WhatsApp Group Join Now
Telegram Group Join Now

ಅಂಬರೀಶ್ ಎಂದರೆ ನೆನಪಾಗುವ ಸಿನೆಮಾ ಎಂದರೆ ಅದು ಮಂಡ್ಯದ ಗಂಡು. ಈ ಸಿನೆಮಾದಲ್ಲಿ ಅಂಬರೀಶ್ ಅವರು ತುಂಬಾ ಚೆನ್ನಾಗಿ ಅಭಿನಯ ಮಾಡಿದ್ದಾರೆ. ಹಾಗೆಯೇ ಮೂಲತಃ ಮಂಡ್ಯದವರೇ ಆಗಿದ್ದಾರೆ. ಹಾಗೆಯೇ ತಮ್ಮ ನಟನೆಯಿಂದ ಕನ್ನಡ ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್ ಎಂಬ ಬಿರುದನ್ನು ಪಡೆದಿದ್ದಾರೆ. ಇವರು ಕನ್ನಡ ಚಿತ್ರಗಳಲ್ಲಿ ನಾಯಕಿಯಾಗಿ ಸಿನೆಮಾಗಳನ್ನು ಮಾಡಿದ ಸುಮಲತಾ ಅವರನ್ನು ವಿವಾಹವಾಗಿದ್ದರು. ಆದ್ದರಿಂದ ನಾವು ಇಲ್ಲಿ ಅಂಬರೀಶ್ ಮತ್ತು ಸುಮಲತಾ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಅಂಬರೀಶ್ ಅವರ ವ್ಯಾವಹಾರಿಕ ಹೆಸರು ಎಂ.ಎಚ್. ಅಂಬರೀಶ್ ಆಗಿದೆ. ಇವರು ಹುಟ್ಟಿದಾಗ ಇವರಿಗೆ ಇಟ್ಟ ಹೆಸರು ತುಂಬಾ ವಿಚಿತ್ರವಾಗಿದೆ. ಅದೇನೆಂದರೆ ಮಲವಳ್ಳಿ ಹುಚ್ಚೇಗೌಡ ಅಮರನಾಥ್. ಇವರು ಮೇ 29ರಂದು 1952ರಲ್ಲಿ ದೊಡ್ಡರಸಿನಕೆರೆ ಹಳ್ಳಿಯ ಮಂಡ್ಯದಲ್ಲಿ ಜನಿಸಿದರು. ಇವರು ಮೂಲತಃ ಕರ್ನಾಟಕದವರು ಆಗಿದ್ದಾರೆ. ಇವರ ಮಾತೃಭಾಷೆ ಕನ್ನಡ ಆಗಿದೆ. ಇವರಿಗೆ ಇಂಗ್ಲೀಷ್, ಹಿಂದಿ ಕನ್ನಡವನ್ನು ಮಾತನಾಡಲು ಬರುತ್ತದೆ. ಇವರು ಹಿಂದೂ ಧರ್ಮದವರಾಗಿದ್ದಾರೆ. ಇವರ ಜಾತಿ ಗೌಡ ಆಗಿದೆ. ಇವರ ತಂದೆಯ ಹೆಸರು ಹುಚ್ಚೇಗೌಡ. ಇವರ ತಾಯಿಯ ಹೆಸರು ಪದ್ಮಮ್ಮ.

ತಂದೆಯ ಉದ್ಯೋಗ ಕೃಷಿ ಆಗಿತ್ತು. ಇವರಿಗೆ ಹರೀಶ್ ಎಂಬ ಸಹೋದರ ಇದ್ದಾರೆ. ಇವರು ಡಿಸೆಂಬರ್ 8 1952ರಲ್ಲಿ ನಟಿಯಾದ ಸುಮಲತಾ ಅವರನ್ನು ವಿವಾಹವಾಗಿದ್ದರು. ಸುಮಲತಾ ಅವರು ಸಹ ಕನ್ನಡ ಚಿತ್ರರಂಗದ ಖ್ಯಾತ ನಟಿ ಆಗಿದ್ದಾರೆ. ಇವರು ಸಹ ಅನೇಕ ಸಿನೆಮಾಗಳಲ್ಲಿ ನಟನೆ ಮಾಡಿದ್ದಾರೆ. ಸುಮಲತಾ ಮತ್ತು ಅಂಬರೀಶ್ ಅವರು ಪ್ರೀತಿಸಿ ಮದುವೆ ಆಗಿದ್ದಾರೆ. ಇವರ ಪ್ರೀತಿಯ ಸಂಕೇತವಾಗಿ ಒಬ್ಬ ಪುತ್ರ ಜನಿಸಿದ್ದಾನೆ. ಅವರ ಹೆಸರು ಅಭಿಷೇಕ್ ಅಂಬರೀಶ್. ಇವರೂ ಕೂಡ ಸಿನೆಮಾದಲ್ಲಿ ಅಭಿನಯ ಮಾಡಿದ್ದಾರೆ. ಅಂಬರೀಶ್ ಅವರು ಸುಮಾರು ನೂರಕ್ಕೂ ಹೆಚ್ಚು ಸಿನೆಮಾಗಳನ್ನು ಮಾಡಿದ್ದಾರೆ.

ಈ ಕನ್ನಡ ಮಣ್ಣನು ಮರಿಬೇಡ ಎಂಬ ಹಾಡು ಕೇಳಿದರೆ ಸಾಕು ಇವರ ನೆನಪಾಗುತ್ತದೆ. ಏಕೆಂದರೆ ಆ ಹಾಡು ಅವರ ನಟನೆಯಿಂದ ಮತ್ತು ತನ್ನ ಸಾಹಿತ್ಯ, ಶ್ರುತಿಗಳಿಂದ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅಂಬರೀಶ್ ಅವರು ಈಗ ಇಲ್ಲ. ಅವರ ಕೊನೆಯ ಸಿನೆಮಾ ಅಂಬಿಗೆ ವಯಸ್ಸಾಯ್ತು ಎನ್ನುವುದು. ಹಾಗೆಯೇ ಕನ್ನಡದ  ಮಹಾಭಾರತದ ಸಿನೆಮಾ ಆದ ಕುರುಕ್ಷೇತ್ರದಲ್ಲಿ ಭೀಷ್ಮನ ಪಾತ್ರವನ್ನು ಮಾಡಿದ್ದಾರೆ. ಅಂಬರೀಶ್ ಅವರು ಈಗ ಇಲ್ಲ. ಆದರೆ ಅವರ ನೆನಪುಗಳು ಮಾತ್ರ ಕನ್ನಡದ ಅಭಿಮಾನಿಗಳಲ್ಲಿ ಎಂದೂ ನಶಿಸುವುದಿಲ್ಲ.  ಹಾಗೆಯೇ ಸುಮಲತಾ ಅವರು ರಾಜಕಾರಣಿಯಾಗಿ ನಿಂತು ಒಂದೊಂದೇ ಹಂತವನ್ನು ಮೇಲೆ ಹತ್ತಿ ಹೋಗುತ್ತಿದ್ದಾರೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: