ನವರಾತ್ರಿಯ ನಂತರ ನವ ದುರ್ಗೆರ ಆಶೀರ್ವಾದದಿಂದ ಈ ಮೂರು ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ; ಆ ಮೂರು ರಾಶಿಯವರು ಯಾರೆಲ್ಲ ಗೊತ್ತಾ

0

ನಮ್ಮ ಪೂರ್ವಜರ ಕಾಲದಿಂದಲೂ ಕೂಡ ನಾವು ನವರಾತ್ರಿಯನ್ನು ಅತ್ಯಂತ ಪವಿತ್ರ ದಿನವಾಗಿ ನಮ್ಮ ದೇಶದಾದ್ಯಂತ ಪ್ರತಿಯೊಂದು ಹಿಂದೂ ಕುಟುಂಬವು ಕೂಡ ಆಚರಿಸುತ್ತೆ. ಈ ಸಂದರ್ಭದಲ್ಲಿ ಶ್ರೀ ದುರ್ಗೆಯನ್ನು ಆಕೆಯ ಒಂಬತ್ತು ಅವತಾರಗಳಲ್ಲಿ ನಾವು ಪೂಜಿಸುತ್ತೇವೆ. ಇನ್ನು ಈಗಾಗಲೇ ನವರಾತ್ರಿ ಮುಗಿದಿದ್ದು ವಿಜಯದಶಮಿ ಕೂಡ ಈಗಾಗಲೇ ಸಂಪೂರ್ಣವಾಗಿ ಯಶಸ್ವಿಯಾಗಿದ್ದು ಇದಾದ ನಂತರ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅದೃಷ್ಟವನ್ನು ಹೊಂದಲಿರುವ ಮೂರು ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಮೇಷ ರಾಶಿ; ಜೀವನದಲ್ಲಿ ಏನೆಲ್ಲಾ ಸಾಧಿಸಬೇಕು ಎನ್ನುವ ಕನಸನ್ನು ಹೊಂದಿದ್ದಾರೆ ಈ ಸಂದರ್ಭದಲ್ಲಿ ಮೇಷ ರಾಶಿ ಅವರು ಅದನ್ನೆಲ್ಲ ಪೂರ್ತಿಗೊಳಿಸಲಿದ್ದಾರೆ. ಇನ್ನು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಅವರಿಗೆ ಯಶಸ್ಸು ಶತಸಿದ್ಧ. ದಿನಕ್ಕೊಮ್ಮೆ ದುರ್ಗಾ ಮಾತೆಯ ಪೂಜೆ ಮಾಡಿದರೆ ಸಾಕು ನಿಮ್ಮ ಕೆಲಸಗಳಲ್ಲಿ ಯಾವುದೇ ಅಡ್ಡಿ ಆತಂಕಗಳು ಬಂದರೂ ಕೂಡ ನಿವಾರಣೆಯಾಗುತ್ತವೆ ಹಾಗೂ ನಿಮ್ಮ ಜೀವನದಲ್ಲಿ ಸಂತೋಷ ಹಾಗೂ ಖುಷಿ ತುಂಬಿ ತುಳುಕಲಿದೆ.

ಕುಂಭ ರಾಶಿ; ದುರ್ಗಾಮಾತೆಯ ಆಶೀರ್ವಾದ ಇರುವ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಕುಂಭ ರಾಶಿಯವರು ದೊಡ್ಡ ಮಟ್ಟದ ಸಾಧನೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಕೇವಲ ಇಷ್ಟು ಮಾತ್ರವಲ್ಲದೆ ಹೂಡಿಕೆ ಮಾಡಿದರೆ ಉತ್ತಮ ರಿಟರ್ನ್ಸ್ ಕೂಡ ಸಿಗುತ್ತದೆ. ಕೆಲಸ ಇಲ್ಲದವರಿಗೆ ಕೆಲಸ ಸಿಗಲಿದ್ದು ಈಗಾಗಲೇ ಕೆಲಸದಲ್ಲಿ ಇರುವವರಿಗೆ ಪ್ರಮೋಷನ್ ಹಾಗೂ ಉತ್ತಮ ವೇತನ ಕೂಡ ಹೆಚ್ಚಾಗಲಿದೆ. ವ್ಯಾಪಾರ ಹಾಗೂ ವ್ಯವಹಾರದಲ್ಲಿ ಕೂಡ ಈ ಸಂದರ್ಭದಲ್ಲಿ ದೇವಿಯ ಕೃಪೆಯಿಂದ ಹಾಗೂ ಲಕ್ಷ್ಮಿ ಮಾತೆಯ ಅನುಗ್ರಹದಿಂದ ಉತ್ತಮ ಲಾಭವನ್ನು ಸಂಪಾದಿಸಲಿದ್ದಾರೆ.

ಮೀನ ರಾಶಿ; ವೈಯಕ್ತಿಕ ಜೀವನದಲ್ಲಿ ಸುಖ ಸಂತೋಷ ಹೆಚ್ಚಾಗಲಿದ್ದು ಪೋಷಕರು ಮಕ್ಕಳಿಂದ ಉತ್ತಮ ಫಲಿತಾಂಶವನ್ನು ಈ ಸಂದರ್ಭದಲ್ಲಿ ನಿರೀಕ್ಷಿಸಬಹುದಾಗಿದೆ. ಕಂಕಣ ಭಾಗ್ಯ ಇಲ್ಲದವರಿಗೆ ಕಂಕಣ ಭಾಗ್ಯ ಹಾಗೂ ಸಂತಾನ ಭಾಗ್ಯ ಇಲ್ಲದವರಿಗೆ ಸಂತಾನ ಭಾಗ್ಯ ಕೂಡಿ ಬರಲಿದೆ. ಆದಷ್ಟು ನಿಮ್ಮ ಕೈಯಿಂದ ಬಡವರಿಗೆ ಸಹಾಯವನ್ನು ಮಾಡುವುದನ್ನು ಮಾತ್ರ ಮರೆಯಬೇಡಿ. ದಿನಕ್ಕೆ ಒಮ್ಮೆಯಾದರೂ ದೇವಿಯನ್ನು ನಿಮ್ಮ ಮನಸ್ಸಿನಲ್ಲಿ ನೆನೆಸಿಕೊಳ್ಳಿ ನಿಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತವೆ. ನಿಮ್ಮ ರಾಶಿ ಕೂಡ ಇವುಗಳಲ್ಲಿ ಇದ್ದರೆ ತಪ್ಪದೇ ಓಂ ಶ್ರೀ ದುರ್ಗಾಯ ನಮಃ ಎಂಬುದಾಗಿ ಕಾಮೆಂಟ್ ಮಾಡಿ.

Leave A Reply

Your email address will not be published.

error: Content is protected !!