ಪ್ರತೀ ದಿನ ಉತ್ಸುಕತೆಯಿಂದ ಇರಲು ಜಸ್ಟ್ ಹೀಗೆ ಮಾಡಿ ನಿಮ್ಮನ ತಡೆಯೋಕೇ ಆಗಲ್ಲ

0

ಪ್ರತೀ ದಿನ ಉತ್ಸುಕತೆಯಿಂದ ಇರಲು ನಾವು ಏನೆಲ್ಲಾ ಪ್ರಯತ್ನ ಪಟ್ಟರೂ ಸಹ ಸ್ವಲ್ಪ ಕೆಲಸ ಮಾಡುತ್ತಲೇ ಸುಸ್ತಾಗಿ ಬಿಡುತ್ತೇವೆ. ಇಡೀ ದಿನದ ಕೆಲಸವೆಲ್ಲ ಹಾಗೆಯೇ ಉಳಿಯುತ್ತದೆ ಹಾಗಾಗಿ ನಾವು ದಿನವಿಡೀ ಲವಲವಿಕೆಯಿಂದ ಇರಲು, ನಮ್ಮ ದೇಹದ ಸುಸ್ತನ್ನು ಹೋಗಲಾಡಿಸಲು ನಾವು ಕೆಲವು ವಿಧಾನಗಳನ್ನು ಅನುಸರಿಸಬಹುದು ಅದರಲ್ಲೂ ನಾವು ಈ ಲೇಖನದಲ್ಲಿ ತಿಳಿಸುವ ಒಂದು ಎನರ್ಜಿ ಔಷಧ ಶೇಂಗಾ ನಮ್ಮ ಉತ್ಸುಕತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಈ ಲೇಖನದಲ್ಲಿ ನಾವು ದಿನವಿಡೀ ಲವಲವಿಕೆಯಿಂದ, ಉತ್ಸುಕತೆಯಿಂದ ಇರಬೇಕು ಎಂದರೆ ಕಡಲೆಕಾಯಿಯನ್ನು ಹೇಗೆ ಬಳಕೆ ಮಾಡಬೇಕು ಎನ್ನುವುದನ್ನು ನೋಡೋಣ.

ನಾವು ಉತ್ಸುಕತೆಯಿಂದ ಇರಲು ನಾವಿಲ್ಲಿ ತಿಳಿಸುವ ಮೊದಲ ಔಷಧ ಅಥವಾ ಪಾನೀಯ ಎಂದರೆ ಅದು ಎಳನೀರು. ಎಳನೀರು ದೇಹಕ್ಕೆ ಬಹಳ ತಂಪು ಎಂದು ಹೇಳುತ್ತಾರೆ. ಪ್ರತೀ ದಿನ ಬೆಳಿಗ್ಗೆ ಒಂದು ಎಳನೀರಿಗೆ ಅರ್ಧ ಭಾಗ ನಿಂಬೆ ಹಣ್ಣಿನ ರಸವನ್ನು ಸೇರಿಸಿ ಇದನ್ನು ಕುಡಿಯಬೇಕು ಹಾಗೂ ಇದನ್ನು ಕುಡಿದು ಒಂದು ತಾಸಿನವರೆಗೂ ಬೇರೆ ಯಾವುದೇ ಆಹಾರವನ್ನೂ ಸೇವಿಸಬಾರದು. ಇದನ್ನು ಕುಡಿದು ವ್ಯಾಯಾಮ, ವಾಕಿಂಗ್ ಮಾಡಬಹುದು. ಇದನ್ನು ಕುಡಿಯುವುದರಿಂದ ದೇಹದಲ್ಲಿ ಎನರ್ಜಿ ಉತ್ಪತ್ತಿಯಾಗಿ ದಿನದ ಇಪ್ಪತ್ನಾಲ್ಕು ಗಂಟೆಯೂ ಸಹ ಲವಲವಿಕೆಯಿಂದ ಇರುವ ಹಾಗೆ ಮಾಡುತ್ತದೆ.

ಎಳನೀರು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುವುದು ಮತ್ತು ಬಾಯಾರಿಕೆಯನ್ನು ನೀಗಿಸುವುದು ಮಾತ್ರವಲ್ಲ. ಸೇವಿಸುವುದರಿಂದ ರಕ್ತದಲ್ಲಿನ ಗ್ಲೂಕೋಸ್‌ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬಾಡಿಯನ್ನು ರೀಹೈಡ್ರೇಟ್‌ ಮಾಡುತ್ತದೆ. ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಎಳನೀರಿನಲ್ಲಿರುವ ಪೊಟ್ಯಾಷಿಯಮ್ ಅಂಶ ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ನಿರ್ವಹಿಸಲು ಸಹಕರಿಸುತ್ತದೆ. ಪೊಟ್ಯಾಷಿಯಮ್ ಮತ್ತು ಮ್ಯಾಂಗನೀಸ್ ಸಮೃದ್ಧ ಟೆಂಡರ್‌ ಕೋಕನೆಟ್‌ ವಾಟರ್‌ನೈಸರ್ಗಿಕವಾಗಿ ಕಡಿಮೆ ಕ್ಯಾಲೊರಿ ಹೊಂದಿದ್ದು,ಜೀರ್ಣಕ್ರಿಯೆಯನ್ನು ಉತ್ತಮಗೊಳಿಸಿ, ಮೆಟಾಬಲಿಸಂ ಅನ್ನು ಉತ್ತಮಗೊಳಿಸುತ್ತದೆ. ಇದಲ್ಲದೇ, ಟಾಕ್ಸಿನ್‌ ಹೊರಹಾಕಲು ಹೆಲ್ಪ್‌ ಮಾಡುವುದರೊಂದಿಗೆ, ದೇಹದಲ್ಲಿ ನೀರಿನ ಪ್ರಮಾಣವನ್ನು ನಿಯಂತ್ರಿಸುತ್ತದೆ.

ಇನ್ನೂ ಎರಡನೆಯದಾಗಿ ಎಳ್ಳು. ಒಂದು ಮುಷ್ಟಿ ಅಷ್ಟು ಎಳ್ಳನ್ನು ನೀರಿನಲ್ಲಿ ನೆನೆ ಹಾಕಿ ಅದನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಂಡು ಅದಕ್ಕೆ ಬೆಲ್ಲದ ನೀರನ್ನು ಸೇರಿಸಿ ಕುಡಿಯಬೇಕು. ಇದರಿಂದಲೂ ಸಹ ನಮ್ಮ ದೇಹಕ್ಕೆ ಶಕ್ತಿ ದೊರೆಯುತ್ತದೆ. ವಯಸ್ಸಾದ ಮೇಲೆ ಮೂಳೆಗಳು ತಮ್ಮ ಬಲ ಕಳೆದುಕೊಳ್ಳುತ್ತವೆ. ಸಕ್ಕರೆ ಕಾಯಿಲೆ ಹೊಂದಿದವರಿಗೂ ಕೂಡ ಎಳ್ಳು ಅತ್ಯುತ್ತಮವಾದ ಪರಿಹಾರವನ್ನು ಒದಗಿಸುತ್ತದೆ ಎಂದು ಹೇಳಬಹುದು. ಏಕೆಂದರೆ ಇದರಲ್ಲಿ ಕಡಿಮೆ ಪ್ರಮಾಣದ ಗ್ಲೈಸೆಮಿಕ್ ಸೂಚ್ಯಂಕ ಕಂಡುಬರುತ್ತದೆ. ಹಾಗಾಗಿ ಮಧುಮೇಹಿ ರೋಗಿಗಳು ಎಳ್ಳು ಸೇವನೆಯಲ್ಲಿ ಆಲೋಚನೆ ಮಾಡುವ ಅವಶ್ಯಕತೆ ಇಲ್ಲ. ನಮ್ಮ ದೇಹಕ್ಕೆ ಎಳ್ಳು ಕೇವಲ ಉಷ್ಣದ ಪ್ರಭಾವವನ್ನು ಹೆಚ್ಚು ಮಾಡುವ ಆಹಾರ ಪದಾರ್ಥವಾಗಿದೆ. ಹಾಗಾಗಿ ವಾತ ದೋಷವನ್ನು ಸುಲಭವಾಗಿ ಇದು ಸಮತೋಲನ ಮಾಡುತ್ತದೆ.

ಇನ್ನೂ ಮೂರನೆಯದಾಗಿ ಹಾಗೂ ಕೊನೆಯದಾಗಿ ಶೇಂಗಾ. ಇದನ್ನು ಹೇಗೆ ಬಳಕೆ ಮಾಡುವುದು ಎಂದು ನೋಡುವುದಾದರೆ, ರಾತ್ರಿ ಒಂದು ಮುಷ್ಟಿ ಶೆಂಗಾವನ್ನು ನೆನೆಹಾಕಿ ಬೆಳಿಗ್ಗೆ ಅದನ್ನು ತೊಳೆದು ಒಂದು ಬಾಳೆ ಹಣ್ಣಿನ ಜೊತೆಗೆ ನೆನೆಸಿದ ಶೇಂಗಾ ಬೀಜವನ್ನು ಸಹ ಹಾಕಿ ಅದನ್ನು ರುಬ್ಬಿಕೊಂಡು ಅದಕ್ಕೆ ಬೇಕಾದಷ್ಟು ನೀರನ್ನು ಸೇರಿಸಿ ಎರಡು ಚಮಚ ಜೇನುತುಪ್ಪವನ್ನು ಸೇರಿಸಿ ಕುಡಿಯಬೇಕು. ಇದನ್ನು ತಿಂಡಿ ತಿನ್ನಲು ಅರ್ಧ ಗಂಟೆ ಮೊದಲು ಸೇವಿಸಬೇಕು ಹೀಗೆ ಮಾಡುವುದರಿಂದ ಇಡೀ ದಿನ ಶಕ್ತಿ ದೊರೆಯುತ್ತದೆ ನಿಶ್ಯಕ್ತಿ ದೂರವಾಗುತ್ತದೆ. ಶೇಂಗಾ ರುಚಿಯಷ್ಟೇ ಅಲ್ಲ, ಆರೋಗ್ಯದ ವಿಚಾರದಲ್ಲಿ ಶೇಂಗಾ ದೇಹಕ್ಕೆ ಪೂರಕ. ಸಿರಿವಂತರು ಬಾದಾಮಿ ಕೊಂಡು ತಿಂದರೆ ಬಡವರು ಕಡ್ಲೇಕಾಯಿ ಚಪ್ಪರಿಸುತ್ತಾರೆ. ಆದ್ದರಿಂದಲೇ ಇದು ಬಡವರ ಬಾದಾಮಿ. ಇದರಲ್ಲಿ ಅಧಿಕವಾಗಿರುವ ಪೋಷಕಾಂಶಗಳೇ ಇದಕ್ಕೆ ಬಾದಾಮಿಗೆ ಸರಿಗಟ್ಟುವ ಹೆಗ್ಗಳಿಕೆಯನ್ನು ತಂದುಕೊಟ್ಟಿದೆ.

ಶೇಂಗಾವನ್ನು ಬ್ರೈನ್ ಫುಡ್ ಎಂದು ಕರೆಯಬಹುದು. ಯಾಕೆಂದರೆ ಇದು ಸ್ಮರಣ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಇದರಲ್ಲಿ ವಿಟಮಿನ್ ಬಿ3 ಅಥವಾ ನಿಯಾಸಿನ್ ಎಂಬ ಅಂಶ ಇದ್ದು ಇದು ಮೆದುಳನ್ನು ಚುರುಕಾಗಿಸುತ್ತದೆ. ಇದು ರಕ್ತದಲ್ಲಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಕೂಡಾ ಸಹಕಾರಿಯಾಗಿದೆ. ಇದರಲ್ಲಿರುವ ತಾಮ್ರದಂಶ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೊಗೊಳಿಸುತ್ತದೆ. ಶೇಂಗಾವನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಹೃದಯದ ಆರೋಗ್ಯವೂ ಉತ್ತಮವಾಗಿರುತ್ತದೆ. ಹೃದಯಾಘಾತ ಇತ್ಯಾದಿ ಸಮಸ್ಯೆಗಳನ್ನೂ ತಪ್ಪಿಸಬಹುದು. ಆದ್ದರಿಂದ ವಾರಕ್ಕೆ ನಾಲ್ಕು ದಿನ ಒಂದು ಹಿಡಿ ಶೇಂಗಾ ಬೀಜವನ್ನು ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಕಡಲೆ ಕಾಯಿಯಲ್ಲಿ ಕ್ಯಾಲ್ಸಿಯಂ ಅಧಿಕವಿದೆ. ಆದ್ದರಿಂದ ಕಡಲೆ ಕಾಯಿ ಸೇವನೆ ಮೂಳೆ, ಎಲುಬುಗಳು ಗಟ್ಟಿಯಿರುವಂತೆ ನೋಡಿಕೊಳ್ಳುತ್ತದೆ. ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!