ಮದುವೆಯಾಗಲು ನಾನಾ ಸಂಕಷ್ಟ ಬರುತ್ತಿದ್ದರೆ, ಈ ದೇವಾಲಯಕ್ಕೆ ಭೇಟಿ ಕೊಡಿ, ಬೇಗ ಮದುವೆ ಆಗುತ್ತೆ

0

ಶುದ್ಧ ಮತ್ತು ಸಾಂಪ್ರದಾಯಿಕ ಪೂಜಾ ವಿಧಾನಕ್ಕೆ ಸೂಕ್ತ ಸ್ಥಳದಲ್ಲಿ ಸತ್ವಪೂರ್ಣ ಸನ್ನಿಧಿ. ಸಾತ್ವಿಕ ಸೇವಾನಿಷ್ಠರು, ಸಮಗ್ರ ಪರಿಕರ, ಸನ್ನಡತೆಯ ಪರಿವಾರ, ಸಮೃದ್ಧ ಭಕ್ತಗಣ, ಸರ್ವರಿಗೂ ಸಮಾನ ಸ್ಥಾನ, ಇವೆಲ್ಲದರ ಪರಿಣಾಮ ಸಂಪೂರ್ಣ ದೇವಾನುಗ್ರಹ ದೊರಕುವ ಕ್ಷೇತ್ರದಲ್ಲಿ ಸಕಲ ಇಷ್ಟಾರ್ಥಗಳೂ ನೆರವೇರುತ್ತವೆ. ಅಂತಹ ಕ್ಷೇತ್ರಗಳಲ್ಲಿ ಒಂದಾದ ಮತ್ತು ಅವಿವಾಹಿತರಿಗೆ ಕಂಕಣ ಭಾಗ್ಯ ನೀಡುವ ಕ್ಷೇತ್ರ ಎಂದೇ ಪ್ರಸಿದ್ದಿ ಪಡೆದಿರುವ ಈ ಕ್ಷೇತ್ರಕ್ಕೆ ಒಮ್ಮೆ ಭೇಟಿ ನೀಡಿದರೆ ಒಂದು ವರುಷದ ಒಳಗಡೆ ವಿವಾಹ ಭಾಗ್ಯ ಲಭಿಸುವುದು ಎಂಬ ಬಲವಾದ ನಂಬಿಕೆ ಇದೆ.

ಈ ಪುಣ್ಯ ಕ್ಷೇತ್ರ ಇರುವುದು ದಕ್ಷಿಣ ಭಾರತದ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಚೆನ್ನೈನಲ್ಲಿರುವ ತಿರುವಿಂದಂಡೈನಲ್ಲಿರುವ ನಿತ್ಯಾಕಲೈಯ ಪೆರುಮಾಳ್ ದೇವಾಲಯ. ಧರ್ಮಸಂಸ್ಥಾಪಕ ಶ್ರೀ ಮಹಾವಿಷ್ಣು ಸಮರ್ಪಿತವಾದ ದೇವಾಲಯವಿದು. ಈ ದೇವಾಲಯದಲ್ಲಿ ವಿವಾಹ ಭಾಗ್ಯ ವಿಳಂಬವಾಗಿರುವ ಮಂದಿ ಇಲ್ಲಿ ಬಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿದರೆ ವಿವಾಹ ಭಾಗ್ಯ ಫಲ ಸಿಗುತ್ತದೆ. ಇಂತಹದ್ದೊಂದು ನಂಬಿಕೆ ಇರುವ ಪುಣ್ಯ ಕ್ಷೇತ್ರವಿದು.

ಹಿಂದೂ ಸಾಹಿತ್ಯದಲ್ಲಿ, ಶ್ರೀ ವಿಷ್ಣುವಿಗೆ ಅರ್ಪಿತವಾದ 108 ಪವಿತ್ರ ದೇವಾಲಯಗಳಲ್ಲಿ ಒಂದಾಗಿದ್ದು ಸುಮಾರು 6 ರಿಂದ 9 ನೇ ಶತಮಾನದ ಮಧ್ಯ ಕಾಲದಲ್ಲಿ ದ್ರಾವಿಡ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಇದರ ಇನ್ನೊಂದು ವಿಶೇಷವೇನೆಂದರೆ ಒಂದು ಗ್ರಾನೈಟ್ ಗೋಡೆಯ ದೇವಾಲಯದ ಸುತ್ತಲೂ ಅದರ ಎಲ್ಲಾ ದೇವಾಲಯಗಳನ್ನು ಸುತ್ತವರೆದಿದ್ದಾರೆ. ಈ ದೇವಾಲಯವನ್ನು ತೆಂಕಲೈ ಪದ್ದತಿಯಲ್ಲಿ ಆರಾಧನೆಯನ್ನು ಅನುಸರಿಸುತ್ತಿದ್ದಾರೆ.

ಈ ದೇವಾಲಯಕ್ಕೆ ಪೌರಾಣಿಕ ಹಿನ್ನಲೆ ಇದೆ: ಭಾಗವತಪುರಾಣದ ಪ್ರಕಾರ, ಬ್ರಹ್ಮನ ಮನಸ್ಸಿನಿಂದ ಹುಟ್ಟಿದ ಮಕ್ಕಳು ಕುಮಾರರಿಗೆ ಜಯ ವಿಜಯರನ್ನು ತಮ್ಮ ದೈವತ್ವದ ತ್ಯಜಿಸಿ, ವೈಕುಂಠದಿಂದ ಹೊರಹೋಗಿ, ಮನುಷ್ಯರ ಜನ್ಮ ತೆಗೆದುಕೊಂಡು ಸಾಮಾನ್ಯ ಮಾನವರಂತೆ ಬಾಳಬೇಕು ಎಂದು ಶಪಿಸುತ್ತಾನೆ. ಆಗ ಜಯ ವಿಜಯರು ವಿಷ್ಣುವನ್ನು ಶಾಪದಿಂದ ಮುಕ್ತಿ ಪಡಿಸಲು ಕೋರಿಕೋಂಡರು. ಕುಮಾರರಿಗೆ ಈ ಶಾಪದಿಂದ ವ್ಯತಿರಿಕ್ತವಾಗದ ಕಾರಣ, ವಿಷ್ಣು ಜಯ ಮತ್ತು ವಿಜಯರಿಗೆ ಎರಡು ಆಯ್ಕೆಗಳನ್ನು ನೀಡಿದರು. ಮೊದಲನೇ ಆಯ್ಕೆಯ ಪ್ರಕಾರ ವಿಷ್ಣುವಿನ ಶತ್ರುಗಳಾಗಿ ಮೂರು ಬಾರಿ ಜನಿಸುವುದು ಅಥವ ವಿಷ್ಣುವಿನ ಭಕ್ತರಾಗಿ ಭೂಮಿಯ ಮೇಲೆ ಏಳು ಜನಿಸುವುದು. ಈ ಎರಡೂ ಆಯ್ಕೆಗಳಲ್ಲಿ ಒಂದು ಪೂರ್ಣಗೊಂಡ ನಂತರ, ಶಾಪದಿಂದ ಮುಕ್ತಿ ಪಡೆದು ಶಾಶ್ವತವಾಗಿ ವೈಕುಂಠದ ದ್ವಾರಪಾಲಕರಾಗಿ ಬರುವುದಾಗಿ ತಿಳಿಸಿದರು.

ಜಯ ವಿಜಯರು ವಿಷ್ಣುವಿನಿಂದ ದೂರವಿರಲು ಏಳು ಜನ್ಮದ ಕಾಲಾವಧಿಯನ್ನು ಬಯಸದೆ, ಶೀಘ್ರವಾಗಿ ವೈಕುಂಠಕ್ಕೆ ಹಿಂದಿರುಗಳು ಮೂರು ಬಾರಿ ವಿಷ್ಣುವಿನ ಶತ್ರುಗಳಾಗಿ ಜನ್ಮ ಪಡೆಯುವ ತೀರ್ಮಾನ ತೆಗೆದುಕೊಂಡರು. ಇದರ ಪ್ರಕಾರವಾಗಿ ಮೊದಲನೆ ಬಾರಿ ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರ ಜನ್ಮ ಪಡೆದರು, ಕ್ರಮವಾಗಿ ನರಸಿಂಹ ಮತ್ತು ವರಾಹ ಅವತಾರದಿಂದ ಕೊಲ್ಲಲ್ಪಟ್ಟರು. ಹೀಗೆ ಶ್ರೀ ಮಹಾ ವಿಷ್ಣು ಹಂದಿ ರೂಪವನ್ನು ಧರಿಸುತ್ತಾನೆ.

ವರಹಾ ಅವತಾರವೆತ್ತ ಸ್ವಾಮಿಯು ತನ್ನ ಬಲವಾದ ದಂತಗಳಿಂದ ಭೂಮಿಯನ್ನು ಎತ್ತುತ್ತಾನೆ. ಇದರಿಂದ ಭೂದೇವಿಯು ವರಹ ಸ್ವಾಮಿಯ ಮೇಲೆ ಪ್ರೀತಿಗೆ ಬೀಳುತ್ತಾಳೆ. ತದನಂತರ ವಿವಾಹವಾಗುತ್ತಾರೆ. ಒಂದು ಪುರಾಣದ ಪ್ರಕಾರ ವರ್ಷಕ್ಕೆ 360 ಹೆಣ್ಣು ಮಕ್ಕಳನ್ನು ದಿನಕ್ಕೆ ಒಂದು ಬಾರಿ ವಿವಾಹವಾದನು ಎಂದು ನಂಬಲಾಗಿದೆ. ಹಾಗಾಗಿಯೇ ಇತನನ್ನು ಪ್ರತಿದಿನ ವಿವಾಹವಾದ ಸ್ವಾಮಿ ಎಂದು ಕರೆಯುತ್ತಾರೆ.

ವಂಶಪಾರಂಪರ್ಯ ಸಂಪ್ರದಾಯ: ಈ ದೇವಾಲಯವು ಸುಮಾರು 1000 ವರ್ಷಗಳಿಂದ 2000 ವರ್ಷಕ್ಕಿಂತ ಹಳೆಯದಾಗಿದ್ದು. ಈ ದೇವಾಲಯಕ್ಕೆ ಚೆನ್ನೈ-ಮಹಾಬಲೀಪುರಂನಲ್ಲಿ ಅತಿ ಹೆಚ್ಚು ಸಂದರ್ಶಿತ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು ಇಲ್ಲಿ ಸನಾತನ ಕಾಲದಿಂದ ವೈಕಾಸನ ಅಗಮಿಕ್ ಸಂಪ್ರದಾಯವನ್ನು ಆಧರಿಸಿದ ತೆಂಕಲೈ ಸಂಪ್ರದಾಯವನ್ನು ಅನುಸರಿಸುತ್ತಾ ಬರುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಮಿಳುನಾಡಿನ ಹಿಂದೂ ಧಾರ್ಮಿಕ ಮತ್ತು ದತ್ತಿ ಮಂಡಳಿ ಈ ದೇವಾಲಯವನ್ನು ನಿರ್ವಹಣೆ ಮಾಡುತ್ತಿದೆ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!