WhatsApp Group Join Now
Telegram Group Join Now

ನವರಾತ್ರಿಯ ಶುಭದಿನ ಈಗಾಗಲೇ ಆರಂಭವಾಗಿದ್ದು ದೇವಿಯ ಪೂಜೆ ಈಗಾಗಲೇ ವಿಧವಿಧವಾಗಿ ಶಾಸ್ತ್ರೋಕ್ತವಾಗಿ ನಡೆಯುತ್ತಿದೆ. ನಮ್ಮ ದೇಶ ಸನಾತನ ಹಿಂದೂ ಸಂಸ್ಕೃತಿಯನ್ನು ಪಾಲಿಸುವ ದೇಶ. ಹೀಗಾಗಿ ನಮ್ಮಲ್ಲಿ ಧಾರ್ಮಿಕ ಆಚರಣೆಗಳು ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಅವುಗಳಲ್ಲಿ ನವರಾತ್ರಿಯ ಹತ್ತನೇ ದಿನವಾಗಿರುವ ವಿಜಯದಶಮಿ ಕೂಡ ಅತ್ಯಂತ ಪ್ರಮುಖ ದಿನಗಳಲ್ಲಿ ಒಂದಾಗಿರುತ್ತದೆ.

ಇದೇ ವಿಜಯದಶಮಿಯ ಶುಭ ದಿನದಂದು ಅಂದರೆ ಅಕ್ಟೋಬರ್ ಐದರಂದು ಲಕ್ಷ್ಮೀದೇವಿಯ ಕೃಪಾಕಟಾಕ್ಷದಿಂದ ಈ ಎರಡು ರಾಶಿಯವರು ಯಾವುದೇ ಸಮಸ್ಯೆಗಳಿದ್ದರೂ ಕೂಡ ಅದರಿಂದ ಹೊರಬಂದು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಿ ಕೋಟ್ಯಾಧೀಶರು ಆಗುವ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ. ಹಾಗಿದ್ದರೆ ಅಷ್ಟಕ್ಕೂ ಅಕ್ಟೋಬರ್ 5ರಂದು ಅಂದರೆ ವಿಜಯದಶಮಿಯ ಪವಿತ್ರ ದಿನದಂದು ಲಕ್ಷ್ಮೀದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಲಿರುವ ಆ ಎರಡು ರಾಶಿಯವರು ಯಾರೆಲ್ಲ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.

ಸಿಂಹ ರಾಶಿ; ಲಕ್ಷ್ಮೀದೇವಿ ಆಶೀರ್ವಾದ ಇರುವ ಕಾರಣದಿಂದಾಗಿ ಇವರು ಸಾಕಷ್ಟು ಆರ್ಥಿಕ ಲಾಭವನ್ನು ಸಂಪಾದಿಸುತ್ತಾರೆ ಹಾಗೂ ಯಾವುದೇ ಕೆಲಸದಲ್ಲಿ ಕೂಡ ಇವರಿಗೆ ಯಾರ ಸಲಹೆಯ ಅಗತ್ಯವೂ ಕೂಡ ಇರುವುದಿಲ್ಲ. ಈ ರಾಶಿಯವರು ಯಾವುದೇ ಕೆಲಸವನ್ನು ಮಾಡಿದರೂ ಕೂಡ ಅದರಲ್ಲಿ ಇವರಿಗೆ ಗೆಲುವು ಕಟ್ಟಿಟ್ಟ ಬುತ್ತಿಯಾಗಿದೆ. ಇವರ ಎಲ್ಲಾ ದೋಷಗಳು ಕಡಿಮೆಯಾಗಲಿದ್ದು ಇವರು ಮಾಡುವ ಎಲ್ಲಾ ಕೆಲಸದಲ್ಲಿ ಇವರಿಗೆ ಯಶಸ್ಸು ಪ್ರಾಪ್ತಿಯಾಗಲಿದೆ. ಇವರ ಅದೃಷ್ಟ ದ್ವಿಗುಣವಾಗಲಿದ್ದು ವಿಜಯಲಕ್ಷ್ಮಿ ದಿನದಂದು ಇವರು ಮಾಡುವ ಕೆಲಸಗಳಿಂದ ಇವರಿಗೆ ಸಮಾಜದಲ್ಲಿ ಗೌರವ ಹಾಗೂ ಪ್ರತಿಷ್ಠೆ ಹೆಚ್ಚಾಗಲಿದೆ.

ಮೇಷ ರಾಶಿ; ಹೊಸ ವ್ಯಾಪಾರ ವ್ಯವಹಾರಗಳನ್ನು ಆರಂಭಿಸಲು ವಿಜಯದಶಮಿ ದಿನ ಶುಭದಿನ ವಾಗಿರಲಿದೆ. ಲಕ್ಷ್ಮಿ ದೇವಿಯ ಅನುಗ್ರಹ ಇರುವವರೆಗೂ ಕೂಡ ನಿಮ್ಮನ್ನು ಮೋಸ ಮಾಡಲು ಯಾರಿಂದಲೂ ಕೂಡ ಸಾಧ್ಯವಿಲ್ಲ. ನಿಮಗೆ ತೊಂದರೆ ಕೊಡುವವರನ್ನು ಯಾವತ್ತೂ ಕೂಡ ನಿಮ್ಮ ಹತ್ತಿರವೂ ಕೂಡ ಬಿಟ್ಟುಕೊಳ್ಳಬೇಡಿ ಕಣ್ಣು ಮುಚ್ಚಿ ಲಕ್ಷ್ಮಿಯನ್ನು ನೆನೆದರೆ ಸಾಕು ನಿಮ್ಮ ಕಷ್ಟಗಳೆಲ್ಲ ಪರಿಹಾರ ಆಗುತ್ತದೆ.

ದೂರ ಪ್ರಯಾಣದಲ್ಲಿ ಕೊಂಚಮಟ್ಟಿಗೆ ಜಾಗ್ರತೆ ವಹಿಸಿ. ಕೆಲಸಕ್ಕಾಗಿ ಕಾಯುತ್ತಿರುವವರಿಗೆ ಲಕ್ಷ್ಮೀದೇವಿಯ ಅನುಗ್ರಹದಿಂದ ಒಳ್ಳೆಯ ಕೆಲಸ ಸಿಗಲಿದ್ದು ಲಕ್ಷ್ಮಿ ದೇವಿಯ ಪೂಜೆ ಮಾಡುವುದನ್ನು ಮಾತ್ರ ಬಿಡಬೇಡಿ. ಖಂಡಿತವಾಗಿ ನೀವು ಜೀವನದಲ್ಲಿ ಒಂದು ಸಾಧನೆಯನ್ನು ಮಾಡಿಯೇ ಮಾಡುತ್ತೀರಾ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: