ಗಂಡ ನಿಮ್ಮ ಮಾತು ಕೇಳಬೇಕೆ? ಈ ಗಿಡದ ಬೇರನ್ನು ನಿಮ್ಮ ಬಳಿ ಇಟ್ಟು ನೋಡಿ

0

ನಿಮ್ಮ ಯಜಮಾನರು ನಿಮ್ಮ ಮಾತು ಕೇಳುತ್ತಿಲ್ಲವೇ ಹಾಗಾದರೆ ಬಲಮುರಿ ಎಡಮುರಿ ಗಿಡದಿಂದ ಈ ರೀತಿಯಾಗಿ ಮಾಡಿ ಜೀವನದಲ್ಲಿ ಗಂಡ ಹೆಂಡತಿ ಮದುವೆಯಾದ ಮೇಲೆ ಸುಖವಾಗಿ ಸಂತೋಷದಿಂದ ಇದ್ದರೆ ಯಾವ ತೊಂದರೆಯೂ ಇರುವುದಿಲ್ಲ ಆದರೆ ಕೆಲವೊಬ್ಬರ ಸಹವಾಸದಿಂದ ಗಂಡನು ಹೆಂಡತಿ ಜೊತೆಗೆ ಚೆನ್ನಾಗಿರುವುದಿಲ್ಲ ಹಾಗೆ ಆಕೆಯನ್ನು ಕಂಡರೆ ಆಗುತ್ತಿರುವುದಿಲ್ಲ ಹೀಗೆ ನೂರಾರು ತೊಂದರೆಗಳು ಅವರ ನಡುವೆ ಬರುತ್ತಿರುತ್ತವೆ ಆಗ ಹೆಂಡತಿಯಾದವಳಿಗೆ ಬರೀ ಗಂಡನ ಚಿಂತೆ ಆಗಿರುತ್ತದೆ. ಗಂಡ ಬೇರೆಯವರ ಮಾತು ಕೇಳಿ ತನ್ನ ಜೊತೆ ಜಗಳಾಡುತ್ತಾರೆ ಎಂದು ತುಂಬಾ ಮನಸ್ಸಿನಲ್ಲಿ ಬೇಜಾರನ್ನು ಇಟ್ಟುಕೊಳ್ಳಬೇಕಾಗುತ್ತದೆ.

ಕೆಲವೊಬ್ಬರ ದಾಂಪತ್ಯದ ಜೀವನದಲ್ಲಿ ಕೆಟ್ಟ ಸಮಯ ಬಂದಾಗ ಧೈರ್ಯದಿಂದ ಕಷ್ಟವನ್ನು ಎದುರಿಸುವ ಪ್ರಯತ್ನ ಮಾಡಬೇಕು. ಗಂಡ ಬೇರೆಯವರ ಸಹವಾಸ ಮಾಡಿದರೆ ಹೆಂಡತಿಗೆ ಸಾಯುವಷ್ಟು ದುಃಖ ಆಗಿರುತ್ತದೆ. ಇನ್ನು ಕೆಲವೊಬ್ಬ ಗಂಡಸರು ಬೇರೆಯವರ ಮಾತನ್ನು ಕೇಳಿ ಹೆಂಡತಿಗೆ ಹೊಡೆಯುವುದು ಜಗಳ ಮಾಡುವುದು ಕುಡಿಯುವುದು ಮಾಡುತ್ತಾರೆ.

ಆಗ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಎಲ್ಲವೂ ಮಾಯ ಆಗುತ್ತದೆ. ಕೆಲವೊಬ್ಬ ಗಂಡ-ಹೆಂಡತಿಯ ನಡುವೆ ಅತಿಯಾದ ಪ್ರೀತಿ ಇರುವುದಕ್ಕಿಂತ ಅತಿಯಾದ ನೋವೇ ಹೆಚ್ಚಾಗಿರುತ್ತದೆ. ಹಾಗಾದರೆ ಗಂಡ ಯಾವುದೇ ತಪ್ಪು ಕೆಲಸ ಮಾಡದಂತೆ ಮತ್ತು ಹೆಂಡತಿಯೊಡನೆ ಚೆನ್ನಾಗಿರಬೇಕೆಂದರೆ ಮಹಿಳೆಯರು ಈ ರೀತಿಯಾದ ಪರಿಹಾರವನ್ನು ಮನೆಯಲ್ಲಿ ಮಾಡಬೇಕು ಹಾಗಾದರೆ ಈ ಪರಿಹಾರವನ್ನು ಹೇಗೆ ಮಾಡುವುದು ಮತ್ತು ಏಕೆ ಮಾಡಬೇಕು ಎಂಬುದನ್ನು ನಾನು ಈ ಮಾಹಿತಿಯಲ್ಲಿ ನಿಮಗೆ ತಿಳಿಸುತ್ತೇನೆ.

ಮೊದಲನೆಯದಾಗಿ ಈ ಪರಿಹಾರ ಮಾಡಲು ಬೇಕಾಗಿರುವ ಸಾಮಾಗ್ರಿಗಳ ಬಗ್ಗೆ ತಿಳಿಯೋಣ. ಬಲಮುರಿ ಹಾಗೂ ಎಡಮುರಿ ಎಂಬ ಗಿಡ ಇರುತ್ತದೆ. ಅಥವಾ ಒಂದು ಬಲಮುರಿ ಎಡಮುರಿ ಎಂಬುದು ಸಿಗುತ್ತದೆ. ನಂತರ ಒಂದು ಕೆಂಪು ದಾರ ಹಾಗೂ ಬಿಳಿ ದಾರ ಬೇಕಾಗುತ್ತದೆ. ಮೊದಲು ಈ ಪರಿಹಾರವನ್ನು ಯಾವ ದಿನದಂದು ಮಾಡಬೇಕು ಎಂದು ಹೇಳುತ್ತೇನೆ. ಈ ಪರಿಹಾರವನ್ನು ನೀವು ಮಂಗಳವಾರ ದಿನದಂದು ಮಾಡಬೇಕು.

ಇದಕ್ಕೆ ಒಳ್ಳೆಯ ಸಮಯ ಎಂದರೇನು ಬೆಳಗ್ಗೆ 5:00 ಗಂಟೆ ಇಂದ 7:00 ಮಧ್ಯಾಹ್ನ 11 ಗಂಟೆಯಿಂದ 1 ಗಂಟೆಯವರೆಗೆ ಹಾಗೂ ಸಾಯಂಕಾಲ ನಾಲ್ಕು ಗಂಟೆಯಿಂದ ಆರು ಗಂಟೆವರೆಗೆ ಮಾಡಬಹುದು ಮೊದಲು ಸ್ನಾನ ಮಾಡಿ ನಂತರ ಬಲಮುರಿ ಎಡಮುರಿ ಒಂದು ಕೈಯಲ್ಲಿ ಇಟ್ಟುಕೊಳ್ಳಬೇಕು ನಂತರ ಅದಕ್ಕೆ ಕೆಂಪು ದಾರ ಸುತ್ತುತ್ತಾ ಬರಬೇಕು. ಕೆಂಪು ದಾರ ಮಂಗಳಗ್ರಹದ ಸಂಕೇತ ಹಾಗೂ ಬಿಳಿ ದಾರ ಮಹಿಳೆಯರಿಗೆ ತುಂಬಾ ಶ್ರೇಷ್ಠವಾದದ್ದು ನಂತರ ಕೆಂಪು ದಾರದ ಮೇಲೆ ಬಿಳಿ ದಾರವನ್ನು ಸುತ್ತುತ್ತಾ ಬರಬೇಕು.

ಇಷ್ಟು ಮಾಡಿದ ನಂತರ ಎಡಗೈಯಲ್ಲಿ ಅದನ್ನು ಇಟ್ಟುಕೊಳ್ಳಬೇಕು. ಬಲಗೈಯಿಂದ ಮುಚ್ಚಿಕೊಳ್ಳಬೇಕು ಮನಸ್ಸಿನಲ್ಲಿ ನನ್ನ ಗಂಡ ಯಾರ ಮಾತು ಕೇಳಬಾರದು ನನ್ನ ಮತ್ತು ನನ್ನ ಗಂಡನ ನಡುವೆ ದಾಂಪತ್ಯ ಜೀವನದಲ್ಲಿ ತೊಂದರೆಗಳು ಬರಬಾರದು ಎಂದು ಕೇಳಿಕೊಳ್ಳಬೇಕು. ಈ ಒಂದು ಮಂತ್ರವನ್ನು ನೀವು ನಿಮಗೆ ಎಷ್ಟು ಬಾರಿ ಸಾಧ್ಯವೋ ಅಷ್ಟು ಸಲ ಹೇಳಿಕೊಳ್ಳಿ. ಯಾವುದೇ ಪೂಜೆ ಅಥವಾ ಪರಿಹಾರ ಮಾಡುವ ಮುಂಚೆ ಗಣೇಶನ ಈ ಒಂದು ಮಂತ್ರವನ್ನು ಹೇಳಿಕೊಳ್ಳಬೇಕು ಮಂತ್ರ ಹೀಗಿದೆ.

ಓಂ ಶ್ರೀಂ ಹಿಂ ಕ್ಲೀಂ ಗೌಂ ಗಂ ಗಣಪತಿಯೇ ವರ ವರದ ಸರ್ವ ಜನಂ ಮೇ ವಶಮಾನಯ ಸ್ವಾಹ ಎಂದು ಹೇಳಿಕೊಳ್ಳಬೇಕು ನಂತರ ಲಕ್ಷ್ಮಿ ಗಣಪತಿ ಮಂತ್ರವನ್ನು ಹೇಳಬೇಕು. ಓಂ ಶ್ರೀಂ ಗಂ ಸೌಮ್ಯಯ ಗಣಪತಯೇ ವರ ವರದ ಸರ್ವ ಜನಂ ಮೇ ವಶಮಾನಯ ಸ್ವಾಹ ಎಂದು ಹೇಳಿಕೊಳ್ಳಬೇಕು. ಈ ರೀತಿಯಾಗಿ ಹೇಳಿಕೊಂಡು ಅದನ್ನು ನೀವು ಬಟ್ಟೆ ಇಟ್ಟುಕೊಳ್ಳುವ ಜಾಗದಲ್ಲಿ ಇಡಬೇಕು.

ಅದರಲ್ಲೂ ನಿಮ್ಮ ಹಾಗೂ ಗಂಡನ ಬಟ್ಟೆ ಇಡುವ ಸ್ಥಳದಲ್ಲಿ ಇಟ್ಟುಕೊಂಡರೆ ತುಂಬಾ ಒಳ್ಳೆಯದು. ಈ ಪರಿಹಾರವನ್ನು ನೀವು ಮಾಡಿದ ಮೇಲೆ ಸಾಕಷ್ಟು ಲಾಭವನ್ನು ಪಡೆಯುತ್ತೀರಿ ನಿಮ್ಮ ಗಂಡ ಬೇರೆಯವರ ಮಾತನ್ನು ಕೇಳುವುದನ್ನು ಬಿಡುತ್ತಾರೆ. ನೀವು ನಿಮ್ಮ ಸಾಂಸಾರಿಕ ಜೀವನದಲ್ಲಿ ತುಂಬಾ ಸುಖವಾಗಿರುತ್ತಿರಿ

Leave A Reply

Your email address will not be published.

error: Content is protected !!