WhatsApp Group Join Now
Telegram Group Join Now

Actor Ajay Rao ಸ್ನೇಹಿತರೆ, ಕನ್ನಡ ಚಿತ್ರರಂಗದ ಕೃಷ್ಣ ಎಂದೆ ಪ್ರಖ್ಯಾತಿ ಪಡೆದಿರುವಂತಹ ಅಜಯ್ ರಾವ್ ಅವರು ರಮ್ಯಾ ಹಾಗೂ ಸುನಿಲ್ ಅವರ ಕಾಂಬಿನೇಷನ್ನಲ್ಲಿ ತಯಾರಾಗಿದ್ದ ಎಕ್ಸ್ಕ್ಯೂಸ್ ಮಿ(Excuse me) ಎಂಬ ಸಿನಿಮಾದ ಮೂಲಕ 2003ರಲ್ಲಿ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ ಸತತ 20 ವರ್ಷಗಳಿಂದ ತಮ್ಮ ಯಶಸ್ವಿ ಸಿನಿಮಾಗಳ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿರುವಂತಹ ಮೇರು ನಟ.

ಅದರಲ್ಲೂ ತಾಜ್ಮಹಲ್, ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣ ಲೀಲಾ ದಂತಹ ಹೋಂ ಬ್ಯಾನರ್ ಶ್ರೀ ಕೃಷ್ಣ ಅಂಡ್ ಕ್ರಿಯೇಶನ್ ಸಿನಿಮಾಗಳ ಮೂಲಕ ಜನರ ಮನಸ್ಸಿಗೆ ಇನ್ನಷ್ಟು ಹತ್ತಿರವಾದಂತಹ ನಟ ಅಜಯ್ ರಾವ್, ಪ್ರೀತಿ ಪ್ರೇಮ ಆಧಾರಿತ ಸಿನಿಮಾಗಳ ಮೂಲಕವೇ ಇಂದಿಗೂ ಜನರ ಮನಸ್ಸಿನಲ್ಲಿ ವಿಶೇಷವಾದ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಮೂಲತಃ ಹೊಸಪೇಟೆಯವರಾದ ಅಜಯ್ ರಾವ್ ಅವರು ಸ್ವಪ್ನ ಎಂಬವರನ್ನು ಪ್ರೀತಿಸಿ 2014ರಲ್ಲಿ ಮನೆಯವರೆಲ್ಲರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗಳಿಗೆ ಮದುವೆಯಾದ ನಾಲ್ಕು ವರ್ಷಗಳ ನಂತರ ಚರಿಷ್ಮಾ ಎಂಬ ಮುದ್ದಾದ ಹೆಣ್ಣು ಮಗಳು ಜನಿಸಿದ್ದು, ಆಗಾಗ ತಮ್ಮ ಮಗಳ ಹಾಗೂ ಕುಟುಂಬದ ಫೋಟೋಗಳನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ಹಂಚಿಕೊಳ್ಳುತ್ತಾ ಅಜಯ್ ರಾವ್ ವೈರಲ್ ಆಗುವಂತಹ ಅಜಯ್

ರಾವ್ ಅವರ ಕುಟುಂಬಕ್ಕೆ ಯಾರ ವಕ್ರದೃಷ್ಟಿಯು ತಾಗದೆ ಇರಲಿ ಎಂದು ಅಭಿಮಾನಿಗಳು ಕಮೆಂಟ್ ಮೂಲಕ ಬೇಡಿಕೊಳ್ಳುತ್ತಲೇ ಇರುತ್ತಾರೆ. ಇನ್ನು 2022 ಶೋಕಿ ವಾಲಾ ಮತ್ತು ದಿಲ್ ಪಸಂದ್(Dilpasand) ಎರಡೆರಡು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳನ್ನು ತೆರೆಯ ಮೇಲೆ ರಂಜಿಸಿದ್ದ ಅಜಯ್ ರಾವ್ ಅವರು ಈ ಬಾರಿಯೂ ಕೂಡ ತಮ್ಮದೇ ನಾಯಕತ್ವದಲ್ಲಿ ತಯಾರಾಗುತ್ತಿರುವ ಎರಡು ಸಿನಿಮಾಗಳನ್ನು ತೆರೆಗೆ ತರಲು ಸಜ್ಜಾಗಿದ್ದಾರೆ.

ಹೌದು ಗೆಳೆಯರೇ ಸೆಪ್ಟೆಂಬರ್ 1ನೇ ತಾರೀಕು ಪವನ್ ಭಟ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಯುದ್ಧ ಕಾಂಡ(Yuddakanda) ಸಿನಿಮಾ ತೆರೆ ಕಾಣಲಿದ್ದು, ಡಿಸೆಂಬರ್ ತಿಂಗಳಿನಲ್ಲಿ ನಿರ್ದೇಶಕ ವೇದ್ಗುರು ಹಾಗೂ ಅಜಯ್ ರಾವ್ ಅವರ ಕಾಂಬಿನೇಷನ್ನಲ್ಲಿ ತಯಾರಾಗುತ್ತಿರುವ ದಂಡಯಾತ್ರೆ(Dandayatre) ಸಿನಿಮಾ ತೆರೆಗಪ್ಪಳಿಸಲಿದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: