ದೇವರಿಗೆ ಹರಕೆ ಹೊತ್ತು ತೀರಿಸದೆ ಇದ್ರೆ ಏನಾಗುತ್ತೆ? ನಿಮಗಿದು ಗೊತ್ತಿರಲಿ

0

ಕಷ್ಟ ಬಂದಾಗ ವೆಂಕಟರಮಣ ಎನ್ನುವ ಮಾತನ್ನು ಎಲ್ಲರೂ ಕೇಳಿರುತ್ತೇವೆ. ಕಷ್ಟದಲ್ಲಿದ್ದಾಗ ದೇವರಿಗೆ ಹರಕೆ ಹೊರುತ್ತೇವೆ ಆದರೆ ಅದನ್ನು ಮರೆತುಬಿಡುತ್ತೇವೆ ಆದರೆ ಹೀಗೆ ದೇವರಿಗೆ ಹೊತ್ತ ಹರಕ್ಕೆಯನ್ನು ಮರೆತರೆ ಏನಾಗುತ್ತದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಹಾಗಾದರೆ ದೇವರಿಗೆ ಹೊತ್ತ ಹರಕೆಯನ್ನು ತೀರಿಸದೆ ಇದ್ದರೆ ಏನೆಲ್ಲಾ ಪರಿಣಾಮ ಬೀರುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಹಿಂದೂ ಸಂಪ್ರದಾಯದಲ್ಲಿ ದೇವರನ್ನು ನಾನಾ ಬಗೆಯಲ್ಲಿ ಪ್ರಾರ್ಥನೆ ಮಾಡುತ್ತೇವೆ. ಸಾಮಾನ್ಯವಾಗಿ ಮದುವೆ ತಡೆ ನಿವಾರಣೆಗೆ, ಉತ್ತಮ ಕೆಲಸ ಸಿಗಲು, ಅನಾರೋಗ್ಯ ಸರಿಯಾಗಲು, ಹಣಕಾಸು ಅಡಚಣೆ ನಿವಾರಣೆಯಾಗಲು, ಮನೆ ಕಟ್ಟಲು ಇರುವ ಅಡಚಣೆ ನಿವಾರಣೆಯಾಗಲು ಹೀಗೆ ಹತ್ತು ಹಲವು ಕಾರಣಗಳಿಗೆ ದೇವರನ್ನು ಪ್ರಾರ್ಥಿಸುತ್ತೇವೆ. ಕೆಲವೊಮ್ಮೆ ದೇವರಲ್ಲಿ ಪ್ರಾರ್ಥನೆ ಮಾಡುವುದಷ್ಟೆ ಅಲ್ಲದೆ ಹರಕೆಯನ್ನು ಕಟ್ಟಿಕೊಳ್ಳುತ್ತೇವೆ. ಭಗವಂತನ ಬಳಿ ಮೊರೆ ಇಟ್ಟು ನಂತರ ಕಷ್ಟ ತೀರಿದ ಮೇಲೆ ಭಗವಂತನನ್ನು ಮರೆಯುವವರು ಇದ್ದಾರೆ ಅಂತವರಿಗೆ ಮತ್ತೆ ಕಷ್ಟ ಬಂದಾಗ ಭಗವಂತ ನೆನಪಾಗುತ್ತಾನೆ, ಕಷ್ಟಗಳು ಮತ್ತೆ ಮತ್ತೆ ಎದುರಾಗಬಾರದು ಎಂದರೆ ಒಂದು ಉಪಾಯವಿದೆ.

ಕಷ್ಟಕಾಲದಲ್ಲಿ ಹರಕೆ ಹೊತ್ತು ಅದು ನಿವಾರಣೆಯಾದ ನಂತರ ನಾವು ಹೊತ್ತ ಹರಕೆಯನ್ನು ನೆನಪಿಟ್ಟು ತೀರಿಸಬೇಕು. ಒಂದು ವೇಳೆ ಭಗವಂತನಿಗೆ ಹೊತ್ತ ಹರಕೆಯನ್ನು ಈಡೇರಿಸದೆ ಇದ್ದರೆ ಭಗವಂತನ ಅವಕೃಪೆಗೆ ಪಾತ್ರರಾಗಬೇಕಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಾಗಿದೆ. ಹಾಗಾದರೆ ಹರಕೆ ಹೊತ್ತು ನಂತರದ ದಿನಗಳಲ್ಲಿ ತೀರಿಸದೆ ಇದ್ದರೆ ಏನಾಗುತ್ತದೆ ಎಂಬ ಕುತೂಹಲಕಾರಿ ವಿಷಯ ತಿಳಿದಿರಲೇಬೇಕು. ಹರಕೆ ಹೊತ್ತ ನಂತರ ಅದರ ಫಲ ದೊರೆತ ಮೇಲೆ ಹರಕೆಯನ್ನು ತೀರಿಸದೆ ಇದ್ದರೆ ಮೊದಲನೆಯದಾಗಿ ವಾಕ್ ದೋಷ ಎದುರಾಗುತ್ತದೆ. ಸುಳ್ಳು ಹೇಳಿ ತಪ್ಪು ಮಾಡಿದ ಗುಂಪಿಗೆ ಸೇರುತ್ತೇವೆ ಹರಕೆ ಮೂಲಕ ಪಡೆದ ಫಲ ನಾಶವಾಗುತ್ತದೆ.

ದಾಂಪತ್ಯ ಜೀವನದಲ್ಲಿ ಸಮಸ್ಯೆ ಉಂಟಾಗುತ್ತದೆ. ಕೆಲವರು ಅರಿಶಿಣದ ಬಟ್ಟೆಯಲ್ಲಿ 11 ರೂಪಾಯಿ ಮುಡಿಪು ಕಟ್ಟಿ ಮನೆ ದೇವರಿಗೆ ಹರಕೆ ಹೊತ್ತಿರುತ್ತಾರೆ ಈ ಹರಕೆಯನ್ನು ಪೂರ್ಣ ಮಾಡದೆ ಇದ್ದಲ್ಲಿ ಜೀವನದಲ್ಲಿ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ, ದಾಂಪತ್ಯ ಜೀವನದಲ್ಲಿ ನೆಮ್ಮದಿ ಸುಖ ಇರುವುದಿಲ್ಲ ಮನೆ ಕಟ್ಟಬೇಕು ಎಂದರೆ ಅಡಚಣೆ ಉಂಟಾಗುತ್ತದೆ. ಮದುವೆ ಸಂತಾನ ವಿಳಂಬ, ಪದೆ ಪದೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಯಾವುದೆ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಸಿಗುವುದೆ ಇಲ್ಲ. ಕೆಲವರಿಗೆ ಮನೆ ಬಾಡಿಗೆ ಕಟ್ಟುವುದಕ್ಕೂ ಕಷ್ಟ ಆಗುವ ಸ್ಥಿತಿ ನಿರ್ಮಾಣವಾಗುತ್ತದೆ.

ತಂದೆ ತಾಯಿ ಮಕ್ಕಳ ಪರವಾಗಿ ಹರಕೆ ಹೊತ್ತಿರುತ್ತಾರೆ ಅಥವಾ ತಾವೆ ಹರಕೆ ಹೊತ್ತು ಮರೆತಿರುತ್ತಾರೆ. ಇಂತಹ ಸಂದರ್ಭದಲ್ಲಿ ಒಂದು ವಿಶೇಷ ಪೂಜೆಯನ್ನು ಮಾಡಿಸಬೇಕಾಗುತ್ತದೆ, ಪೂಜೆಯನ್ನು ಮಾಡಿಸಿ ದೇವರಲ್ಲಿ ನಾವು ಏನು ಹರಕೆ ಹೊತ್ತುಕೊಂಡಿದ್ದೇವೆ ನಮಗೆ ಗೊತ್ತಾಗುತ್ತಿಲ್ಲ, ನಮ್ಮ ತಪ್ಪನ್ನು ಕ್ಷಮಿಸಿ ನಮಗೆ ಒಳ್ಳೆಯದನ್ನು ಮಾಡು ಎಂದು ಪ್ರಾರ್ಥನೆ ಮಾಡಿಕೊಳ್ಳಬೇಕು. ಉದ್ಯೋಗ ಸಿಕ್ಕ ಮೇಲೆ ಹರಕೆ ತೀರಿಸದೆ ಇದ್ದರೆ ಮಾಲೀಕರ ಜೊತೆ ಕೆಲಸಗಾರರ ಜೊತೆ ಜಗಳ ಆಗುತ್ತದೆ, ಕೆಲಸದ ಸ್ಥಳದಲ್ಲಿ ಅನ್ಯೋನ್ಯತೆ ಇರುವುದಿಲ್ಲ.

ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲತೆ ಇರುವುದಿಲ್ಲ ಒಂದು ವೇಳೆ ಸರ್ಕಾರಿ ಕೆಲಸ ಸಿಕ್ಕಿದರು ನೆಮ್ಮದಿ ಇರುವುದಿಲ್ಲ. ದೇವರಿಗೆ ಹೊತ್ತ ಹರಕೆ ತೀರಿಸದೆ ಇದ್ದರೆ ವ್ಯಾಪಾರ ವ್ಯವಹಾರ ಮಾಡುತ್ತಿದ್ದವರಿಗೆ ಚೆನ್ನಾಗಿರುವ ಹಣಕಾಸಿನ ವ್ಯವಹಾರ ಇದ್ದಕ್ಕಿದ್ದಂತೆ ಕುಸಿದು ಹೋಗುತ್ತದೆ ಕೆಲವರಂತೂ ಬೀದಿಗೆ ಬೀಳುತ್ತಾರೆ. ಸಾಲ ಹೆಚ್ಚಾಗುತ್ತದೆ ಹೀಗೆ ದೇವರಿಗೆ ಹರಿಕೆ ತೀರಿಸುತ್ತಾ ಇದ್ದರೆ ಇಂತಹ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ವಿಷಯದ ಬಗ್ಗೆ ಸಲಹೆ ಕೊಡುವುದಾದರೆ ಸಣ್ಣಪುಟ್ಟ ವಿಷಯಕ್ಕೆ ದೇವರನ್ನು ಪ್ರಾರ್ಥಿಸಿಕೊಳ್ಳಿ ಹೊರತು ಹರಕೆ ಹೊತ್ತುಕೊಳ್ಳಬಾರದು ಒಂದು ವೇಳೆ ಹರಕೆ ಹೊತ್ತುಕೊಂಡರೆ ಫಲ ಸಿಕ್ಕಿದ ಕೂಡಲೆ ಹರಕೆಯನ್ನು ತೀರಿಸಬೇಕು.

ಬ್ಯಾಂಕ್ ನಲ್ಲಿ ಸಾಲ ತೆಗೆದುಕೊಂಡರೆ ಹೇಗೆ ನಿರ್ದಿಷ್ಟ ಸಮಯದಲ್ಲಿ ತೀರಿಸಬೇಕೊ ಹಾಗೆಯೆ ದೇವರು ಕೂಡ ಬ್ಯಾಂಕ್ ಇದ್ದಂತೆ ನಮಗೆ ಹರಕೆ ಹೊತ್ತು ಅದರ ಫಲ ದೊರೆತ ಮೇಲೆ ಹರಕೆಯನ್ನು ತಪ್ಪದೆ ತೀರಿಸಬೇಕು ಫಲ ದೊರೆತ ನಂತರ ಕಡ್ಡಾಯವಾಗಿ ಹರಕೆಯನ್ನು ತೀರಿಸುವುದು ಪರಿಹಾರ. ದೇವರಿಗೆ ಹರಕೆ ಕಟ್ಟಿಕೊಂಡ ನಂತರ ಇಷ್ಟಾರ್ಥಗಳು ಈಡೇರಿದ ನಂತರ ಹರಕೆಯನ್ನು ಮರೆಯಬಾರದು ಒಂದು ವೇಳೆ ಮರೆತರೆ ಭಗವಂತ ಯಾವುದಾದರೂ ಒಂದು ರೂಪದಲ್ಲಿ ತನ್ನ ಬಳಿ ಕರೆಸಿಕೊಳ್ಳುತ್ತಾನೆ ಜೊತೆಗೆ ಕಷ್ಟದ ಸಮಯದಲ್ಲಿ ಕಟ್ಟಿಕೊಂಡ ಹರಕೆಯನ್ನು ನೆನಪಿಸುತ್ತಾನೆ ಎಂದು ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಯಾರೆ ಆದರೂ ಕಷ್ಟದ ಸಮಯದಲ್ಲಿ ಹರಕೆಯನ್ನು ಹೊತ್ತುಕೊಂಡಿದ್ದರೆ ಫಲ ಸಿಕ್ಕಿದ ಕೂಡಲೆ ಮರೆಯದೆ ಹರಕೆಯನ್ನು ತೀರಿಸಿ ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ದೇವರ ಆಶೀರ್ವಾದ ಎಲ್ಲರ ಮೇಲಿರಲಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: