದಿಲ್ಲ ಆಗ ದೇಹದಲ್ಲಿ ಆಮಾ ಉತ್ಪತ್ತಿಯಾಗುವುದಿಲ್ಲ ಅಂದರೆ ಕೆಟ್ಟ ಕೊಲೆಸ್ಟ್ರಾಲ್ ಉತ್ಪತ್ತಿಯಾಗುವುದಿಲ್ಲ ಊಟಕ್ಕಿಂತ ಮೊದಲು ಹಸಿ ಶುಂಠಿ ಹಾಗೂ ಸೈಂಧವ ಲವಣ ವನ್ನು ತಿನ್ನುದರಿಂದ ದೇಹಕ್ಕೆ ಅನಗತ್ಯವಾದ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: