WhatsApp Group Join Now
Telegram Group Join Now

ಸೂರ್ಯಗ್ರಹಣ ಎಂದರೆ ಸಾಮಾನ್ಯವಾಗಿ ಎಲ್ಲರಲ್ಲೂ ಒಂದು ರೀತಿಯ ಭಯ ಇರುತ್ತದೆ. ತಮ್ಮ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎನ್ನುವುದೇ ಈ ಭಯ. ಈ ವರ್ಷದ ಕೊನೆಯ ಸೂರ್ಯಗ್ರಹಣ ಆಕ್ಟೊಬರ್ 14ರಂದು ಗೋಚರಿಸಿದೆ. ಮಹಾಲಯ ಅಮಾವಾಸ್ಯೆಯ ದಿನವೇ ಸೂರ್ಯಗ್ರಹಣ ಬಂದಿರುವುದು ಮತ್ತೊಂದು ಅನಿರೀಕ್ಷಿತ ಘಟಿನೆ. ಸೂರ್ಯಗ್ರಹಣ ನಡೆಯುವ ಸಮಯವನ್ನು ಸೂತಕದ ಸಮಯ ಎಂದು ಹೇಳಲಾಗುತ್ತದೆ, ಈ ವೇಳೆಯಲ್ಲಿ ಯಾವುದೇ ಒಳ್ಳೆಯ ಕೆಲಸಗಳನ್ನು ಮಾಡುವುದಿಲ್ಲ..

ಗ್ರಹಣದ ವೇಳೆ ಗರ್ಭಿಣಿಯರು ಬಹಳ ಹುಷಾರಾಗಿ ಇರಬೇಕು, ಏಕೆಂದರೆ ಗ್ರಹಣದ ನೆಗಟಿವ್ ಪರಿಣಾಮ ಗರ್ಭಿಣಿಯ ಒಳಗಿರುವ ಭ್ರೂಣದ ಮೇಲೆ ಪ್ರಭಾವ ಬೀರಬಹುದು. ಈ ಕಾರಣಕ್ಕೆ ಗ್ರಹಣದ ವೇಳೆ ಗರ್ಭಿಣಿಯರು ಮನೆಯಿಂದ ಹೊರಬರುವ ಹಾಗಿಲ್ಲ ಎನ್ನುತ್ತಾರೆ. ಗ್ರಹಣದ ವೇಳೆ ದೈನಂದಿನ ಕೆಲಸಗಳನ್ನು ಸಹ ಮಾಡಬಾರದು ಎಂದು ಹೇಳುತ್ತಾರೆ. ಈ ಸಮಯದಲ್ಲಿ ಮೃತ್ಯುಂಜಯ ಮಂತ್ರ ಅಥವಾ ಪಂಚಾಕ್ಷರಿ ಮಂತ್ರ, ಹನುಮಾನ್ ಚಾಲೀಸ ಅಥವಾ ಗಾಯತ್ರಿ ಮಂತ್ರದ ಪಠಣೆ ಮಾಡುವುದು ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ.

ಗ್ರಹಣದ ವೇಳೆ ಪೂಜೆ ಮಾಡುವ ಹಾಗಿಲ್ಲ, ದೇವರ ಮೂರ್ತಿ ಫೋಟೋ ಸ್ಪರ್ಶಿಸುವ ಹಾಗಿಲ್ಲ. ಗ್ರಹಣದ ಸಮಯ ಮುಗಿದ ಬಳಿಕ ಮನೆ ಕ್ಲೀನ್ ಮಾಡಿ, ತುಳಸಿ ನೀರು ಅಥವಾ ಗೋಮೂತ್ರದಿಂದ ಮನೆಯನ್ನು ಸಿಂಪಡಿಸಿ ಬಳಿಕ ದೇವರ ಪೂಜೆ ಮಾಡಬೇಕು. ಬಳಿಕ ಅಡುಗೆ ಮಾಡಿ ಊಟ ಮಾಡಬೇಕು. ಈ ಗ್ರಹಣದಿಂದ ಶುಭಫಲ ಪಡೆಯುವ 6 ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಗ್ರಹಣ ಕಳೆದ ನಂತರ ನಿಮ್ಮ ಒಳ್ಳೆಯ ಸಮಯ ಶುರುವಾಗುತ್ತದೆ. ಸಮಾಜದಲ್ಲಿ ಗೌರವ ಪ್ರತಿಷ್ಠೆ ಹೆಚ್ಚಾಗುತ್ತದೆ, ಸಂಪತ್ತು ಲಭಿಸುತ್ತದೆ. ಈ ವೇಳೆ ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವವರಿಗೆ ಹೆಚ್ಚಿನ ಲಾಭ ಸಿಗುತ್ತದೆ. ಲಾಟರಿ ಇಂದ ಲಾಭ ಸಿಗಬಹುದು, ಕಳೆದುಹೋಗಿರುವ ಹಣ ಮತ್ತೆ ನಿಮ್ಮ ಕೈಸೇರಬಹುದು.

ಮಿಥುನ ರಾಶಿ :- ಈ ವೇಳೆ ಹೂಡಿಕೆ ಮಾಡಿದರೆ ದುಪ್ಪಟ್ಟು ಹಣ ನಿಮ್ಮದಾಗುತ್ತದೆ. ನಿಮ್ಮ ಆದಾಯದ ಪ್ರಮಾಣ ಜಾಸ್ತಿಯಾಗುತ್ತದೆ. ಉದ್ಯೋಗದಲ್ಲಿ ಬದಲಾವಣೆ ಕಾಣುತ್ತೀರಿ. ಮನೆಯ ಜವಾಬ್ದಾರಿ ಜಾಸ್ತಿಯಾಗುತ್ತದೆ. ನಿಮ್ಮ ಸಮಯ ಶುಭಕಾಲವಾಗಿ ಬದಲಾಗುತ್ತದೆ. ಈ ಸಮಯದಲ್ಲಿ ನಿಮ್ಮ ಸುತ್ತ ಇರುವವರ ಜೊತೆಗಿನ ಸಂಬಂಧದ ಬಗ್ಗೆ ಗಮನ ಕೊಡುವುದು ಒಳ್ಳೆಯದು.

ಧನು ರಾಶಿ :- ಮಕ್ಕಳಿಲ್ಲ ಎಂದು ನೊಂದುಕೊಂಡಿರುವವರಿಗೆ ಇದು ಒಳ್ಳೆಯ ಸಮಯ. ದಂಪತಿಗಳ ನಡುವಿನ ಸಮಸ್ಯೆಗಳು ಬಗೆಹರಿಯುತ್ತದೆ. ಮಕ್ಕಳಿಂದ ಸಂತೋಷದ ಸುದ್ದಿ ಕೇಳುತ್ತೀರಿ. ಆರ್ಥಿಕ ವಿಚಾರದಲ್ಲಿ ಹೆಚ್ಚು ಬದಲಾವಣೆ ಉಂಟಾಗುತ್ತದೆ. ಯಾರಿಗೂ ತಿಳಿಯದ ಹಾಗೆ ಹಣಕಾಸಿನ ಲಾಭವಾಗುತ್ತದೆ.

ಕುಂಭ ರಾಶಿ :- ನಿಮಗೆ ಧನಲಾಭವಾಗುತ್ತದೆ. ಬ್ಯುಸಿನೆಸ್ ಗಳಲ್ಲಿ ಇನ್ವೆಸ್ಟ್ ಮಾಡಿರುವವರಿಗೆ ಒಳ್ಳೆಯ ಲಾಭ ಸಿಗುತ್ತದೆ. ನಿಮ್ಮ ಹಣ ಖರ್ಚಾಗಬೇಕು ಎನ್ನುವ ಸಮಯಕ್ಕೆ ಹಣ ಸಿಗುತ್ತದೆ. ಆರ್ಥಿಕ ವಿಚಾರದಲ್ಲಿ ಬದುಕು ಬದಲಾಗುತ್ತದೆ. ಈ ವೇಳೆ ಆರೋಗ್ಯದ ಬಗ್ಗೆ ಗಮನ ಕೊಡಿ.

ಮೀನ ರಾಶಿ :- ಈ ಸಮಯದಲ್ಲಿ ನಿಮಗೆ ಬಹಳ ಬೇಗ ಲಾಭ ಸಿಗುತ್ತದೆ. ಈ ವೇಳೆ ಅದೃಷ್ಟ, ಐಶ್ವರ್ಯ, ಸಂಪತ್ತು ಎಲ್ಲವು ನಿಮ್ಮ ಅನುಗ್ರಹವಾಗಲಿದೆ. ಬದುಕಿನಲ್ಲಿ ಸಂತೋಷದಿಂದ ಶಾಂತಿಯಿಂದ ಇರುತ್ತೀರಿ. ನಿಮಗೆ ಶುಭಕಾರ್ಯಗಳನ್ನು ಮಾಡಲು ಹೆಚ್ಚಿನ ಶಕ್ತಿ ಸಿಗುತ್ತದೆ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: