ನವರಾತ್ರಿ ಹಬ್ಬದ ಘಟಸ್ತಾಪನೆ ಮಾಡೋದು ಹೇಗೆ ಇಲ್ಲಿದೆ ಮಾಹಿತಿ

0

Nava ratri ನಮ್ಮ ಹಿಂದೂ ಪದ್ಧತಿಯಲ್ಲಿ ನವರಾತ್ರಿ ಹಬ್ಬವು ಬಹಳ ವಿಶೇಷವಾಗಿದೆ. 9 ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ನಾವು ದೇವಿಯ 9 ಅವತಾರಗಳನ್ನ ಪೂಜಿಸುತ್ತೇವೆ. ನವರಾತ್ರಿಯು ಅಶ್ವಿನಿ ಮಾಸದ ಶುಕ್ಲ ಪಕ್ಷದ ಪ್ರತಿ ಪದಾ ತಿಥಿಯಂದು ಪ್ರಾರಂಭವಾಗುತ್ತದೆ. ಘಟ ಸ್ಥಾಪನೆಯ ಮೂಲಕ ನಾವು ನವರಾತ್ರಿಯನ್ನ ಪ್ರಾರಂಭ ಮಾಡುತ್ತೇವೆ. ಹಾಗಾದ್ರೆ ಘಟಸ್ತಾಪನೆ ಎಂದರೇನು? ಅದರ ವಿಧಿ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.

ಮೊದಲನೆಯ ದಿನದ ನವರಾತ್ರಿ ಹಬ್ಬದ ಘಟಸ್ತಾಪನೆಗೆ ವಿಶೇಷ ಮಹತ್ವವಿದೆ. ಘಟ ಸ್ಥಾಪನೆ ಎಂದರೆ ಇದು ದೇವತೆಗಳ ವಾಸಸ್ಥಾನ ಎಂದು ಹೇಳಬಹುದು. ಕಲಶವು ಮನೆಯ ಸಂತೋಷ ಮತ್ತು ಸಮೃದ್ಧಿಯ ಸಂಕೇತ ಎಂದು ಪರಿಗಣಿಸುತ್ತೇವೆ ಗಟ ಎಂದರೆ ಕಳಸದಲ್ಲಿರುವ ಶಕ್ತಿಗಳನ್ನ ಆಹ್ವಾನ ಮಾಡುವುದು. ಹಾಗಾಗಿ ನಾವು ಪ್ರತಿಯೊಂದು ಮಂಗಳ ಕಾರ್ಯದಲ್ಲಿ ಹಬ್ಬಹರಿ ದಿನಗಳಲ್ಲಿ ಪೂಜೆ ಪುನಸ್ಕಾರಗಳಲ್ಲಿ ಕಲಶವನ್ನಾಗಿ ಇಟ್ಟು ಪೂಜಿಸುತ್ತೇವೆ ಅಂದರೆ ಕಲಶದಲ್ಲಿ ದೇವಿಯನ್ನು ಆಹ್ವಾನ ಮಾಡುತ್ತೇವೆ.

ಹಾಗಾದ್ರೆ ಕಲಶ ಸ್ಥಾಪನೆಯಲ್ಲಿ ನಾವು ಧಾನ್ಯಗಳನ್ನ ಏಕೆ ಹಾಕುತ್ತೇವೆ ಅಂದರೆ ಧಾನ್ಯ ಎಂದರೆ ಅನ್ನಪೂರ್ಣೇಶ್ವರಿಯ ಸಂಕೇತ ಎಂದು ನಂಬಲಾಗಿದೆ ಅಕ್ಕಿ ಗೋಧಿ ಇವೆಲ್ಲವುಗಳು ನಾವು ತಿನ್ನುವ ಆಹಾರಗಳು ಅದೆಲ್ಲವೂ ಸಮೃದ್ಧಿಯಾಗಲಿ ಎನ್ನುವ ಉದ್ದೇಶದಿಂದ ನಾವು ಧಾನ್ಯಗಳನ್ನ ಘಟಸ್ಥಾಪನೆಯಲ್ಲಿ ಬಳಸುತ್ತೇವೆ. ನವರಾತ್ರಿಯ ಮೊದಲ ದಿನದಂದು ಘಟಸ್ಥಾಪನೆಯನ್ನ ಮಾಡುತ್ತೇವೆ.

ಇದನ್ನು ನಾವು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಅಂದರೆ ಶುಭ ಮುಹೂರ್ತದಲ್ಲಿ ಮಾಡಬೇಕು ಒಂದು ಮಣ್ಣಿನ ಕುಂಡವನ್ನ ತೆಗೆದುಕೊಂಡು ಅದರಲ್ಲಿ ಏಳು ಬಗೆಯ ಧಾನ್ಯವನ್ನು ಹಾಕಬೇಕು. ನಂತರ ಉಪವಾಸವನ್ನು ಮಾಡಿ ದುರ್ಗಾ ದೇವಿಯ ಫೋಟೋವನ್ನು ಇಟ್ಟು ಗಂಗಾಜಲ ದೂರ ಅಕ್ಷತೆ ಮತ್ತೆ ನಾಣ್ಯಗಳು ವೀಳ್ಯದೆಲೆ ಅಡಿಕೆಯನ್ನ ತಾಮ್ರ ಅಥವಾ ಮಣ್ಣಿನ ಪಾತ್ರೆಯಲ್ಲಿ ಹಾಕಬೇಕು.

ಕೆಲಸದ ಮೇಲೆ ಮಾವಿನ ಎಲೆಗಳನ್ನ ಇಡಬೇಕು ಹಾಗೆ ಕೆಂಪು ಬಳೆ ಮತ್ತೆ ತೆಂಗಿನ ಕಾಯಿಯನ್ನು ಕಲಸಿದ ಮೇಲೆ ಇಟ್ಟು ಒಂದು ಸ್ವಸ್ತಿಕ್ ಚಿಹ್ನೆಯನ್ನು ಬರೆಯಬೇಕು. ಧಾನ್ಯಗಳನ್ನ ಬಿತ್ತಿದ ಮಡಕೆ ಮತ್ತು ಕಲಶವಲ್ಲ ಈಗ ನೀವು ದುರ್ಗೆಯ ಫೋಟೋದ ಮುಂದೆ ಇಡಬೇಕು. ಕೆಲಸವನ್ನು ಸ್ಥಾಪಿಸುವಾಗ ದುರ್ಗಾದೇವಿ ಮಂತ್ರವನ್ನು ಪಡಿಸಿ ದೇವಿಯನ್ನು ಆಹ್ವಾನಿಸಬೇಕು. ರೀತಿ ನೀವು ಪೂಜೆಯನ್ನ ಮಾಡಿ ದೇವಿಯ ಕೃಪೆಗೆ ಪಾತ್ರರಾಗಿ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave A Reply

Your email address will not be published.

error: Content is protected !!
Footer code: