ಜೀವನವೆ ಬದಲಿಸುವ ಹರಳುಗಳು ಯಾವ ರಾಶಿಯವರು ಯಾವ ಉಂಗುರ ಧರಿಸುವುದರಿಂದ ಆಗುವ ಅನುಕೂಲಗಳು!

0

ಯಾವ ರಾಶಿಯವರು ಯಾವ ಹರುಳನ್ನು ಧರಿಸಬೇಕು, ಹುರುಳನ್ನು ಧರಿಸುವುದರಿಂದ ಆಗುವ ಅನುಕೂಲಗಳ ಬಗ್ಗೆ ತಿಳಿಯೋಣ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿ ತಾನು ಜನಿಸಿದ ಸಮಯದಲ್ಲಿ ಇರುವ ‌ಗ್ರಹಗಳ ಸ್ಥಾನ ಹಾಗೂ ಚಲನೆಗೆ ಅನುಗುಣವಾಗಿ ಭಿನ್ನವಾದ ಜನ್ಮನಕ್ಷತ್ರ ಹಾಗೂ ರಾಶಿಚಕ್ರವನ್ನು ಹೊಂದಿರುತ್ತಾರೆ. ಅವುಗಳಿಗೆ ಅನುಗುಣವಾಗಿ ಜನ್ಮ ಕುಂಡಲಿಯನ್ನು ರಚಿಸಲಾಗುವುದು. ಕುಂಡಲಿಯಲ್ಲಿ ಇರುವ ಗ್ರಹಗಳ ಸ್ಥಾನ ಹಾಗೂ ನಮ್ಮ ರಾಶಿಯನ್ನು ಆಳುವ ಗ್ರಹಗಳಿಗೆ ಸಂಬಂಧಿಸಿದಂತೆ ನಮ್ಮ ನಿತ್ಯದ ಬದುಕು ನಿರ್ಧಾರವಾಗುತ್ತದೆ. ಅದೃಷ್ಟಗಳು ಹಾಗೂ ದುರದೃಷ್ಟಗಳು ಸಹ ಅವುಗಳ ಪ್ರಭಾವದಿಂದಲೇ ಬದಲಾಗುವುದು ಎಂದು ಹೇಳಲಾಗುವುದು.

ಹಾಗಾಗಿ ನಮ್ಮ ಮೇಲೆ ಪ್ರಭಾವ ಬೀರುವ ‌ನವಗ್ರಹಗಳಿಗೆ ಸಂಬಂಧಿಸಿದ ಹರಳುಗಳನ್ನು ಧರಿಸಿದರೆ ಉತ್ತಮ ಫಲಗಳು ಹೆಚ್ಚು ಲಭಿಸುವುದು. ಕಷ್ಟಗಳು ಹಾಗೂ ಆಗಾಗ ಕಾಡುವ ಅಡೆತಡೆಗಳೆಲ್ಲವೂ ಕಡಿಮೆಯಾಗುವವು ಎಂದು ಹೇಳಲಾಗುತ್ತದೆ. ನಿಮ್ಮ ರಾಶಿಗಳಿಗೆ ಅನುಗುಣವಾಗಿ ಯಾವ ಹರಳನ್ನು ಧರಿಸಬೇಕು? ಅದರಿಂದ ಯಾವ ಉತ್ತಮ ಪ್ರಭಾವ ಬೀರುತ್ತದೆ ಎಂದು ತಿಳಿಯೋಣ. ಮೇಷ ರಾಶಿಯವರ ಅದೃಷ್ಟದ ರತ್ನ ಎಂದರೆ ಹವಳ. ಹವಳವನ್ನು ಚಿನ್ನದ ಉಂಗುರದಲ್ಲಿ ಸೇರಿಸಿ, ಮಂಗಳವಾರದಂದು ಧರಿಸಬೇಕು. ಧರಿಸುವಾಗ ” ಓಂ ಭೌಮ್ ಭೌಮಾಯ” ಎನ್ನುವ ಮಂತ್ರವನ್ನು ಹೇಳುತ್ತಾ ಧರಿಸಬೇಕು.ಹವಳವನ್ನು ಧರಿಸುವುದರಿಂದ ದೈಹಿಕವಾಗಿ ಉತ್ತಮ ಆರೋಗ್ಯ ಲಭಿಸುವುದು. ರಕ್ತವು‌ ಶುದ್ಧೀಕರಣವಾಗುವುದು. ಮಹಿಳೆಯರಿಗೆ ಸೂಕ್ತ ಸಮಯದಲ್ಲಿ ವಿವಾಹವಾಗುವುದು. ನಕಾರಾತ್ಮಕ ಸೆಳೆತದಿಂದ ದೂರಾಗಿಸುವುದು.

ವೃಷಭ:ಇವರಿಗೆ ಹೊಂದುವ ‌ರತ್ನವೆಂದರೆ ವಜ್ರ ಮತ್ತು ನೀಲಮಣಿ.ಶುಕ್ಲಪಕ್ಷದ ಶುಕ್ರವಾರದಂದು ಈ ಮಣಿ ಧರಿಸಬೇಕು. ಧರಿಸುವಾಗ ” ಓಂ ಶುಮ್ ಶುಕ್ರಾಯ ನಮ: ಎನ್ನುವ ಮಂತ್ರವನ್ನು ಜಪಿಸಬೇಕು. ವಜ್ರವನ್ನು ಧರಿಸುವುದರಿಂದ ವ್ಯಕ್ತಿ ಆರೋಗ್ಯವಂತ, ಧೈರ್ಯಶಾಲಿ , ಮತ್ತು ಬುದ್ದಿವಂತನಾಗುವನು. ಅಪ್ರಾಪ್ತ ವಯಸ್ಸಿನಲ್ಲಿ ‌ಮದುವೆಯಾಗುವುದು , ಹಾಗೂ ಬೆಂಕಿಯ ಅಪಾಯಗಳಿಂದ ರಕ್ಷಣೆ ದೊರೆಯುವುದು. ಮಹಿಳೆಯರಲ್ಲಿ ಗರ್ಭಾಶಯದ ಸಮಸ್ಯೆ ದೂರಾಗುವುದು.
ಪುರುಷರಲ್ಲಿ ಲೈಂಗಿಕ ಸಮಸ್ಯೆ ದೂರಾಗುವುದು.

ಮಿಥುನ: ಈ ರಾಶಿಯವರಿಗೆ ಪನ್ನಾ ಅಥವಾ ಪಚ್ಚೆಯ ಹರಳು ಶುಭವಾಗಿರುತ್ತದೆಇದನ್ನು ಬುಧವಾರ ದಂದು ” ಓಂ ಬುಂ ಬುಧಾಯ ನಮ: “ಎನ್ನುವ ಮಂತ್ರವನ್ನು ಹೇಳುತ್ತಾ ಧರಿಸಬೇಕು. ಈ ಹರಳನ್ನು ಧರಿಸುವುದರಿಂದ ಬಡತನ ನಿವಾರಣೆಯಾಗುತ್ತದೆ. ವಿದ್ಯಾರ್ಥಿಗಳಿಗೆ ಯಶಸ್ಸು ದೊರೆಯುತ್ತದೆ. ಶೀತ ಸಂಬಂಧಿ ರೋಗಗಳಾದ ಗಂಟಲು ನೋವು, ಶೀತ, ಕೆಮ್ಮು ಇನ್ನಿತರ ಆರೋಗ್ಯ ಸಮಸ್ಯೆಗಳು ದೂರಾಗುವುದು. ಮಾನಸಿಕ ಆರೋಗ್ಯ ಹೆಚ್ಚುವುದು ಮತ್ತು ಒತ್ತಡ ನಿವಾರಣೆಯಾಗುತ್ತದೆ.ಕರ್ಕಾಟಕ: ಈ ರಾಶಿಯವರ ಅದೃಷ್ಟದ ಹರಳೆಂದರೆ ಮುತ್ತು / ಮೋತಿ ಇದನ್ನು ಸೋಮವಾರ ಬೆಳಿಗ್ಗೆ ಚಂದ್ರನ ಮಂತ್ರವಾದ ” ಓಂ ಸೋಂ ಸೋಮಾಯ ನಮ: “ಎನ್ನುವ ಮಂತ್ರವನ್ನು ಹೇಳುತ್ತಾ ಧರಿಸಬೇಕು.ಮುತ್ತನ್ನು ಧರಿಸುವುದರಿಂದ ನೆನಪಿನ ಶಕ್ತಿ ಹೆಚ್ಚುವುದು, ಕೋಪವನ್ನು ನಿಯಂತ್ರಿಸುತ್ತದೆ. ನಿದ್ರಾಹೀನತೆ , ಹಲ್ಲಿನ ತೊಂದರೆ, ಮೂತ್ರಪಿಂಡ ಸಂಬಂಧಿಸಿದ ಕಾಯಿಲೆ ಇರುವವರಿಗೆ ಪರಿಹಾರ ದೊರೆಯುತ್ತದೆ.ಸೂಕ್ತ ‌ಸಮಯದಲ್ಲಿ‌ ವಿವಾಹವಾಗುವುದು.

ಸಿಂಹರಾಶಿ: ಈ ರಾಶಿಯವರಿಗೆ ಮಾಣಿಕ್ಯ (ರೂಬಿ) ಅನುಕೂಲಕರವಾದ ಹರಳು . ಇದನ್ನು ಬುಧವಾರ ಬೆಳಿಗ್ಗೆ ” ಓಂ ಗೃಣಿ ಸೂರ್ಯಾಯ ನಮಃ ” ಎನ್ನುವ ಮಂತ್ರವನ್ನು ಹೇಳುತ್ತಾ ಧರಿಸಬೇಕು. ಮಾಣಿಕ್ಯವನ್ನು ಧರಿಸುವುದರಿಂದ ಭಯ , ದುಃಖಗಳು ದೂರವಾಗುವವು.ಉದ್ಯೋಗ ‌ಕ್ಷೇತ್ರಲ್ಲಿ ಉನ್ನತ ಸ್ಥಾನಗಳು ದೊರೆಯುತ್ತದೆ. ಮೂಳೆಗೆ ಸಂಬಂಧಿಸಿದ ಕಾಯಿಲೆಗಳು ಗುಣವಾಗುವವು. ಕನ್ಯಾ ರಾಶಿಯವರಿಗೆ ಅನುಕೂಲಕರವಾದ ಹರಳು‌ ಪನ್ನ/ ಪಚ್ಚೆ ಇದನ್ನು ‌ಕನ್ಯಾ ರಾಶಿಯವರು ಬುಧವಾರ ” ಓಂ ಬುಂ ಬುಧಾಯ ನಮಃ ” ಎನ್ನುವ ಮಂತ್ರವನ್ನು ಹೇಳುತ್ತಾ ಧರಿಸಬೇಕು. ಪಚ್ಚೆ ಹರಳನ್ನು ಧರಿಸುವುದರಿಂದ ಬಡತನ ನಿವಾರಣೆಯಾಗುತ್ತದೆ.ಯಶಸ್ವಿ ಜೀವನ ನಡೆಸಬಹುದು. ಕೆಮ್ಮು ಮತ್ತು ಗಂಟಲಿನ ಸಮಸ್ಯೆ ದೂರಾಗುವುದು.ಮಾನಸಿಕ ಚಿಂತೆಗಳು ಪರಿಹಾರವಾಗುವವು.ಕಾರ್ಯ ಕ್ಷೇತ್ರದಲ್ಲಿ ಜಯವಾಗುವುದು.

ತುಲಾರಾಶಿ: ಈ ರಾಶಿಯವರಿಗೆ ಅದೃಷ್ಟದ ಹರಳು ವಜ್ರ. ಶುಕ್ಲಪಕ್ಷದ ಶುಕ್ರವಾರದಂದು ವಜ್ರವನ್ನು ಧರಿಸಬೇಕು. ಈ ವಜ್ರವನ್ನು ಧರಿಸುವಾಗ ” ಓಂ ಶುಂ ಶುಕ್ರಾಯ ನಮಃ ” ಎಂದು ಜಪಿಸಬೇಕು. ವಜ್ರ ಧರಿಸುವುದರಿಂದ ಆರೋಗ್ಯ ಸುಧಾರಣೆಯಾಗುವುದು. ಧೈರ್ಯ ಮತ್ತು ಬುದ್ಧಿವಂತಿಕೆ ಹೆಚ್ಚುವುದು. ಬೆಂಕಿಯ ಅಪಾಯಗಳಿಂದ ರಕ್ಷಣೆ ನೀಡುತ್ತದೆ. ಸಂತಾನ ಸಮಸ್ಯೆ ದೂರಾಗುವುದು.ಧನು ರಾಶಿ: ಧನು ರಾಶಿಯವರ ಅದೃಷ್ಟದ ‌ಹರಳು ಪುಖರಾಜ್( ಟೋಪಾಜ್). ಇದನ್ನು ಶುಕ್ಲಪಕ್ಷದ ಗುರುವಾರದಂದು ಬೆಳಿಗ್ಗೆ ” ಓಂ ಬ್ರಂ ಬ್ರಹಸ್ಪತೆಯೇ ನಮಃ ” ಎನ್ನುವ ಮಂತ್ರವನ್ನು ಜಪಿಸುತ್ತಾ ಧರಿಸಬೇಕು.ಪುಖರಾಜ ಹರಳನ್ನು ಧರಿಸುವುದರಿಂದ ಬುದ್ಧಿ ಮತ್ತು ಜ್ಞಾನ ಹೆಚ್ಚಾಗಿ ಸಮಾಜದಲ್ಲಿ ಗೌರವ ಲಭಿಸುವುದು. ಯಾವುದೇ ಪಾಪ ಕರ್ಮಗಳನ್ನು ಮಾಡದಂತೆ ತಡೆದು, ಪುಣ್ಯ ಕಾರ್ಯಗಳಿಗೆ ‌ಪ್ರೇರೇಪಿಸುವುದು.

ಮಕರ ರಾಶಿ: ಈ ರಾಶಿಯವರ ಅದೃಷ್ಟದ ‌ಹರಳು ನೀಲಿ ಹರಳು .ಇದನ್ನು ಶನಿವಾರ ಬೆಳಗ್ಗೆ ” ಓಂ ಶಂ ಶನೈಶ್ಚರಾಯ ನಮಃ ” ಎನ್ನುವ ಮಂತ್ರವನ್ನು ಪಠಿಸುತ್ತಾ ಧರಿಸಬೇಕು.ನೀಲಿಮಣಿ ಧರಿಸುವುದರಿಂದ ಸಂಪತ್ತು, ಸಂತೋಷ ಹಾಗೂ ಸಕಾರಾತ್ಮಕ ಭಾವನೆಗಳು ದೊರೆಯುತ್ತದೆ. ಗಾಳಿಯಿಂದ ಬರುವ ರೋಗ, ಪಾಶ್ರ್ವವಾಯು, ಸಂಧಿವಾತಗಳಂತಹ ಸಮಸ್ಯೆಗಳು ನಿಯಂತ್ರಣದಲ್ಲಿ ಇರುವವು. ಕುಂಭರಾಶಿ: ಕುಂಭರಾಶಿಯವರಿಗೂ ಅದೃಷ್ಟದ ಹರಳ ನೀಲಮಣಿ. ಕುಂಭರಾಶಿಯವರು ಈ ಹರಳನ್ನು ಶನಿವಾರ ಬೆಳಗ್ಗೆ ” ಓಂ ಶನೈಶ್ಚರಾಯ ನಮಃ ” ಎನ್ನುವ ಮಂತ್ರವನ್ನು ಹೇಳುತ್ತಾ ಧರಿಸಬೇಕು. ಇದನ್ನು ಧರಿಸುವುದರಿಂದ ಸುಖ ಸಂಪತ್ತು ಪ್ರಾಪ್ತಿಯಾಗುತ್ತದೆ. ಸಮಾಜದಲ್ಲಿ ಖ್ಯಾತಿ ಉಂಟಾಗುತ್ತದೆ .ಸಾಂಕ್ರಾಮಿಕ ರೋಗದಿಂದ ದೂರ ಉಳಿಸುತ್ತದೆ. ಸಂಧಿವಾತ ಗುಣವಾಗುತ್ತದೆ.

Leave A Reply

Your email address will not be published.

error: Content is protected !!