WhatsApp Group Join Now
Telegram Group Join Now

ಧ್ರುವ ಸರ್ಜಾ ಸರ್ಜಾ ಕುಟುಂಬದ ಒಂದು ಕುಡಿ ಆಗಿದ್ದಾರೆ. ಇವರ ಪ್ರೀತಿಯ ಸಹೋದರ ಚಿರಂಜೀವಿ ಸರ್ಜಾ ಆಗಿದ್ದರು. ಆದರೆ ಈಗ ಅವರು ಇಲ್ಲ. ಇವರಿಬ್ಬರೂ ಬಹಳ ಅನ್ಯೋನ್ಯವಾಗಿ ಇದ್ದರು. ತಮ್ಮ ಪ್ರೀತಿಯ ಸಹೋದರನನ್ನು ಕಳೆದುಕೊಂಡು ತುಂಬಾ ನೋವು ಪಟ್ಟಿದ್ದಾರೆ. ಆದರೆ ಈಗ ಅವರಿಗೆ ಸ್ವಲ್ಪ ಸಂತೋಷವಿದೆ. ಅದೇನೆಂದರೆ ಚಿರಂಜೀವಿ ಸರ್ಜಾರ ಪುತ್ರ ಮೇಘನಾ ರಾಜ್ ಅವರ ಹೊಟ್ಟೆಯಲ್ಲಿ ಜನಿಸಿದ್ದಾರೆ. ಆದ್ದರಿಂದ ಇಲ್ಲಿ ನಾವು ಧ್ರುವ ಸರ್ಜಾ ಅವರು ತಮ್ಮ ಹೊಸ ಸಿನೆಮಾದ ಬಗ್ಗೆ ಆಡಿದ ಮಾತಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಧ್ರುವ ಸರ್ಜಾ ಇವರು ಕನ್ನಡ ಚಿತ್ರರಂಗದಲ್ಲಿ ಒಬ್ಬ ನಾಯಕ ನಟನಾಗಿ ಹೊರ ಹೊಮ್ಮಿದ್ದಾರೆ. ತಮ್ಮ ಒಂದು ಅಮೋಘವಾದ ನಟನೆಯಿಂದ 2012ರಲ್ಲಿ ಒಂದು ಸಿನೆಮಾದಲ್ಲಿ ಕಾಣಿಸಿಕೊಂಡರು. ಆ ಸಿನೆಮಾ ಆಗ ಬಹಳ ಹೆಸರು ಮಾಡಿತ್ತು. ಅದರ ಹೆಸರು ಅದ್ದೂರಿ. ಇದರಲ್ಲಿ ಧ್ರುವ ಸರ್ಜಾ ರಾಧಿಕಾ ಪಂಡಿತ್ ಅವರ ಜೊತೆ ನಟಿಸಿದ್ದಾರೆ. ಈ ಸಿನಿಮಾಕ್ಕೆ ಪ್ರಶಸ್ತಿ ಸಹ ಸಂದಿದೆ. ಅರ್ಜುನ್ ಸರ್ಜಾ ಯಾರಿಗೆ ತಿಳಿದಿಲ್ಲ. ಅರ್ಜುನ್ ಸರ್ಜಾ ಅವರು ಕೂಡ ತುಂಬಾ ಒಳ್ಳೆಯ ನಟರಾಗಿದ್ದಾರೆ.

ಹಾಗೆಯೇ ಇವರು ಅರ್ಜುನ್ ಸರ್ಜಾ ಅವರ ಅಕ್ಕನ ಮಗನಾಗಿದ್ದಾರೆ. ಹಾಗೆಯೇ ಧ್ರುವ ಸರ್ಜಾ ಅವರು 2013ರಲ್ಲಿ ಬಹದ್ದೂರ್ ಎಂಬ ಸಿನಿಮಾಕ್ಕೆ ಸಹಿ ಹಾಕಿದರು. ಹಾಗೆಯೇ ಇದಕ್ಕೂ ಸಹ ರಾಧಿಕಾ ಪಂಡಿತ್ ಅವರೇ ನಾಯಕ ನಟಿಯಾಗಿ ಪಾತ್ರ ಮಾಡಿದ್ದಾರೆ. ಈ ಸಿನೆಮಾ 2014ರಲ್ಲಿ ತೆರೆಗೆ ಬಂದಿತು. ಹಾಗೆಯೇ ನಂತರದಲ್ಲಿ ಕೆಲವು ಸಿನೆಮಾಗಳನ್ನು ಮಾಡಿದರು. ಈಗ ಪೊಗರು ಎಂಬ ಸಿನಿಮಾಕ್ಕೆ ಸಹಿ ಹಾಕಿದ್ದಾರೆ. ಇದರ ಶೂಟಿಂಗ್ ಸಹ ಚೆನ್ನಾಗಿ ನಡೆದಿದ್ದು ಇದರಲ್ಲಿ ಚಂದನ್ ಶೆಟ್ಟಿಯ ಒಂದು ಹಾಡು ಬಹಳ ಹೆಸರು ಮಾಡುತ್ತಿದೆ.

ಈಗ ಮಾರ್ಟಿನ್ ಎನ್ನುವ ಸಿನಿಮಾಕ್ಕೆ ಶೂಟಿಂಗ್ ನಡೆಸುತ್ತಿದ್ದಾರೆ. ಅದ್ದೂರಿ ಸಿನೆಮಾದ ನಿರ್ದೇಶಕ ಅರ್ಜುನ್ ಅವರೇ ಈ ಸಿನಿಮಾದ ನಿರ್ದೇಶಕ ಆಗಿದ್ದಾರೆ. ಆದರೆ ಈ ಸಿನೆಮಾಕ್ಕೆ ನಾಯಕಿ ಯಾರು ಎನ್ನುವುದು ತಿಳಿದಿಲ್ಲ ಎಂದು ಧ್ರುವಸರ್ಜಾ ಅವರು ಹೇಳಿದ್ದಾರೆ. ಫೈಟಿಂಗ್ ಶೂಟ್ ನಲ್ಲಿ ರಾಮಲಕ್ಷಣ್ ಅವರ ಜೊತೆ ಇರುವುದು ಬಹಳ ಖುಷಿ ಇದೆ. ಹಾಗೆಯೇ ಇದು ಒಂದು ಒಳ್ಳೆಯ ಸಿನೆಮಾ ಆಗಿದ್ದು 9 ದಿನಗಳಲ್ಲಿ ಮಾಡಿದ್ದ ಇದರ ಒಂದು ಸಣ್ಣ ವಿಡಿಯೋ ಹಲವಾರು ಮೆಚ್ಚುಗೆಯನ್ನು ಪಡೆದಿದೆ. ಮುಂದೆ ಒಳ್ಳೆಯ ಯಶಸ್ವಿ ಕಾಣುತ್ತದೆ ಎಂದು ಹೇಳಿದರು. video Credit For 1st News

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: