WhatsApp Group Join Now
Telegram Group Join Now

ವೈದಿಕ ಜ್ಯೋತಿಷ್ಯದ ಅನುಸಾರ 2024ರ ಜೂನ್ ತಿಂಗಳು ಹಲವು ರಾಶಿಯ ಜನರಿಗೆ ಅದೃಷ್ಟ ತಂದುಕೊಡುತ್ತದೆ. ಈ ತಿಂಗಳಿನಲ್ಲಿ ಒಂದಕ್ಕಿಂತ ಹೆಚ್ಚಿನ ರಾಜಯೋಗಗಳನ್ನು ಕೂಡ ಕಾಣಬಹುದು. ಇವು ವಿವಿಧ ರೀತಿ ರಾಶಿ ಚಕ್ರದಲ್ಲಿ ರೂಪುಗೊಳ್ಳುತ್ತವೆ. ನಾವು ಇಂದು ಮೇಷ ರಾಶಿಯಲ್ಲಿ ನಿರ್ಮಾಣ ಆಗುತ್ತಿರುವ ರಾಜಯೋಗದ ಕುರಿತು ನೋಡೋಣ. ಜೂನ್ ತಿಂಗಳ 1 ನೇ ತಾರೀಖು ಆರಂಭವಾಗುವ ಈ ರಾಜಯೋಗ ಜೂಲೈ 12 ನೇ ತಾರೀಖಿನ ತನಕ ಇರುತ್ತದೆ. ಇದು 6 ರಾಶಿಗಳಿಗೆ ಒಳ್ಳೆಯ ಫಲ ಕೊಡುತ್ತದೆ.

ಯಾವುವು ಈ ಅದೃಷ್ಟವಂತ ರಾಶಿಗಳು ಎಂದು ತಿಳಿಯೋಣ ಬನ್ನಿ :-
ಮೇಷ ರಾಶಿ :- ಈ ವಿಶೇಷ ರಾಜಯೋಗದಿಂದ ಮೇಷ ರಾಶಿಯ ಜನರಿಗೆ ಹೆಚ್ಚಿನ ಫಲ ಲಭಿಸುತ್ತದೆ. ಸುಖ ಮತ್ತು ಸಮೃದ್ಧಿ ಎರಡು ಈ ಕಾಲದಲ್ಲಿ ಅವರನ್ನು ಆವರಿಸಿಕೊಳ್ಳುತ್ತದೆ. ಸಮಾಜದಲ್ಲಿ ಮಾಡುವ ಕೆಲಸದಿಂದ ಗೌರವ ವೃದ್ಧಿ ಆಗುತ್ತದೆ. ಹೆಚ್ಚಿನ ಹಣ ಸಂಪಾದನೆ ಮಾಡುವ ಯೋಗ ಕೂಡ ಇದೆ.ಈ ರಾಶಿಯ ಜನರ ಅರ್ಥಿಕ ಸ್ಥಿತಿ ಉತ್ತಮವಾಗಿ ಅಭಿವೃದ್ಧಿ ಆಗುತ್ತದೆ. ವ್ಯಕ್ತಿತ್ವದಲ್ಲಿ ಸಾಕಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ಕಾಣಬಹುದು. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕೆಲಸ ಮತ್ತು ಜವಾಬ್ದಾರಿಗಳನ್ನು ನಿಭಾಯಿಸುವ ಸಾಮರ್ಥ್ಯ ಮೇಷ ರಾಶಿಯ ಜನರಿಂದ ಸಾಧ್ಯವಿದೆ.ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಲಾಭ ಗಳಿಕೆ ಮಾಡುವ ಸಾಧ್ಯತೆ ಇದೆ. ಸಂಗಾತಿ ಜೊತೆಗೆ ಉತ್ತಮ ಕ್ಷಣಗಳನ್ನು ಕಳೆಯುವ ಅವಕಾಶ ಇರುತ್ತದೆ. ಉದ್ಯೋಗದಲ್ಲಿ ಇರುವ ಜನರಿಗೆ ಕೆಲಸದಲ್ಲಿ ಸಹುದ್ಯೋಗಿಗಳ ಸಹಾಯ ಸಿಗುತ್ತದೆ.

ವೃಷಭ ರಾಶಿ :- ವೃಷಭ ರಾಶಿಯ ಜನರು ಹೆಚ್ಚಾಗಿ ಧಾರ್ಮಿಕತೆಯ ಕಡೆಗೆ ವಾಲುವ ಸಾಧ್ಯತೆ ಇದೆ. ದೂರದ ದೇವರ ಯಾತ್ರೆಗೆ ಕುಟುಂಬದ ಜೊತೆಗೆ ಹೋಗುವ ಅವಕಾಶ ಇದೆ. ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವುದರಿಂದ ಪುಣ್ಯ ಸಿಗುತ್ತದೆ. ಹೆಚ್ಚಿನ ಹಣದ ಖರ್ಚು ವೆಚ್ಚ ಎದುರಾದರು ಇದರಿಂದ ಬದುಕಿನಲ್ಲಿ ಸುಖ ಶಾಂತಿ ನೆಮ್ಮದಿ ಎಲ್ಲಾ ಬಂದು ನೆಲೆಸುತ್ತದೆ. ವೃಷಭ ರಾಶಿಯವರ ವಿದೇಶ ಪ್ರಯಾಣ ಮಾಡುವ ಸ್ವಪ್ನ ಕೂಡ ನೆರವೇರುತ್ತದೆ. ವಿದ್ಯಾಭ್ಯಾಸದ ಸಲುವಾಗಿ ವಿದೇಶಕ್ಕೆ ಹೋಗಲು ಬಯಸುವ ಜನರಿಗೆ ಈ ಸಮಯ ಸೂಕ್ತವಾಗಿದೆ. ವೈವಾಹಿಕ ಜೀವನದಲ್ಲಿ ಸಂಗಾತಿ ಜೊತೆಗೆ ಸ್ವಲ್ಪ ಮಟ್ಟಿನ ಮನಸ್ತಾಪ ಉಂಟಾಗುವ ಸಾಧ್ಯತೆಗಳಿವೆ. ಈ ವಿಷಯದಲ್ಲಿ ಕೋಪಕ್ಕಿಂದ ತಾಳ್ಮೆ ಮುಖ್ಯ. ಶಾಂತ ರೀತಿಯಲ್ಲಿ ಎಲ್ಲವನ್ನು ಪರಿಹಾರ ಮಾಡಿಕೊಳ್ಳಬೇಕು.

ಮಿಥುನ ರಾಶಿ :- ಮಿಥುನ ರಾಶಿಯ ಜನರ ಹಣ ಕಾಸಿನ ಸ್ಥಿತಿ ಅಭಿವೃದ್ಧಿ ಆಗುತ್ತದೆ. ಉದ್ಯೋಗಲ್ಲಿ ಇರುವ ಜನರಿಗೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರಕುತ್ತದೆ. ವ್ಯಾಪಾರ ಅಥವಾ ಹೂಡಿಕೆ ಮಾಡಲು ಈ ರಾಶಿಯ ಜನರಿಗೆ ಇದು ಉತ್ತಮ ಕಾಲ. ನೂತನ ವ್ಯವಹಾರ ಆರಂಭ ಮಾಡಲು ಕೂಡ ಇದು ಅನುಕೂಲಕರ ಕಾಲವಾಗಿದೆ.ಹಣ ಉಳಿತಾಯ ಮಾಡುವ ಬುದ್ಧಿಶಕ್ತಿಯನ್ನು ರಾಜಯೋಗ ತಂದುಕೊಡುತ್ತದೆ. ಆರೋಗ್ಯ ಸಮಸ್ಯೆ ಏನಾದರೂ ಮಿಥುನ ರಾಶಿಯವರನ್ನು ಕಾಡುತ್ತಿದ್ದರೆ ಅದರಿಂದ ಮುಕ್ತಿ ದೊರಕುತ್ತದೆ.

ಕುಂಭ ರಾಶಿ :- ಜೂನ್ ತಿಂಗಳಿನಲ್ಲಿ ಕುಂಭ ರಾಶಿಯವರ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಅಭಿವೃದ್ದಿ ಆಗುತ್ತದೆ. ಹೊಸ ಹೊಸ ಮಾರ್ಗಗಳಿಂದ ಆದಾಯ ಗಳಿಕೆ ಮಾಡುವ ಸಾಧ್ಯತೆ ಇದೆ. ಪ್ರೀತಿಯ ಜೀವನ ಸುಧಾರಣೆ ಕಾಣುವುದು. ಸಂಗಾತಿ ಜೊತೆಗಿನ ಸಂಬಂಧ ಗಟ್ಟಿಯಾಗುತ್ತದೆ. ಕೆಲಸದಲ್ಲಿ ಇರುವ ಕುಂಭ ರಾಶಿಯ ಜನರಿಗೆ ಸಂಬಳ ಹೆಚ್ಚಾಗುತ್ತದೆ. ಒಡಹುಟ್ಟಿದವರು ಜೊತೆಗೆ ಪ್ರವಾಸ ಮಾಡುವ ಯೋಗ ಈ ರಾಶಿಯ ವ್ಯಕ್ತಿಗಳಿಗೆ ಇರುತ್ತದೆ. ಕುಂಭ ರಾಶಿಯ 3 ನೇ ಮನೆಯಲ್ಲಿ ಗಜಲಕ್ಷ್ಮಿ ರಾಜಯೋಗ ರೂಪುಗೊಳ್ಳುತ್ತದೆ.

ಈ ರಾಶಿಯವರಿಗೆ ಲಕ್ಷ್ಮಿ ದೇವಿಯ ಅನುಗ್ರಹದ ಜೊತೆಗೆ ಅದೃಷ್ಟ ಕೂಡ ಲಭಿಸುತ್ತದೆ. ಮಾಡುವ ಪ್ರತಿ ಕೆಲಸದಲ್ಲಿ ಒಳ್ಳೆಯ ಯಶಸ್ಸು ಸಿಗುತ್ತದೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರಕುತ್ತದೆ. ಅನಿರೀಕ್ಷಿತ ಆರ್ಥಿಕ ಲಾಭ ಸಿಗುತ್ತದೆ. ಕಾನೂನಿನ ವಿಚಾರದಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ.

ಮೀನ ರಾಶಿ :- ಮೀನ ರಾಶಿಯ ಜನರಿಗೆ ಜೂನ್ ತಿಂಗಳು ಅದೃಷ್ಟ ತರುತ್ತದೆ. ಕೆಲಸದಲ್ಲಿ ಇರುವ ಜನರಿಗೆ ಹಿರಿಯ ಅಧಿಕಾರಿಗಳ ಸಹಕಾರ ಸಿಗುತ್ತದೆ. ಯಾವುದೇ ತೊಂದರೆ ಎದುರಾದರು ಅದನ್ನು ಧೈರ್ಯದಿಂದ ಎದುರಿಸುವ ಸಾಮರ್ಥ್ಯ ಮೀನ ರಾಶಿಯ ಜನರಿಗೆ ಇದೆ.

ಮನೆಯಲ್ಲಿ ಸ್ವಲ್ಪ ಮಟ್ಟಿನ ಅಶಾಂತಿ ನೆಲೆಸಿರುತ್ತದೆ. ಆದರೆ ಮೀನ ರಾಶಿಯ ವ್ಯಕ್ತಿಗಳು ಶತ್ರುಗಳ ವಿರುದ್ಧ ಗೆಲುವು ಸಾಧಿಸುವ ಸಾಧ್ಯತೆ ಈ ತಿಂಗಳಿನಲ್ಲಿ ಇದೆ. ಹೊಟ್ಟೆ ಮತ್ತು ಕಾಲು ನೋವಿನ ಆರೋಗ್ಯ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಅದರಿಂದ, ಆರೋಗ್ಯದ ಕಾಳಜಿ ಮಾಡಬೇಕು. ಸೂರ್ಯನ ಆಶೀರ್ವಾದದಿಂದ ಕೆಲವು ಹಳೆಯ ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳು ಪರಿಹಾರ ಆಗುತ್ತವೆ. ಉದ್ಯೋಗದ ವಿಚಾರದಲ್ಲಿ ಪ್ರತಿಸ್ಪರ್ಧಿಳಿಂದ ಹೆಚ್ಚಿನ ಅಡ್ಡಿ ಆತಂಕ ಎದುರಾಗುವ ಸಾಧ್ಯತೆ ಇರುತ್ತದೆ. ಅವರನ್ನು ಸೋಲಿಸುವ ಬುದ್ದಿ ಈ ರಾಶಿಯವರಿಗೆ ಇರುತ್ತದೆ.

ವೃಶ್ಚಿಕ ರಾಶಿ :-ಜೂನ್ ತಿಂಗಳಿನಲ್ಲಿ ವೃಶ್ಚಿಕ ರಾಶಿಯವರ ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ. ಸಂಗಾತಿ ಜೊತೆಗಿನ ತೊಂದರೆಗಳಿಗೆ ಈ ಸಮಯದಲ್ಲಿ ಪರಿಹಾರ ಕಾಣಬಹುದು. ಅವಿವಾಹಿತರು ವಿಶೇಷ ವ್ಯಕ್ತಿಯನ್ನು ಭೇಟಿ ಮಾಡುವ ಯೋಗವಿದೆ. ವೃತ್ತಿ ಬದುಕಿನಲ್ಲಿ ಒಳ್ಳೆಯ ಗೆಲುವು ಸಾಧಿಸುವ ಸಾಧ್ಯತೆ ಇದೆ. ಉದ್ಯೋಗ ಇಲ್ಲದ ಜನರಿಗೆ ಕೆಲಸ ಸಿಗುತ್ತದೆ. ವೃಶ್ಚಿಕ ರಾಶಿಯ ಜನರಿಗೆ ಪ್ರತಿಷ್ಠೆ ಹೆಚ್ಚಾಗುವ ಸಾಧ್ಯತೆಗಳಿವೆ. ಮೇಲಿನ ಸ್ಥಾನಕ್ಕೆ ಬಡ್ತಿ ಪಡೆಯುವ ಅವಕಾಶವನ್ನು ವೃಶ್ಚಿಕ ರಾಶಿಯವರು ಪಡೆಯುವರು. ದೂರ ಪ್ರಯಾಣ ಮಾಡುವ ಸಲುವಾಗಿ ಹೆಚ್ಚಿನ ಖರ್ಚು ಆಗುತ್ತದೆ. ಶತ್ರುಗಳ ವಿರುದ್ಧ ಗೆಲುವು ಸಾಧಿಸುವ ಸಾಧ್ಯತೆ ಇರುತ್ತದೆ. ಈ ರಾಶಿಯವರಿಗೆ ಇಷ್ಟು ದಿನ ಕಾಡಿದ ಆರೋಗ್ಯ ಸಮಸ್ಯೆಯಿಂದ ಮುಕ್ತಿ ದೊರಕುತ್ತದೆ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: