WhatsApp Group Join Now
Telegram Group Join Now

ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರಸ್ತೆ ಬದಿ ದೋಸೆ ಮಾರುತ್ತಿರುವ ನಟಿ ವಿಧಿ ಎಲ್ಲರನ್ನು ಸಮಾನವಾಗಿ ನೋಡುತ್ತದೆ . ಅದು ಸಾಮಾನ್ಯ ಪ್ರಜೆ ಆಗಿರಬಹುದು ಅಥವಾ ಸೆಲೆಬ್ರೆಟಿ ಯು ಆಗಿರಬಹುದು. ಹಾಗೆಯೇ ಆ ವಿಧಿಯ ಆಟಕ್ಕೆ ಸಿಲುಕಿರುವಂತಹ ನಟಿ ಕೆಟ್ಟ ದಾರಿಯನ್ನು ತುಳಿಯದೇ ಬಂದಂತಹ ಕಷ್ಟಗಳನ್ನು ಎದುರಿಸಿ ಬೆವರು ಸುರಿಸಿ ದುಡಿದು ಬದುಕು ನಡೆಸುತ್ತಿದ್ದಾರೆ. ಮಲೆಯಾಳಂನ ಕಿರುತೆರೆ, ಬೆಳ್ಳಿತೆರೆ ಹಾಗೂ ಸೂಪರ್ ಸ್ಟಾರ್ ಮುಮ್ಮಟ್ಟಿ ಅವರ ಜೊತೆಗೆ ಕೂಡ ನಟಿಸಿರುವಂತಹ ನಟಿ ಕವಿತಾ ಲಕ್ಷ್ಮಿ. ಕೆಲವು ವರ್ಷಗಳ ಹಿಂದೆ ಈಕೆ ಬಾರಿ ಬೇಡಿಕೆಯಲ್ಲಿ ಇದ್ದರು. ಆದರೆ ಕಾಲ ಕಳೆದಂತೆ ಅವಕಾಶಗಳು ಕಡಿಮೆಯಾದವು. ಸಿನಿಮಾಗಳಲ್ಲಿ ಅವಕಾಶಗಳು ಇದ್ದ ಕಾರಣ ಧೈರ್ಯವಾಗಿ ಮಗನನ್ನು ವಿದ್ಯಾಭ್ಯಾಸಕ್ಕೆಂದು ಇಂಗ್ಲೆಂಡಿಗೆ ಕಳುಹಿಸಿದರು. ಆದರೆ ಬರುಬರುತ್ತಾ ಅವಕಾಶಗಳು ಕಡಿಮೆಯಾದಾಗ ಆರ್ಥಿಕವಾಗಿ ತುಂಬಾ ಸಂಕಷ್ಟಕ್ಕೆ ಒಳಗಾದರು. ಒಂದು ಕಡೆ ಮಗನಿಗೆ ವಿದ್ಯಾಭ್ಯಾಸದ ಸಲುವಾಗಿ ಪ್ರತಿ ತಿಂಗಳು ಹಣವನ್ನು ಗಳಿಸಬೇಕು ಆದರೆ ಈ ಕಡೆ ಕೈಯಲ್ಲಿ ಕಾಸಿಲ್ಲ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೆಲವು ಜನ ದಿಕ್ಕುತೋಚದೆ ಕೆಟ್ಟ ದಾರಿಯನ್ನು ಹಿಡಿಯುವುದು ಉಂಟು. ಆದರೆ ಈ ನಟಿ ಮಾಡಿದ್ದಾದರೂ ಏನು?

ಗಂಡನಿಂದ ಬೇರ್ಪಟ್ಟ ಕವಿತಾ ಲಕ್ಷ್ಮಿ ಅವರಿಗೆ ಒಬ್ಬಳು ಮಗಳು ಕೂಡ ಇದ್ದಾಳೆ. ತನಗೆ ಒದಗಿದ ಆರ್ಥಿಕ ಸಂಕಷ್ಟದಿಂದ ಹೊರಬರಲು ಈ ನಟಿಗೆ ಒಂದು ಆಲೋಚನೆ ಹೊಳೆಯಿತು. ಕಷ್ಟಪಟ್ಟು ಶ್ರಮವಹಿಸಿ ದುಡಿಯೋದಕ್ಕೆ ಯಾವ ಕೆಲಸ ಆದರೆ ಏನು ಎಂದು ಆಲೋಚಿಸಿದ ನಟಿ ಹೈವೆಯ ಪಕ್ಕದಲ್ಲಿ ಒಂದು ಚಿಕ್ಕ ದೋಸೆ ಅಂಗಡಿಯನ್ನು ಆರಂಭಿಸಿ ಮಧ್ಯರಾತ್ರಿಯವರೆಗೂ ದೋಸೆಯನ್ನೂ ಮಾರುತ್ತಿದ್ದಾರೆ. ಹಗಲಲ್ಲಿ ಎರಡು ದಾರವಾಹಿಗಳಲ್ಲಿ ನಟಿಸುತ್ತಿರುವ ಕವಿತಾ ಅವರು ರಾತ್ರಿ ತನ್ನ ಕೈಯಾರೆ ತಾನೆ ದೋಸೆಯನ್ನು ಮಾಡಿ ಎಲ್ಲರಿಗೂ ಮಾರಾಟ ಮಾಡುತ್ತಾರೆ. ಇವರ ಈ ಕೆಲಸಕ್ಕೆ ಮಗಳು ಸಹಕವಿತಾ ಅವರಿಗೆ ಸಹಾಯ ಮಾಡುತ್ತಿದ್ದು ಬಂದ ಹಣದಲ್ಲಿ ಪ್ರತಿತಿಂಗಳು ಮಗನ ವಿದ್ಯಾಭ್ಯಾಸಕ್ಕೆ ಎಂದು ಕಳುಹಿಸುತ್ತಿದ್ದಾರೆ.

ಮನೆಯಲ್ಲಿ ಹೇಗೆ ನನ್ನ ಮಕ್ಕಳಿಗೆ ಅಡುಗೆಯನ್ನು ಮಾಡುತ್ತೇನೆ ಹಾಗೆ ಇಲ್ಲಿ ಕೂಡಾ ಅಡುಗೆಯನ್ನು ಮಾಡುತ್ತೇನೆ ಈ ಕೆಲಸ ನನಗೆ ತುಂಬಾ ಸಂತೋಷ ನೀಡಿದೆ ಎಂದು ಕವಿತಾ ಲಕ್ಷ್ಮಿ ಅವರು ಮೀಡಿಯ ಮುಂದೆ ತಿಳಿಸಿದ್ದಾರೆ. ಈಗಾಗಲೇ ಎರಡು ವರ್ಷಗಳಿಂದ ಈ ಕೆಲಸವನ್ನು ಆರಂಭಿಸಿದ್ದು ಮಗನಿಗೆ ಹಣವನ್ನು ಸಹ ಕಳಿಸುತ್ತಿದ್ದಾರೆ. ಮಗನ ವಿದ್ಯಾಭ್ಯಾಸ ಕೂಡ ಕೊನೆಯ ಹಂತದಲ್ಲಿ ಬಂದು ತಲುಪಿದೆ. ಸ್ಟಾರ್ ಗಿರಿಯನ್ನು ಪಕ್ಕಕ್ಕೆ ಇಟ್ಟು ಹಗಲು ರಾತ್ರಿ ಎನ್ನದೇ ಕಷ್ಟಪಟ್ಟು ಮಗನನ್ನು ಓದಿಸುತ್ತಿರುವ ಕವಿತಾ ಲಕ್ಷ್ಮಿಯವರ ಜೀವನ ಒಳ್ಳೆಯದಾಗಿರಲಿ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: