ಕನ್ಯಾ ರಾಶಿಯ ಗುಣಸ್ವಭಾವ ಹೇಗಿರತ್ತೆ ಗೊತ್ತಾ ಇವರ ತಂಟೆಗೆ ಹೋಗುವ ಮುನ್ನ ಇವರ ಬಗ್ಗೆ ತಿಳಿದುಕೊಳ್ಳಿ

0

ಕನ್ಯಾರಾಶಿ ನಕ್ಷತ್ರವು ರಾಶಿಚಕ್ರದ ಆರನೇ ಚಿಹ್ನೆ ಮತ್ತು ಪರಿಪೂರ್ಣತೆಯೊಂದಿಗೆ ಕೆಲಸಗಳನ್ನು ಮಾಡುವ ರಾಶಿ ಎಂದು ಇದನ್ನು ಪರಿಗಣಿಸಲಾಗಿದೆ. ಕನ್ಯಾರಾಶಿ ವಿಶ್ವಾಸಾರ್ಹ, ಸಂಘಟಿತ, ವಿವೇಕಯುತ ಜೀವನವನ್ನು ನಡೆಸಲು ಇಷ್ಟಪಡುತ್ತಾರೆ. ಕನ್ಯಾ ರಾಶಿಯವರು ತುಂಬಾ ಪ್ರತಿಭಾವಂತರು ಮತ್ತು ಮನಸ್ಸಿಗೆ ಮುದ ನೀಡುವ ವ್ಯಕ್ತಿತ್ವದವರು.

ಈ ರಾಶಿಯಲ್ಲಿ ಜನಿಸಿದ ಹೆಚ್ಚಿನವರು ಕುಟುಂಬ, ಸ್ನೇಹಿತರು ಹಾಗೂ ಪ್ರೀತಿಪಾತ್ರರೊಂದಿಗೆ ಪ್ರಾಮಾಣಿಕರಾಗಿರುತ್ತಾರೆ ಹಾಗೂ ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಉತ್ತಮ ಸ್ವಭಾವವನ್ನು ಹೊಂದಿದ್ದಾರೆ. ಕನ್ಯಾರಾಶಿ ವ್ಯಕ್ತಿಗಳು ಬುದ್ಧಿವಂತಿಕೆಯ ಸ್ವಭಾವದವರು ತಮ್ಮ ಜ್ಞಾನವನ್ನು ವಿಸ್ತರಿಸಲು ಯಾವಾಗಲೂ ಸಿದ್ಧರಾಗಿರುತ್ತಾರೆ. ಬುಧ ಗ್ರಹದಿಂದ ಆಳಲ್ಪಡುವ ಕನ್ಯಾರಾಶಿ ಬುದ್ಧಿವಂತಿಕೆಯ ಸಂಕೇತವಾಗಿದೆ.

ಈ ರಾಶಿಯವರು ಸಾಮಾನ್ಯವಾಗಿ ಜೀವನಕ್ಕೆ ಒಂದು ವ್ಯವಸ್ಥಿತ ವಿಧಾನವನ್ನು ಹೊಂದಿರುತ್ತಾರೆ. ಯಾವುದೇ ಲೋಪ ದೋಷಗಳಾಗದಂತೆ ಕೆಲಸ ಮಾಡುತ್ತಾರೆ. ಈ ರಾಶಿಯವರು ಹೆಚ್ಚು ಶಾಂತಿ ಪ್ರಿಯರು. ಈ ರಾಶಿಯವರು ಇತರರೊಂದಿಗೆ ಹೆಚ್ಚು ತಾಳ್ಮೆಯಿಂದಿರುತ್ತಾರೆ ಮತ್ತು ಯಾವಾಗಲೂ ಜನರಲ್ಲಿ ಒಳ್ಳೆಯದನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾರೆ. ಇತರರಿಗೆ ಅಗತ್ಯವಿದ್ದರೆ ಅವರ ಕಾರ್ಯವನ್ನು ಸರಿಪಡಿಸಲು ಸಾಕಷ್ಟು ಸಮಯವನ್ನು ನೀಡುತ್ತಾರೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ವರ್ತಿಸುವ ಗುಣ ಇರುತ್ತದೆ.

ಕನ್ಯಾ ರಾಶಿಯವರು ವಿಶ್ಲೇಷಣಾತ್ಮಕ ಮನಸ್ಸನ್ನು ಹೊಂದಿದ್ದಾರೆ. ಯಾರು ಸರಿ ಯಾರು ತಪ್ಪು ಎಂಬುದನ್ನ ನಿರ್ಧಾರ ಮಾಡುವ ಗುಣ ಇವರಲ್ಲಿದೆ. ಕಠಿಣ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸಮರ್ಥರಾಗಿರುತ್ತಾರೆ. ಯಾವುದೇ ಸಮಸ್ಯೆ ಬರಲಿ ಅದರ ಎರಡು ಭಾಗಗಳನ್ನು ಸರಿಯಾಗಿ ಗಮನಿಸಿ, ಲಾಭ ನಷ್ಟಗಳನ್ನು ನೋಡಿ, ಮುಂದಿನ ಹೆಜ್ಜೆ ಇಡುತ್ತಾರೆ. ಕನ್ಯಾ ರಾಶಿಯವರು ಹೆಚ್ಚು ಆರೋಗ್ಯ ಪ್ರಜ್ಞೆ ಇರುವವರು. ವ್ಯಾಯಾಮದ ಜೊತೆಗೆ ಸಮತೋಲಿತ ಜೀವನಶೈಲಿ ಹೊಂದಿರುತ್ತಾರೆ. ಇವರು ಅನಾರೋಗ್ಯಕ್ಕೆ ತುತ್ತಾಗುವುದು ಬಹಳ ಕಡಿಮೆ. . ಆದರೆ ಶ್ವಾಸಕೋಶ, ಸೊಂಟ, ಕರುಳು ಮತ್ತು ನರಮಂಡಲದ ಸಮಸ್ಯೆಗೆ ಕೆಲವರಲ್ಲಿ ಉಂಟಾಗಬಹುದು.

ಶಿಸ್ತುಬದ್ಧ, ಪ್ರಾಮಾಣಿಕತೆ ಮತ್ತು ಕಠಿಣ ಪರಿಶ್ರಮದಿಂದ ವೃತ್ತಿಜೀವನದಲ್ಲಿ ಈ ರಾಶಿಯವರು ಸುಲಭವಾಗಿ ಯಶಸ್ಸನ್ನು ಗಳಿಸುತ್ತಾರೆ. ಪರಿಪೂರ್ಣತೆ ಇರಬೇಕು ಎಂದು ಅವರು ಇಷ್ಟಪಡುತ್ತಾರೆ. ಕನ್ಯಾ ರಾಶಿಯವರು ಬೆಳವಣಿಗೆಯ ಸಾಮರ್ಥ್ಯವನ್ನು ಹೊಂದಿರುವ ವೃತ್ತಿಗಳಾದ ಗಣಿತ, ಭೌತಶಾಸ್ತ್ರ, ಹಣಕಾಸು, ಇಂಜಿನಿಯರಿಂಗ್‌, ಸಂಶೋಧನೆ, ವೈದ್ಯಕೀಯ ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ. ರಾಶಿಚಕ್ರದಲ್ಲಿ ಕನ್ಯಾರಾಶಿ ಅತ್ಯಂತ ಪ್ರಾಮಾಣಿಕ ಚಿಹ್ನೆಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಇತರರ ಬಗ್ಗೆ ಈ ರಾಶಿಯವರಿಗೆ ಯಾವ ಭಾವನೆ ಇರುತ್ತದೆಯೋ ಅದನ್ನು ನೇರವಾಗಿ ಹೇಳುತ್ತಾರೆ.

ಈ ರಾಶಿಯವರು ಸತ್ಯ ಹೇಳಿದರೆ ನೋವಾಗುತ್ತದೆ ಎಂಬುದನ್ನ ಯೋಚಿಸುವುದಿಲ್ಲ. ಸುಳ್ಳನ್ನು ಹೇಳಲು ಬಯಸುವುದಿಲ್ಲ. ಕನ್ಯಾರಾಶಿ ವ್ಯಕ್ತಿಗಳ ಜೊತೆ ಹೆಚ್ಚು ಸಮಯ ಕಳೆಯುವುದು ಕಷ್ಟ ಎನ್ನಲಾಗುತ್ತದೆ. ಏಕೆಂದರೆ ಈ ರಾಶಿಯವರು ಹೆಚ್ಚು ಪ್ರಾಬಲ್ಯವನ್ನು ಹೊಂದಿರುತ್ತಾರೆ. ಅವರಿಗೆ ಕೆಲ ಜನರ ಬಗ್ಗೆ ಕೆಲವೊಂದು ಭಾವನೆಗಳಿರುತ್ತದೆ, ಅದು ಬದಲಾಗುವುದಿಲ್ಲ. ಹಾಗಾಗಿ ಕೆಲವೊಮ್ಮೆ ಹೆಚ್ಚು ಟೀಕೆಗಳನ್ನು ಮಾಡುತ್ತಾರೆ. ಕನ್ಯಾ ರಾಶಿಯವರು ಹೆಚ್ಚು ತೀರ್ಪು ನೀಡುವ ಸ್ವಭಾವನ್ನು ಹೊಂದಿರುತ್ತಾರೆ.

ಆ ವ್ಯಕ್ತಿಯ ಜೀವನದಲ್ಲಿ ಒಂದು ನಿರ್ದಿಷ್ಟ ದೃಷ್ಟಿಕೋನವನ್ನು ಆಧರಿಸಿ ಜನರನ್ನು ಅಳೆಯುವುದು ಮತ್ತು ನಿರ್ಣಯಿಸುತ್ತಾರೆ. ಇದೇ ಗುಣ ಜನರಿಗೆ ಇಷ್ಟವಾಗುವುದಿಲ್ಲ. ಈ ರಾಶಿಯವರ ಬಗ್ಗೆ ತಪ್ಪು ಭಾವನೆ ಹುಟ್ಟುತ್ತದೆ. ಕನ್ಯಾರಾಶಿ ವ್ಯಕ್ತಿಗಳು ಸ್ವಲ್ಪ ಸಂಪ್ರದಾಯವಾದಿ ಮತ್ತು ಹಳೆಯ ಶೈಲಿಯವರು. ಈ ರಾಶಿಯವರು ನಿಜವಾಗಿಯೂ ಆಧುನಿಕ ಬದಲಾವಣೆಗಳಿಗೆ ಒಗ್ಗುವುದಿಲ್ಲ. ಹಳೆಯ ಸಾಂಪ್ರದಾಯಿಕ ರೀತಿಯಲ್ಲಿ ವಿಷಯಗಳನ್ನು ಆದ್ಯತೆ ನೀಡುತ್ತಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: