WhatsApp Group Join Now
Telegram Group Join Now

ಶನಿವಾರ ಭಗವಾನ್ ಶನಿಯನ್ನು ಮಾತ್ರವಲ್ಲ ಹನುಮಂತನನ್ನು ಕೂಡ ಪೂಜೆಸಲಾಗುತ್ತದೆ. ಈ ದಿನ, ಈ ಇಬ್ಬರ ದೇವರುಗಳ ಉಪವಾಸವನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮ ಗ್ರಂಥಗಳ ಪ್ರಕಾರ, ಹನುಮಂತನನ್ನು ಪೂಜಿಸುವುದರಿಂದ ಭಕ್ತನು ಹನುಮಂತನ ಆಶೀರ್ವಾದವನ್ನು ಪಡೆದುಕೊಳ್ಳುತ್ತಾನೆ.ಶನಿವಾರದಂದು ವಿಧಿ ವಿಧಾನಗಳ ಮೂಲಕ ಹನುಮಾನ್ ದೇವರನ್ನು ಪೂಜಿಸುವುದರಿಂದ ಅವನು ಭಕ್ತರ ಗ್ರಹ ದೋಷವನ್ನು ತೆಗೆದು ಹಾಕುತ್ತಾನೆ ಎನ್ನುವ ನಂಬಿಕೆಯಿದೆ. ಈ ದಿನ ಹನುಮಂತನನ್ನು  ಪೂಜಿಸುವುದರೊಂದಿಗೆ ಹನುಮಾನ್ ಚಾಲೀಸಾವನ್ನು ಕೂಡ ಪಠಿಸಬೇಕು ಮತ್ತು ಹನುಮಾನ್ ಆರತಿಯನ್ನು ಪಠಿಸಬೇಕು.ಇದು ಆರಾಧಕನ ಎಲ್ಲಾ ನೋವುಗಳನ್ನು ತೆಗೆದು ಹಾಕುತ್ತದೆ.

ಅತೃಪ್ತ ವ್ಯಕ್ತಿಯು ಪ್ರತಿ ಶನಿವಾರ ತಪ್ಪದೆ ಹನುಮಂತನನ್ನು ಪೂಜಿಸಬೇಕು, ಇದನ್ನು ಮಾಡುವುದರಿಂದ, ಅವರ ಎಲ್ಲಾ ದುಃಖಗಳನ್ನು ತೆಗೆದು ಹಾಕಲಾಗುತ್ತದೆ ಎಂದು ನಂಬಲಾಗಿದೆ. ಅವರ ಸಂಕಟಗಳು ನಾಶವಾಗುವುದು. ಭಜರಂಗ್ ಬಲಿಯನ್ನು ಪೂಜಿಸುವ ಜನರು. ಭಜರಂಗ್ ಬಲಿಯ ಆಶೀರ್ವಾದದ ಜೊತೆಗೆ ಶನಿ ದೇವನ ಆಶೀರ್ವಾದವನ್ನು ಕೂಡ ಪಡೆದುಕೊಳ್ಳಬಹುದು. ಇದು ಅವನ ಜೀವನದ ಎಲ್ಲಾ ಅವ್ಯವಸ್ಥೆಗಳನ್ನು ಕೊನೆಗೂಳಿಸುತ್ತದೆ. ಕುಟುಂಬದಲ್ಲಿ ಶಾಂತಿ ನೆಲೆಯಾಗುತ್ತದೆ. ಇದು ಕುಟುಂಬದ ಬೆಳೆವಣಿಗೆಗೆ ಕಾರಣವಾಗುತ್ತದೆ.ಹನುಮಂತನ ಅನುಗ್ರಹದಿಂದ ಸಾಡೇಸತಿ ಶನಿದೋಷ ಮತ್ತು ಶನಿ ಮಹಾದಶಾದ ಪರಿಣಾಮವೂ ದುರ್ಬಲತೆಗೊಳ್ಳುತ್ತದೆ ಎನ್ನುವ ನಂಬಿಕೆ ಇದೆ.

ಹನುಮಾನ್ ದೇವರನ್ನು ವಿಷ್ಣು ಮತ್ತು ಶಿವನ ಸಾಕಾರವೆಂದು ಪರಿಗಣಿಸಲಾಗುತ್ತದೆ. ಹನುಮಂತನಿಗೆ ಪೂಜೆ ಹಾಗೂ ಮಂತ್ರವನ್ನು ಸಲ್ಲಿಸಿದರೆ ದೇವತೆಗಳಿಗೆ ಸುಲಭವಾಗಿ ತಲುಪುತ್ತದೆ. ಯಾರು ಹನುಮಂತನ ಮಂತ್ರ ಜಪಿಸುತ್ತಾರೋ ಅಂತವರಿಗೆ ಕೆಟ್ಟ ಆತ್ಮಗಳು, ದೆವ್ವ ಹಾಗೂ ಯಾವುದೇ ದುಷ್ಟ ಶಕ್ತಿಯ ಕಾಟ ಇರುವುದಿಲ್ಲ, ಶಕ್ತಿಯುತ ಹಾಗೂ ಧನಾತ್ಮಕ ಶಕ್ತಿಯಿಂದ ಅವೃತವಾದ ಮಂತ್ರಗಳು ವ್ಯಕ್ತಿಗೆ ಅನಿಯಮಿತವಾದ ಶಕ್ತಿ ಹಾಗೂ ಪ್ರಾಣವನ್ನು ನೀಡುತ್ತದೆ

ಓಂ ಹನುಮತೇ ನಮಃ =ಈ ಮಂತ್ರವನ್ನು ನಿತ್ಯವೂ ಜಪಿಸಿದರೆ ದೈಹಿಕ ಶಕ್ತಿ, ತ್ರಾಣ ಮತ್ತು ಶಕ್ತಿಯನ್ನು ಪಡೆದುಕೊಳ್ಳಬಹದು. ಜೀವನದಲ್ಲಿ ನೀವು ಬಯಸಿದ ಸಂಗಾತಿಯನ್ನು ಪಡೆದುಕೊಳ್ಳಲು ಸದಾ ಈ ಮಂತ್ರವನ್ನು ಪಠಿಸಿ.

“ಓಂ ಪವನ ನಂದನಾಯ” “ಹಂಗ್ ಹನುಮಂತೆ ರುದ್ರತ್ಮಕಾಯ ಹಂಗ್ ಪಟ್ “
“ಓಂ ನಮೋ ಭಗವತ ಆಂಜನೇಯ ಮಹಾ ಬಲಾಯ ಸ್ವಾಹಾ “

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: