WhatsApp Group Join Now
Telegram Group Join Now

Sandalwood Stars: ಸ್ನೇಹಿತರೆ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಒಂದರ ಮೇಲೆ ಮತ್ತೊಂದರಂತೆ ಸಾವು ನೋವುಗಳೆಂಬುದು ಸಂಭವಿಸುತ್ತಲೇ ಇದೆ.‌ ಈಗಷ್ಟೇ ಪುನೀತ್ ರಾಜಕುಮಾರ್ ಅವರ ಸಾ’ವಿನ ಸುದ್ದಿಯಿಂದ ಚೇತರಿಸಿಕೊಳ್ಳುತ್ತಿದ್ದಂತಹ ಕನ್ನಡ ಸಿನಿಮಾ ಅಭಿಮಾನಿಗಳಿಗೆ ಹಾಗೂ ಕಲಾವಿದರಿಗೆ ಇದೀಗ ಬರ ಸಿಡಿಲು ಬಡೆದಂತೆ ಸ್ಪಂದನ ವಿಜಯ್ ರಾಘವೇಂದ್ರ (Spandana Vijay Raghavendra) ಅವರ ಸಾ’ವಿನ ಸಂಗತಿ ಆಘಾತವನ್ನು ತಂದಿದೆ.

ಹೌದು ಗೆಳೆಯರೇ ಕರೋನ ಸಂದರ್ಭದಲ್ಲಿ ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಂತಹ ಪತಿ ಚಿರಂಜೀವಿ ಸರ್ಜಾ(Chiranjeevi Sarja) ಅವರನ್ನು ಕಳೆದುಕೊಂಡ ಮೇಘನ ರಾಜ್ ಗೋಳಾಡಿದ್ದು, ಇನ್ನು ನಮ್ಮೆಲ್ಲರ ಕಣ್ಣು ಕಟ್ಟಿದಂತಿದೆ. ಮದುವೆಯಾದ ಕೇವಲ ಎರಡೇ ಎರಡು ವರ್ಷಕ್ಕೆ ಪ್ರೀತಿಯ ಪತಿಯಿಂದ ದೂರಾಗಿ ಮೇಘನ ಇಂದಿಗೂ ಆ ಅಗಾಧವಾದ ನೋವಿಂದ ಹೊರಬಂದಿಲ್ಲ.

ಇನ್ನು 15 ಜೂನ್ 2021 ರಂದು ಸಂಚಾರಿ ವಿಜಯ್(Sanchari Vijay) ಅವರು ಅಪಘಾತದಲ್ಲಿ ತಲೆಗೆ ತೀವ್ರವಾದ ಪೆಟ್ಟು ಬಿದ್ದ ಕಾರಣ ಬ್ರೈನ್ ಡೆಡ್ ಆಗಿ ಅಪೋಲೋ ಆಸ್ಪತ್ರೆಯಲ್ಲಿ ತಮ್ಮ ಪ್ರಾಣ ಕಳೆದುಕೊಂಡರು. ಬದುಕಿದ್ದಷ್ಟು ದಿನ ಇತರರಿಗೆ ಒಳ್ಳೆಯದನ್ನೇ ಬಯಸುತ್ತಾ, ತನ್ನಂತೆ ನಾಲ್ಕು ಜನರು ಸಿನಿಮಾ ರಂಗದಲ್ಲಿ ಸಕ್ರಿಯರಾಗಬೇಕೆಂಬ ಕಾರಣದಿಂದ ಹೊಸ ಹೊಸ ಚಿತ್ರಗಳ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದಂತಹ ಸಂಚಾರಿ ವಿಜಯ್ ಅವರನ್ನು ಭಗವಂತ ಬಹುಬೇಗ ತನ್ನತ್ತ ಕರೆದುಕೊಂಡುಬಿಟ್ಟ.

ಇನ್ನು ಅದೇ ವರ್ಷ ಅಂದರೆ 2021 ಅಕ್ಟೋಬರ್ 29ನೇ ತಾರೀಕು ನಗುವಿನ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರು ಹೃದಯ ಘಾತದಿಂದಾಗಿ ಬಾರದ ಲೋಕಕ್ಕೆ ತೆರಳಿದರು. ಹೀಗೆ ಭೂಮಿ ಮೇಲಿರುವಂತಹ ಅಪಾರ ಹೂವುಗಳನ್ನು ಬಿಟ್ಟು ಎಲ್ಲರ ಪ್ರೀತಿಯ ಬೆಟ್ಟದ ಹೂವನ್ನೇ ತನ್ನ ಮುಡಿಗೆರಿಸಿಕೊಂಡುಬಿಟ್ಟ.

ಆದರೀಗ ಹೃದಯ ಶ್ರೀಮಂತಿಕೆ ಉಳ್ಳುವಂತಹ ಹೆಣ್ಣು ಮಗಳಾದ ಸ್ಪಂದನ ವಿಜಯ್ ರಾಘವೇಂದ್ರ ಅವರನ್ನು ಅತಿ ಚಿಕ್ಕ ವಯಸ್ಸಿಗೆ ತನ್ನತ್ತ ಕರೆದುಕೊಂಡಿರುವ ಭಗವಂತನಿಗೆ ಜನರೆಲ್ಲರೂ ಶಾಪ ಹಾಕತೊಡಗಿದ್ದಾರೆ. ವಿಜಯ್ ರಾಘವೇಂದ್ರ(Vijay Raghavendra) ಅವರಿಗೆ ಈ ಒಂದು ನೋವನ್ನು ಸಹಿಸುವಂತಹ ಶಕ್ತಿಯನ್ನು ಆತನೇ ಕರುಣಿಸಬೇಕು. ಇದನ್ನೂ ಓದಿ Adah Sharma: ಮದುಮಗಳಾಗಿ ಮಿಂಚಿದ ಕೇರಳ ಸ್ಟೋರಿ ಖ್ಯಾತಿಯ ಆದಾ ಶರ್ಮ!

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: