WhatsApp Group Join Now
Telegram Group Join Now

Darshan thoogudeepa ಸ್ನೇಹಿತರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರು ನಮ್ಮ ಕನ್ನಡ ಸಿನಿಮಾ ರಂಗ ಕಂಡಂತಹ ನಿಷ್ಕಲ್ಮಶ ಮೃದು ಹೃದಯಿ ಎಂದರೆ ತಪ್ಪಾಗಲಾರದು. ಯಾರೇ ಕಷ್ಟದಲ್ಲಿದ್ದಾರೆ ಎಂಬ ಮಾಹಿತಿ ತಿಳಿದರೆ ಸಾಕು ಅವರಿಗೆ ತಮ್ಮ ವತಿಯಿಂದ ಕೈಲಾದಷ್ಟು ಸಹಾಯ ಮಾಡುವ ಮೂಲಕ ತಮ್ಮಂದ ಇತರರಿಗೆ ನಾಲ್ಕು ಒಳ್ಳೆಯ ಕೆಲಸವಾಗಬೇಕೆಂಬ ನಿಟ್ಟಿನಲ್ಲಿ ಬದುಕುತ್ತಿದ್ದಾರೆ.

ಹೀಗೆ ಕೇವಲ ನಟನೆ ಹಾಗೂ ಸಿನಿಮಾಗಳಿಗೆ ಮಾತ್ರ ಸೀಮಿತವಾಗದಂತಹ ದರ್ಶನವರು ವನ್ಯಜೀವಿ ಸಂರಕ್ಷಣೆಯ ಜವಾಬ್ದಾರಿಯನ್ನು ಹೊತ್ತು ತಮ್ಮ ಅಭಿಮಾನಿಗಳು ಕೂಡ ಸಾಕು ಪ್ರಾಣಿಗಳನ್ನು ದತ್ತು ಪಡೆಯಿರಿ ಎಂಬ ಕರೆಯನ್ನು ನೀಡಿದರು. ಇದರ ಜೊತೆಗೆ ಸದಾ ಸನ್ಮಾರ್ಗದ ಹಾದಿಯಲ್ಲಿ ನಡೆಯುತ್ತಾ, ಕಷ್ಟ ಎಂದು ಬೇಡಿ ಬಂದವರಿಗೆ ಇಲ್ಲ ಎನ್ನದೆ ತಮ್ಮ ಕೈಲಾದಂತಹ ಸಹಾಯ ಮಾಡುವಂತಹ ದರ್ಶನವರು ಅಭಿಮಾನಿಯ ಆಸೆಯನ್ನು ಈಡೇರಿಸಿರುವುದು ಇದೆ ಮೊದಲಿನಲ್ಲ.

ಹೌದು ಗೆಳೆಯರೇ, ಯಾರೇ ದರ್ಶನವರನ್ನು ನೋಡಬೇಕೆಂಬ ಬಯಕೆಯನ್ನು ವ್ಯಕ್ತಪಡಿಸಿದರೆ ಸಾಕು ಸ್ವತಃ ದರ್ಶನವರೇ ಅವರ ಮನೆಗೆ ಹೋಗುತ್ತಾರೆ ಇಲ್ಲ ಆ ಅಭಿಮಾನಿಯನ್ನು ತಮ್ಮ ಮನೆಗೆ ಕರೆಸಿಕೊಂಡು ಅವರ ಜೊತೆಗೆ ಕಾಲ ಕಳೆಯುತ್ತಾರೆ. ಹೀಗಿರುವಾಗ ಸರಿಗಮಪ ಕಾರ್ಯಕ್ರಮದಲ್ಲಿ ಈ ಹಿಂದೆ ರೇವಣಸಿದ್ದ ಎಂಬ ದೇವರು ಮಗ ತನ್ನ ನೆಚ್ಚಿನ ನಟನನ್ನು ಒಮ್ಮೆ ಸ್ಪರ್ಶಿಸಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದರು.

ಈ ಒಂದು ಮಾಹಿತಿ ದರ್ಶನ್ ಅವರ ಗಮನಕ್ಕೆ ಬಂದು ಅವರನ್ನು ತಮ್ಮ ಮನೆಗೆ ಕರೆಸಿಕೊಂಡು ಅವರ ಜೊತೆ ಕೆಲ ಕ್ಷಣಗಳನ್ನು ಕಳೆಯುತ್ತಾ ಅಭಿಮಾನಿಗೆ ಸಂತಸವನ್ನು ತರಿಸಿದ್ದಾರೆ. ಹೌದು ಗೆಳೆಯರೇ ತಮ್ಮ ಅದ್ಭುತ ಕಂಠ ಸಿರಿಯ ಮೂಲಕ ಸರಿಗಮಪ ಕಾರ್ಯಕ್ರಮದಲ್ಲಿ ಕನ್ನಡಿಗರ ಮನಸ್ಸನ್ನು ಸೆಳೆದಿದ್ದ ರೇವಣಸಿದ್ದ(Revanasidda) ಅವರಿಗೆ ದರ್ಶನವರನ್ನು ಒಮ್ಮೆ ಭೇಟಿ ಮಾಡಿ ಅವರ ಕೈಯನ್ನು ಸ್ಪರ್ಶಿಸಬೇಕು ಎಂಬ ಆಸೆ ಇರುತ್ತದೆ.

ಅದರಂತೆ ಮನೆಗೆ ಭೇಟಿ ನೀಡಿ ಅವರನ್ನು ಅಪ್ಪಿಕೊಂಡು ಅವರ ಎದೆ ಮೇಲೆ ಇರುವಂತಹ ನನ್ನ ಸೆಲೆಬ್ರಿಟಿಸ್ ಟ್ಯಾಟೂ(My celebrities tattoo) ವನ್ನು ಸ್ಪರ್ಶಿಸಿ ದರ್ಶನ್ ಅವರೊಂದಿಗೆ ಸುಂದರ ಕ್ಷಣಗಳನ್ನು ಕಳೆಸಿದ್ದಾರೆ. ಸದ್ಯ ಈ ಫೋಟೋಗಳೆಲ್ಲವೂ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದ್ದು ದಾಸನ(dasa) ಈ ನಡೆಗೆ ಅಭಿಮಾನಿಗಳ ವತಿಯಿಂದ ಮೆಚ್ಚುಗೆಯ ಸಾಗರವೇ ಹರಿದು ಬರುತ್ತಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: