WhatsApp Group Join Now
Telegram Group Join Now

ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ ಸಪ್ತಪದಿಯನ್ನು ತುಳಿಯುವ ಮೂಲಕ ಸಂಸಾರ ಜೀವನಕ್ಕೆ ಕಾಲಿಡುತ್ತಾರೆ ಕೆಲವು ಜೋಡಿಗಳ ಫೋಟೋಸ್ ಗಳು ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತದೆ ಕೆಲವು ಜನರು ನೋಡಲು ಸುಂದರವಾಗಿದ್ದರೆ ಮಾತ್ರ ಒಳ್ಳೆಯವರು ಎಂದು ಭಾವಿಸುತ್ತಾರೆ ಆದರೆ ನಿಜವಾದ ಸೌಂದರ್ಯ ಎಂದರೆ ಒಳ್ಳೆಯ ಗುಣವಾಗಿದೆ ತಮಿಳು ನಟಿ ಮತ್ತು ನಿರೂಪಕಿ ಮಹಾಲಕ್ಷ್ಮಿ ಹಾಗೂ ಖ್ಯಾತ ನಿರ್ದೇಶಕ ರವೀಂದ್ರ ಚಂದ್ರಶೇಖರ್ ಅವರು ಸಪ್ತಪದಿ ತುಳಿದು ಸಂಸಾರ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇವರ ವಿವಾಹ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗಿದೆ ಇಬ್ಬರಿಗೂ ಕೂಡ ಇದು ಎರಡನೇ ಮದುವೆಯಾಗಿದೆ ಮನೆಯವರನ್ನು ಒಪ್ಪಿಸಿ ಒಪ್ಪಿಗೆ ಪಡೆದು ಮದುವೆ ಯಾಗಿದ್ದಾರೆ ಹಾಗೆಯೇ ತಿರುಪತಿಯ ಸನ್ನಿಧಿಯಲ್ಲಿ ಇವರ ವಿವಾಹ ಜರುಗಿದೆ ನಾವು ಈ ಲೇಖನದ ಮೂಲಕ ರವೀಂದ್ರ ಚಂದ್ರಶೇಖರ್ ಹಾಗೂ ಮಹಾಲಕ್ಷ್ಮಿ ಅವರ ವಿವಾಹದ ಬಗ್ಗೆ ತಿಳಿದುಕೊಳ್ಳೋಣ.

ಕನ್ನಡ ಮತ್ತು ತಮಿಳು ನಟಿ ಮಹಾಲಕ್ಷ್ಮಿ ಖ್ಯಾತ ನಿರ್ದೇಶಕ ಹಾಗೂ ಉದ್ಯಮಿ ರವೀಂದ್ರ ಚಂದ್ರಶೇಖರ್ ಅವರು ಮದುವೆ ಆಗಿದ್ದಾರೆ ಆದರೆ ಈ ಜೋಡಿಯನ್ನು ಕಂಡು ತುಂಬಾ ಜನರು ಕೆಟ್ಟ ಜೋಡಿ ಎಂದು ಹೇಳಿಕೊಂಡಿದ್ದಾರೆ ಹಾಗೆಯೇ ಕೆಲವರು ಈ ಜೋಡಿಯನ್ನು ಕಂಡು ತುಂಬಾ ಟ್ರೊಲ್ ಗಳನ್ನು ಮಾಡಿದ್ದಾರೆ ರವೀಂದ್ರ ಚಂದ್ರಶೇಖರ್ ಅವರು ನೋಡಲು ತುಂಬಾ ದಪ್ಪವಾಗಿ ಇದ್ದರೂ ಸಹ ಮನಸ್ಸಿನಲ್ಲಿ ತುಂಬಾ ಗುಣವಂತರು ರವೀಂದ್ರ ಅವರು ಚೆನೈ ನಲ್ಲಿ ಸಾವಿರಾರು ವೃದ್ಧರಿಗೆ ಆಶ್ರಯವನ್ನು ನೀಡಿದ್ದಾರೆ ಅಷ್ಟೇ ಅಲ್ಲದೆ ಅನೇಕ ಬಡ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿದ್ದಾರೆ ಆದರೆ ಕೆಲವರು ಮಾತ್ರ ಗುಣವನ್ನು ನೋಡದೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ.

ಬೇಸರಗೊಂಡು ರವೀಂದ್ರ ಚಂದ್ರ ಶೇಖರ್ ಅವರು ಸೋಶಿಯಲ್ ಮೀಡಿಯಾದಲ್ಲಿ ನಾನು ಕೂಡ ಮುಂಚೆ ಈ ತರ ಇರಲಿಲ್ಲ ರಸ್ತೆ ಅಪಘಾತದಿಂದ ಈ ತರ ಆಗಿದ್ದೇನೆ ಎಂದು ಬೇಸರವನ್ನು ವ್ಯಕ್ತ ಪಡಿಸಿದ್ದಾರೆ ಇಂದಿನ ದಿನಮಾನದಲ್ಲಿ ಗುಣಕ್ಕೆ ಬೆಲೆ ಕೊಡುವರಿಗಿಂತ ಸೌಂದರ್ಯಕ್ಕೆ ಬೆಲೆ ಕೊಡುವರು ತುಂಬಾ ಜನರು ಇದ್ದಾರೆ ಯಾವತ್ತೂ ಒಳ್ಳೆಯ ಗುಣಕ್ಕೆ ಹೆಚ್ಚಿನ ಬೆಲೆಯನ್ನು ಕೊಡಬೇಕು.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: