ನಿಮ್ಮ ಅಂಗೈಯಲ್ಲಿರುವ ಸೂರ್ಯ ರೇಖೆಯ ನಿಜವಾದ ಸತ್ಯ ತಿಳಿಯಿರಿ

0

ಜ್ಯೋತಿಷ್ಯ ಎನ್ನುವುದು ಸಮುದ್ರವಿದ್ದಂತೆ ಅದರಲ್ಲಿ ಸಂಖ್ಯಾಶಾಸ್ತ್ರ, ಸಾಮುದ್ರಿಕ ಶಾಸ್ತ್ರ ಮೊದಲಾದ ರೀತಿಯಲ್ಲಿ ಭವಿಷ್ಯವನ್ನು ಹೇಳುತ್ತಾರೆ. ಹಸ್ತದಲ್ಲಿ ಮೂಡಿ ಬಂದಿರುವ ರೇಖೆಯ ಆಧಾರದ ಮೇಲೆ ಭವಿಷ್ಯವನ್ನು ಹೇಳಬಹುದು ಹಾಗಾದರೆ ಈ ರಹಸ್ಯವನ್ನು ಈ ಲೇಖನದಲ್ಲಿ ನೋಡೋಣ

ಜ್ಯೋತಿಷ್ಯದಲ್ಲಿ ಹಲವು ರೀತಿಯಲ್ಲಿ ಮುಂದಿನ ಭವಿಷ್ಯವನ್ನು ಹೇಳಬಹುದು ಅದೆ ರೀತಿ ಹಸ್ತವನ್ನು ನೋಡಿ ಮುಂದಿನ ಭವಿಷ್ಯ ಹೇಳಬಹುದಾಗಿದೆ. ಹೆಣ್ಣು ಮಕ್ಕಳಾದರೆ ಎಡಗೈ ಗಂಡು ಮಕ್ಕಳಾದರೆ ಬಲಗೈ ನೋಡಿ ಶಾಸ್ತ್ರ ಹೇಳುತ್ತಾರೆ. ಹಸ್ತದಲ್ಲಿ ಅನಾಮಿಕ ಬೆರಳಿನ ಕೆಳಗೆ ಇರುವ ರೇಖೆಯು ಸೂರ್ಯ ರೇಖೆ ಆಗಿರುತ್ತದೆ. ಕೆಲವರಿಗೆ ಸೂರ್ಯ ರೇಖೆ ಚಿಕ್ಕದಾಗಿರುತ್ತದೆ ಹೀಗಿದ್ದರೆ ಇವರು ತಮ್ಮ ನೌಕರಿ ಅಥವಾ ಬಿಸಿನೆಸ್ ಪ್ರಾರಂಭಿಸಿರುತ್ತಾರೆ ಹಾಗೂ ಅದಕ್ಕೂ ಮುನ್ನ ಇವರ ಜೀವನದಲ್ಲಿ ಏನು ನಡೆದಿದ್ದರೂ ಅದು ಸಂಘರ್ಷದಿಂದ ಕೂಡಿರುತ್ತದೆ, ಸಮಸ್ಯೆ ಬಹಳಷ್ಟು ಕಾಡುತ್ತದೆ. ಇವರು ತಮ್ಮ ಕರಿಯರ್ ಪ್ರಾರಂಭಿಸಿದ ನಂತರ ಒಳ್ಳೆಯ ಅವಕಾಶಗಳು ಲಭ್ಯವಾಗುತ್ತದೆ ಇವರು ಅವಕಾಶಗಳನ್ನು ಬಿಡದೆ ಅದನ್ನು ಸದುಪಯೋಗಪಡೆದುಕೊಳ್ಳುತ್ತಾರೆ ಮುಂದೆ ಅವರು ತಮ್ಮ ಗುರಿಯನ್ನು ತಲುಪುತ್ತಾರೆ ಹಾಗೂ ಅದು ಹೃದಯ ರೇಖೆಯನ್ನು ಕ್ರಾಸ್ ಮಾಡುತ್ತಿರುವುದಿಲ್ಲ.

ಸೂರ್ಯ ರೇಖೆ ಉದ್ದವಾಗಿದ್ದರೆ ಹೃದಯ ರೇಖೆ ದಾಟಿ ಮಸ್ತಿಷ್ಕ ರೇಖೆಯನ್ನು ತಲುಪಿದರೆ ಅವರ ಕರಿಯರ್ ನಲ್ಲಿ ಹೆಚ್ಚಿನ ಯಶಸ್ಸು ಪಡೆಯುತ್ತಾರೆ. ಕಠಿಣ ಶ್ರಮ ಪಟ್ಟರೆ ಯಶಸ್ಸು ಸಿಗುತ್ತದೆ. ಒಂದು ವೇಳೆ ಸೂರ್ಯ ಪರ್ವತದ ಮೇಲೆ ಎರಡು ಚಿಕ್ಕಚಿಕ್ಕ ನೇರವಾದ ರೇಖೆ ಕಂಡು ಬಂದರೆ ಅವರು ಆರ್ಥಿಕವಾಗಿ ಬಹಳ ನೊಂದಿದ್ದರೆ ಅವರಿಗೆ ಈ ರೇಖೆಗಳು ಅದೃಷ್ಟ ತಂದುಕೊಡುತ್ತದೆ. ಇವರು ಕೇವಲ ಒಂದು ಮೂಲದಿಂದ ಆದಾಯ ಪಡೆದುಕೊಳ್ಳದೆ ಹಲವು ಮೂಲಗಳಿಂದ ಆದಾಯವನ್ನು ಪಡೆದುಕೊಳ್ಳುತ್ತಾರೆ. ಹಸ್ತದಲ್ಲಿ ಶನಿ ಪರ್ವತದ ಮೇಲೆ ಒಂದು ನೇರವಾದ ಗೆರೆ ಕೆಳಗಡೆ ಇರುತ್ತದೆ ಅದನ್ನು ಭಾಗ್ಯರೇಖೆ ಎನ್ನುತ್ತೇವೆ ಇದು ಸೂರ್ಯ ರೇಖೆಯನ್ನು ಕೂಡಿದ್ದರೆ ಇವರಿಗೆ ಆದಾಯದ ಹಲವು ಮೂಲಗಳು ಲಭಿಸುತ್ತವೆ. ಸೂರ್ಯ ರೇಖೆಯ ಮೇಲೆ ಕ್ರಾಸ್ ಆಗಿ ಕೆಳಗಡೆ ಒಂದು ಚಿಕ್ಕದಾದ ರೇಖೆ ಕಂಡು ಬಂದರೆ ಇವರು ಹೆಚ್ಚಾಗಿ ಜನರಿಂದ ಮೋಸ ಹೋಗುತ್ತಾರೆ ನಂಬಿದ ವ್ಯಕ್ತಿಯಿಂದಲೆ ಮೋಸ ಹೋಗುತ್ತಾರೆ ಹೀಗಾಗಿ ಇವರು ನಂಬುವಾಗ ಎಚ್ಚರಿಕೆಯಿಂದ ನಂಬಬೇಕು.

ಸೂರ್ಯ ರೇಖೆಯಿಂದ ಮೇಲ್ಗಡೆ ಅಡ್ಡವಾಗಿ ಚಿಕ್ಕದಾದ ಗೆರೆ ಹೋಗಿರುವುದು ಕಂಡುಬಂದರೆ ಯಾವುದಾದರೂ ವಿಷಯಕ್ಕೆ ಇವರ ಮನಸ್ಸು ಎರಡು ಭಾಗವಾಗುತ್ತದೆ ಅಂದರೆ ಮನಸ್ಸು ಚಂಚಲವಾಗಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಬಹಳ ಗೊಂದಲ ಕಂಡು ಬರುತ್ತದೆ. ಸೂರ್ಯ ರೇಖೆಯ ಮೇಲೆ ಎರಡು ರೇಖೆಗಳಿಗಿಂತ ಹೆಚ್ಚಿನ ರೇಖೆಗಳು ಕ್ರಾಸ್ ಆಗಿರುವುದು ಕಂಡು ಬಂದರೆ ಜೀವನದಲ್ಲಿ ಒಂದಲ್ಲ ಒಂದು ವಿಷಯಕ್ಕೆ ಏರುಪೇರು ಸಮಸ್ಯೆಯನ್ನು ಹುಟ್ಟಿಸುತ್ತದೆ ಮನಸ್ಸನ್ನು ಶಾಂತವಾಗಿರುವಂತೆ ನೋಡಿಕೊಳ್ಳಬೇಕು. ನಿಮ್ಮ ಹಸ್ತದಲ್ಲಿ ಸೂರ್ಯ ರೇಖೆ ಯಾವ ರೀತಿ ಇದೆ ಎಂಬುದನ್ನು ನಮಗೆ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: