ನಿಂಬೆಹಣ್ಣು ಒಂದು ಸಾಮಾನ್ಯ ಹಣ್ಣು, ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಅದಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಕೆಲವು ಪರಿಹಾರಗಳಲ್ಲಿ ನಿಂಬೆಹಣ್ಣಿನ ಬಳಕೆಯು ಋಣಾತ್ಮಕ ಶಕ್ತಿಗಳನ್ನು ದೂರವಿರಿಸಲು, ದೃಷ್ಟಿ ದೋಷವನ್ನು ತಡೆಗಟ್ಟಲು ಮತ್ತು ಜೀವನದಲ್ಲಿ ಸಮೃದ್ಧಿ ಮತ್ತು ಯಶಸ್ಸನ್ನು ತರಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ.
ನಿಂಬೆಹಣ್ಣು ದೃಷ್ಟಿ ದೋಷವನ್ನು ತೊಡೆದು ಹಾಕುತ್ತದೆ: ಒಂದು ನಿಂಬೆಹಣ್ಣಿನಿಂದ ಕೆಳಗಿನಿಂದ ಮೇಲಕ್ಕೆ ಮತ್ತು ಮೇಲಿನಿಂದ ಕೆಳಕ್ಕೆ ಮೂರು ಬಾರಿ ಮಗುವಿನ ಕಣ್ಣಿಗೆ ನಿವಾಳಿಸಿ. ನಿಂಬೆಹಣ್ಣನ್ನು ನಾಲ್ಕು ಹೋಳುಗಳಾಗಿ ಕತ್ತರಿಸಿ. ಯಾರಿಗೂ ಕಾಣದಂತೆ ಖಾಲಿ ಜಾಗದಲ್ಲಿ ಅಥವಾ ಮೂರು ದಾರಿಗಳು ಸೇರುವ ಜಾಗದಲ್ಲಿ ಎಸೆಯಿರಿ. ಹಿಂದೆ ತಿರುಗಿ ನೋಡದೆ ಬನ್ನಿ.
ನಿಮಗೆ ವ್ಯಾಪಾರದಲ್ಲಿ ಪ್ರಗತಿ ಉಂಟಾಗಬೇಕು ಎಂದರೆ ಲಿಂಬೆ ಹಣ್ಣಿಂದ ಈ ರೀತಿಯಾಗಿ ಮಾಡಿ: ಒಂದು ನಿಂಬೆಹಣ್ಣನ್ನು ಅಂಗಡಿಯ ಸುತ್ತಲೂ ಸುತ್ತಿಸಿ. ನಿಮ್ಮ ವ್ಯಾಪಾರ ಚೆನ್ನಾಗಿ ನಡೆಯಲಿ ಎಂದು ಪ್ರಾರ್ಥಿಸಿ. ನಿಂಬೆಹಣ್ಣನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿ. ಪ್ರತಿ ನಾಲ್ಕು ದಿಕ್ಕುಗಳಲ್ಲಿ ನಿಂಬೆ ತುಂಡುಗಳನ್ನು ಎಸೆಯಿರಿ. ಪ್ರತಿದಿನ ಈ ಪರಿಹಾರವನ್ನು ಮಾಡಿಕೊಳ್ಳಿ.
ವೃತ್ತಿ ಜೀವನದ ಯಶಸ್ಸಿಗೆ ನಿಂಬೆಹಣ್ಣು ರಾಮಬಾಣ:
ಒಂದು ನಿಂಬೆಹಣ್ಣಿನ ಮೇಲೆ ನಾಲ್ಕು ಲವಂಗಗಳನ್ನು ಇರಿಸಿ. ನೂರಾ ಎಂಟು ಬಾರಿ “ಓಂ ಶ್ರೀ ಹನುಮತೇ ನಮಃ” ಎಂದು ಪಠಿಸಿ. ಕೆಲಸಕ್ಕೆ ಹೋಗುವಾಗ ನಿಮ್ಮ ಜೊತೆ ನಿಂಬೆಹಣ್ಣನ್ನು ತೆಗೆದುಕೊಂಡು ಹೋಗಿ.
ಉದ್ಯೋಗ ಪಡೆಯಲು ನಿಂಬೆ ಹಣ್ಣು ನಿಮಗೆ ಸಹಾಯ ಮಾಡುತ್ತದೆ:
ಮಧ್ಯರಾತ್ರಿಯಲ್ಲಿ ಒಂದು ಚೂರು ಕಲೆಗಳಿಲ್ಲದ ನಿಂಬೆಹಣ್ಣನ್ನು ತೊಳೆಯಿರಿ. ನಿಂಬೆಹಣ್ಣನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿ. ನಾಲ್ಕು ದಾರಿ ಸೇರುವಲ್ಲಿ ನಾಲ್ಕು ಮೂಲೆಗಳಲ್ಲಿ ಎಸೆಯಿರಿ. ಉದ್ಯೋಗ ಸಿಗಲಿ ಎಂದು ಮನಸ್ಸಿನಲ್ಲಿ ಬಯಸಿ. ಏಳು ದಿನಗಳ ಕಾಲ ಇದನ್ನು ನಿರಂತರವಾಗಿ ಮಾಡುತ್ತಾ ಬನ್ನಿ.
ಸಂತೋಷ ಮತ್ತು ಸಮೃದ್ಧಿಗೆ ಹಣ್ಣಿನ ಸೂತ್ರ:
ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ಮೂರು ದಾರಿ ಸೇರುವಲ್ಲಿ ಹೋಗಿ. ನಿಂಬೆಯಿಂದ ಏಳು ಬಾರಿ ನಿವಾಳಿಸಿ. ನಿಂಬೆಹಣ್ಣನ್ನು ಎರಡು ತುಂಡುಗಳಾಗಿ ಕತ್ತರಿಸಿ. ಒಂದು ತುಂಡನ್ನು ನಿಮ್ಮ ಹಿಂದೆ ಮತ್ತು ಇನ್ನೊಂದು ತುಂಡನ್ನು ನಿಮ್ಮ ಮುಂದೆ ಎಸೆಯಿರಿ. ಹಿಂದಿರುಗಿ ನೋಡದೆ ಬನ್ನಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ
ಅಷ್ಟೇ ಅಲ್ಲದೆ, ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಂಬೆಹಣ್ಣಿನಿಂದ ಬಹಳ ದೋಷಗಳನ್ನು ನಿವಾರಿಸಿಕೊಳ್ಳಬಹುದು ಶನಿವಾರದ ದಿನ ನಿಂಬೆ ಹಣ್ಣಿನ ನಾಲ್ಕು ತುಂಡುಗಳನ್ನಾಗಿ ಮಾಡಿ ಅದಕ್ಕೆ ಅರಿಶಿನ ಕುಂಕುಮವನ್ನು ಹಚ್ಚಿ ನಿಮ್ಮ ಮನೆಯ ಹೊರದ್ವಾರದಲ್ಲಿ ಇಡಿ ಈ ರೀತಿ ಮಾಡುವುದರಿಂದ ನಿಮ್ಮ ಮನೆಗೆ ಆಂಟಿರುವ ದೃಷ್ಟಿ ದೋಷ ನಿವಾರಣೆಯಾಗುತ್ತದೆ ಹಾಗೆ ಮನೆಗೆ ದೃಷ್ಟಿ ತಾಗದಂತೆ ಮನೆಯ ಒಳಗಡೆ ಅಂದರೆ ಮನೆಯ ಹಾಲ್ನಲ್ಲಿ ಒಂದು ಗಾಜಿನ ಲೋಟದಲ್ಲಿ ಅರ್ಧ ನೀರನ್ನು ಹಾಕಿ ಹಾಗೆ ಲಿಂಬೆ ಹಣ್ಣನ್ನು ಹಾಕಿ ಇಡಿ. ಆ ನಿಂಬೆಹಣ್ಣು ತೇಲುತ್ತಾ ಇದೆ ಎಂದರೆ ನಿಮಗೆ ದೃಷ್ಟಿ ದೋಷ ಆಗಿಲ್ಲ ಅಂತ ಅರ್ಥ ಅಂದ ಹಾಗೆ ಆ ನಿಂಬೆಹಣ್ಣು ಮುಳುಗಿದರೆ ಖಂಡಿತವಾಗಲೂ ನಿಮ್ಮಮ್ಮನಿಗೆ ಅಥವಾ ನಿಮಗೆ ದೃಷ್ಟಿ ಆಗಿದೆ ಎಂದರ್ಥ ಈ ರೀತಿಯ ಪರಿಹಾರಗಳನ್ನ ಮಾಡಿಕೊಂಡು ನಿಮ್ಮ ಜೀವನದ ಸುಖ ಶಾಂತಿ ಹಾಗೂ ಸಮೃದ್ಧಿಯನ್ನು ಪಡೆಯಿರಿ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು