WhatsApp Group Join Now
Telegram Group Join Now

Thirupathi Tirumala Prasadha: ಸನಾತನ ಹಿಂದೂ ಸಂಸ್ಕೃತಿಯಲ್ಲಿ ದೇವಾಲಯಕ್ಕೆ ಹೆಚ್ಚಿನ ಮಹತ್ವವನ್ನು ಕೊಡಲಾಗಿದೆ. ಮನಸ್ಸಿಗೆ ಗೊಂದಲವಿದ್ದರೆ ಕಷ್ಟದ ಸಂದರ್ಭದಲ್ಲಿ ದೇವಾಲಯಕ್ಕೆ ಭೇಟಿ ಕೊಡುವುದು ಸರ್ವೆಸಾಮಾನ್ಯವಾಗಿದೆ. ಆಧುನಿಕತೆಯ ಮಡಿಲಿನಲ್ಲಿರುವ ನಾವು ಈಗಲೂ ಸಹ ಕಷ್ಟ ಎಂದಾಗ ದೇವರ ಮೊರೆ ಹೋಗುತ್ತೇವೆ ಅದಕ್ಕಾಗಿಯೆ ಕಷ್ಟ ಬಂದಾಗ ವೆಂಕಟ್ರಮಣ ಎಂಬ ಮಾತಿದೆ. ಜಗತ್ಪ್ರಸಿದ್ಧ ದೇವಾಲಯ ತಿರುಪತಿ ತಿಮ್ಮಪ್ಪನ ಪ್ರಸಾದ ವಿಶೇಷ ಲಡ್ಡು ಪ್ರಸಾದದ ರಹಸ್ಯವನ್ನು ಈ ಲೇಖನದಲ್ಲಿ ನೋಡೋಣ

ಪ್ರಪಂಚದಲ್ಲಿ ಹಿಂದೂ ದೇವಾಲಯ ಎಂದರೆ ಸಾಮಾನ್ಯವಾಗಿ ನೆನಪಾಗುವುದು ತಿರುಪತಿ ತಿಮ್ಮಪ್ಪನ ಹೆಸರು. ತಿಮ್ಮಪ್ಪನ ಭಕ್ತರು ನೀಡುವ ಹಣ ಒಡವೆ ವಜ್ರ ವೈಢೂರ್ಯಗಳಿಗೆ ಲೆಕ್ಕವೆ ಇಲ್ಲ ಅಷ್ಟು ಶ್ರೀಮಂತ ದೇವಾಲಯದಲ್ಲಿ ತಿರುಪತಿ ದೇವಾಲಯ ಶ್ರೀಮಂತ ದೇವಾಲಯವಾಗಿದೆ. ತಿರುಪತಿ ಜಗತ್ತಿನಲ್ಲಿ ಅತ್ಯಂತ ಶ್ರೀಮಂತ ದೇವಾಲಯ ಹಾಗೂ ತಿಮ್ಮಪ್ಪ ಸದಾಕಾಲ ಭಕ್ತರನ್ನು ಕಾಯುವ ದೇವರಾಗಿದ್ದಾರೆ. ಭೂಮಿಯ ವೈಕುಂಠವೆಂದೆ ಕರೆಯಲ್ಪಡುವ ತಿರುಪತಿಯಲ್ಲಿ ಲಕ್ಷ್ಮಿ ಪದ್ಮಾವತಿ ಸಹಿತ ನೆಲೆಸಿರುವ ಶ್ರೀನಿವಾಸ ತನ್ನ ದರ್ಶನಕ್ಕೆ ಬರುವ ಸಕಲ ಭಕ್ತರ ಸಂಕಷ್ಟಗಳನ್ನು ನಿವಾರಿಸಿ ಸುಖ ಸೌಭಾಗ್ಯ ಕರುಣಿಸುತ್ತಿದ್ದಾನೆ ದಿನವೂ ದೇಶದ ನಾನಾ ಭಾಗಗಳಿಂದ ಭಕ್ತ ಸಾಗರವೆ ಹರಿದು ಬರುತ್ತದೆ.

ಪ್ರತಿದಿನ ಸಾವಿರಾರು ಜನರು ತಿಮ್ಮಪ್ಪನ ದರ್ಶನ ಪಡೆದುಕೊಳ್ಳುತ್ತಾರೆ ಎಲ್ಲೆಡೆ ಗೋವಿಂದನ ನಾಮ ಸ್ಮರಣೆ ಗೋವಿಂದ ಗೋವಿಂದ ಎಂಬ ನಾಮ ಮೊಳಗುತ್ತದೆ. ಎಲ್ಲರಿಗೂ ತಿಳಿದೆ ಇದೆ ಜಗತ್ಪ್ರಸಿದ್ಧ ಪ್ರಸಾದ ಎಂದರೆ ಅದು ತಿರುಪತಿಯ ಲಡ್ಡು. ಕೇವಲ ಲಾಡುವಿನ ಮೂಲಕವೆ ತಿಮ್ಮಪ್ಪನ ಆದಾಯ ವರ್ಷಕ್ಕೆ ಕೋಟಿ ದಾಟುತ್ತದೆ ಇದು ಹೆಚ್ಚಿನವರಿಗೆ ತಿಳಿದಿಲ್ಲ ಹೌದು ತಿಮ್ಮಪ್ಪನ ದರ್ಶನಕ್ಕೆ ಬಂದವರು ಲಾಡು ಪ್ರಸಾದವನ್ನು ಸೇವಿಸದೆ ದರ್ಶನ ಪೂರ್ಣಗೊಳ್ಳುವುದಿಲ್ಲ ಎಂಬ ನಂಬಿಕೆ ಇದೆ. ಇಲ್ಲಿಗೆ ಬರುವ ಭಕ್ತರಿಗೆ ಒಂದು ಲಾಡನ್ನು ಉಚಿತವಾಗಿ ಕೊಡಲಾಗುತ್ತದೆ ಆದರೆ ಹೆಚ್ಚಿನ ಲಾಡು ಬೇಕಾದಲ್ಲಿ ಹಣ ಕೊಟ್ಟು ಪಡೆಯಬೇಕಾಗುತ್ತದೆ.

ತಿರುಪತಿಯ ಪ್ರಸಾದ ಲಡ್ಡು ತಯಾರಿಸಲು ಬೇಕಾದ ಹಾಲಿಗಾಗಿ ಹಸುಗಳನ್ನು ಸಾಕಲಾಗಿದೆ ಅದನ್ನು ತಿರುಪತಿ ಟ್ರಸ್ಟ್ ನೋಡಿಕೊಳ್ಳುತ್ತದೆ. ಗೋಮಾತೆಯ ಬಗ್ಗೆ ಎಲ್ಲರೂ ತಿಳಿಯಲೇಬೇಕು ಸುರಭಿ ಎಂದು ಕರೆಯಲ್ಪಡುವ ಕಾಮಧೇನುವನ್ನು ವೇದ ಗ್ರಂಥಗಳಲ್ಲಿ ಎಲ್ಲಾ ಹಸುಗಳ ತಾಯಿ ಎಂದು ವರ್ಣಿಸಲಾಗಿದೆ. ಎಲ್ಲಾ ಹಸುಗಳನ್ನು ಹಿಂದೂ ಧರ್ಮದಲ್ಲಿ ಕಾಮಧೇನು ಎಂದು ಪೂಜಿಸಲಾಗುತ್ತದೆ. ತಿರುಪತಿ ದೇವಾಲಯದ ಟ್ರಸ್ಟ್ ನ ಜಾನುವಾರು ಅಂಗಳದಲ್ಲಿ ಸುಮಾರು ಎರಡು ನೂರು ಹಸುಗಳು ಇವೆ. ಈ ಹಸುಗಳ ಹಾಲಿನಿಂದ ತಯಾರಿಸಿದ ತುಪ್ಪವನ್ನು ವೆಂಕಟೇಶ್ವರ ದೇವರ ನೈವೇದ್ಯದಲ್ಲಿ ಬಳಸಲಾಗುತ್ತದೆ. ವಿಶ್ವದ ಅತಿ ಚಿಕ್ಕ ತಳಿಗಳೆಂದು ಪರಿಗಣಿಸಲ್ಪಟ್ಟ ಕೊಂಗನೂರು ತಳಿಯ ಹಸುವಿನ ಹಾಲು ಹೆಚ್ಚು ಕೊಬ್ಬಿನಂಶ ಹಾಗೂ ಪೋಷಕಾಂಶ ಗುಣಗಳನ್ನು ಹೊಂದಿದೆ. ಎಲ್ಲಾ ಹಸುಗಳ ಹಾಲಿನಲ್ಲಿ ಶೇಕಡ 3 ರಿಂದ 3.5 ರಷ್ಟು ಕೊಬ್ಬಿನಂಶ ಇದ್ದರೆ ಕೊಂಗನೂರು ತಳಿಯ ಹಸುವಿನ ಹಾಲಿನಲ್ಲಿಎಮ್ಮೆಯ ಹಾಲಿನಂತೆ ಶೇಕಡ 8 ರಷ್ಟು ಕೊಬ್ಬಿನಂಶವಿದೆ.

ತಿರುಪತಿ ದೇವಾಲಯದಲ್ಲಿ ವೆಂಕಟೇಶ್ವರ ಸ್ವಾಮಿಗೆ ಕ್ಷೀರಾಭಿಷೇಕ ಮಾಡಲು ಕೊಂಗನೂರು ತಳಿಯ ಹಾಲನ್ನೆ ಬಳಸಲಾಗುತ್ತದೆ ಅಲ್ಲದೆ ತಿರುಪತಿಯ ಪ್ರಸಾದ ಲಡ್ಡು ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ತಿರುಪತಿಯಲ್ಲಿರುವ ಹಸುಗಳ ದರ್ಶನ ಮಾಡುವುದು ಪುಣ್ಯವೆಂದು ಹೇಳಲಾಗುತ್ತದೆ. ಜಗತ್ಪ್ರಸಿದ್ಧ ಶ್ರೀಮಂತ ದೇವಾಲಯ ತಿರುಪತಿಯ ಲಡ್ಡುವಿನ ರಹಸ್ಯವನ್ನು ಇನ್ನೊಬ್ಬರಿಗೂ ತಿಳಿಸಿ ತಿರುಪತಿ ತಿಮ್ಮಪ್ಪ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: