WhatsApp Group Join Now
Telegram Group Join Now

12 ರಾಶಿಗಳಲ್ಲಿ ಪ್ರತಿಯೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ವ್ಯಕ್ತಿತ್ವ ಗುಣ ಸ್ವಭಾವ, ಭವಿಷ್ಯ ಹೊಂದಿರುತ್ತಾರೆ. ದ್ವಾದಶ ರಾಶಿಗಳಲ್ಲಿ ವೃಶ್ಚಿಕ ರಾಶಿಯು ಒಂದು ಪ್ರಮುಖ ರಾಶಿಯಾಗಿದೆ ಈ ರಾಶಿಯಲ್ಲಿ ಜನಿಸಿದವರ ವ್ಯಕ್ತಿತ್ವದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ವೃಶ್ಚಿಕ ರಾಶಿಯವರ ಗುಣದ ಬಗ್ಗೆ ನೋಡಿದರೆ ಇವರು ಸಾಕಷ್ಟು ರಹಸ್ಯವಾಗಿರುತ್ತಾರೆ ವಿಷಯಗಳನ್ನು ಮರೆಮಾಚುವುದು ಅಥವಾ ರಹಸ್ಯವಾಗಿಡುವುದು ಇವರ ಸ್ವಭಾವವಾಗಿದೆ ಆದರೆ ಅವರೊಂದಿಗೆ ಸ್ವಲ್ಪ ಸಮಯ ಕಳೆದಾಗ ಅವರು ನಿಜವಾಗಿಯೂ ಏನು ಎಂಬುದು ತಿಳಿಯುತ್ತದೆ. ವೃಶ್ಚಿಕ ರಾಶಿಯವರು ಮಾತಿನ ಮಲ್ಲರಾಗಿರುತ್ತಾರೆ ಅತಿಯಾಗಿ ಮಾತನಾಡುತ್ತಾರೆ ಇವರು ಒಂದು ನಿರ್ಧಾರ ಮಾಡಿದರೆ ಅದಕ್ಕೆ ಬದ್ಧರಾಗಿರುತ್ತಾರೆ.

ಈ ರಾಶಿಯವರು ಬೇರೆಯವರ ವೈಯಕ್ತಿಕತೆಯನ್ನು ಗೌರವಿಸುತ್ತಾರೆ ಹಾಗೂ ಬೇರೆಯವರಿಂದಲೂ ಅವರು ಅದನ್ನು ನಿರೀಕ್ಷಿಸುತ್ತಾರೆ. ವೃಶ್ಚಿಕ ರಾಶಿ ಜಲತತ್ವ ರಾಶಿಯಾಗಿದ್ದು ಈ ರಾಶಿಯ ಅಧಿಪತಿ ಮಂಗಳನಾಗಿದ್ದಾನೆ ಇವರ ವ್ಯಕ್ತಿತ್ವ ಸುಂದರವಾಗಿರುತ್ತದೆ ಹಠವಾದಿಗಳಾಗಿರುತ್ತಾರೆ ಹಾಗೂ ಸಾಹಸಿಗಳು ಆಗಿರುತ್ತಾರೆ. ಇವರು ತಮಗೆ ಇಷ್ಟ ಬಂದ ದಾರಿಯಲ್ಲಿ ಹೋಗುತ್ತಾರೆ ಯಾರ ಹಸ್ತಕ್ಷೇಪವು ಇವರಿಗೆ ಇಷ್ಟವಾಗುವುದಿಲ್ಲ. ಇವರು ಪರಿಶ್ರಮಿಗಳಾಗಿರುತ್ತಾರೆ ಇವರಿಗೆ ಯಾವ ಕೆಲಸ ಕೊಟ್ಟರು ಸಾಧಿಸುತ್ತಾರೆ. ಇವರು ತಮ್ಮ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸುತ್ತಾರೆ, ಇವರು ಬಲಿಷ್ಠರಾಗಿರುತ್ತಾರೆ. ಇವರಿಗೆ ಅನಾರೋಗ್ಯ ಕಾಡುವುದು ಕಡಿಮೆ ದೃಢ ಮನಸ್ಸಿನವರಾಗಿರುತ್ತಾರೆ.

ವೃಶ್ಚಿಕ ರಾಶಿಯವರು ಯಾರಿಗಾದರೂ ಮಾತು ಕೊಟ್ಟರೆ ಅದನ್ನು ನಡೆಸಿಕೊಡುತ್ತಾರೆ, ಇವರಿಗೆ ಸಣ್ಣ ಸಣ್ಣ ವಿಷಯಕ್ಕೆ ಬೇಗನೆ ಕೋಪ ಬರುತ್ತದೆ. ಇವರಿಗೆ ಸಿಟ್ಟು ಬಂದರೆ ಹಿಂದೆ ಮುಂದೆ ನೋಡದೆ ಸ್ಟ್ರೆಟ್ ಆಗಿ ಮಾತನಾಡುತ್ತಾರೆ ಇದರಿಂದ ಇವರಿಗೂ ತೊಂದರೆಯಾಗುತ್ತದೆ ಹಾಗೂ ಬೇರೆಯವರಿಗೂ ತೊಂದರೆಯಾಗುವ ಸಾಧ್ಯತೆ ಇದೆ. ಯಾರಾದರೂ ಇವರ ವಿರುದ್ಧ ಮಾತನಾಡಿದರೆ ಇವರಿಗೆ ಸಹಿಸಿಕೊಳ್ಳಲು ಆಗುವುದಿಲ್ಲ ಮುಂದೆ ಆಗುವ ಪರಿಣಾಮದ ಬಗ್ಗೆ ಯೋಚಿಸದೆ ವಾದಿಸುತ್ತಾರೆ. ವೃಶ್ಚಿಕ ರಾಶಿಯವರನ್ನು ನೋಡಿದಾಗ ಹೊರಗಿನಿಂದ ಕಠೋರವಾಗಿ ಕಾಣಿಸುತ್ತಾರೆ ಆದರೆ ಮನಸ್ಸು ಬಹಳ ಮೃದುವಾಗಿರುತ್ತದೆ ಇವರು ಎಮೋಷನಲ್ ಆಗಿರುವುದು ಹೆಚ್ಚು ಇವರು ತಮ್ಮ ಭಾವನೆಯನ್ನು ಯಾರೊಂದಿಗೂ ಹೇಳಿಕೊಳ್ಳದೆ ಬಚ್ಚಿಟ್ಟುಕೊಳ್ಳುತ್ತಾರೆ. ಇವರಿಗೆ ಅವರ ತಾಯಿಯ ಜೊತೆ ಅಟ್ಯಾಚ್ಮೆಂಟ್ ಜಾಸ್ತಿ ಇರುತ್ತದೆ.

ವೃಶ್ಚಿಕ ರಾಶಿಯವರು ಜನರೊಂದಿಗೆ ಬೇಗ ಬೆರೆಯುತ್ತಾರೆ ಇವರ ನೆನಪಿನ ಶಕ್ತಿ ಉತ್ತಮವಾಗಿದ್ದು ಇವರು ಯಾವುದನ್ನು ಮರೆಯುವುದಿಲ್ಲ ಇವರಿಗೆ ಯಾರಾದರೂ ಮೋಸ ಮಾಡಿದರೆ ಶತ್ರುತ್ವ ಬೆಳೆಸಿಕೊಂಡರೆ ಇವರು ಸೇಡು ತೀರಿಸಿಕೊಳ್ಳದೆ ಬಿಡುವುದಿಲ್ಲ. ಇವರು ಆಧ್ಯಾತ್ಮಿಕತೆಯಲ್ಲಿ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಇವರು ತಮ್ಮನ್ನು ತಮ್ಮ ಕುಟುಂಬ ಹಾಗೂ ಸ್ನೇಹಿತರಿಗೆ ಸಮರ್ಪಣೆ ಮಾಡಿಕೊಂಡಿರುತ್ತಾರೆ. ಇವರು ತಮ್ಮ ಪರಿಶ್ರಮದಿಂದ ಜೀವನದಲ್ಲಿ ಸಫಲರಾಗುತ್ತಾರೆ. ಇವರು ಧನ ಸಂಪತ್ತನ್ನು ಗಳಿಸುವುದರಲ್ಲಿ ಹಾಗೂ ವಸ್ತುಗಳನ್ನು ಸಂಗ್ರಹಿಸುವುದರಲ್ಲಿ ಆಸಕ್ತರಾಗಿರುತ್ತಾರೆ. ಇವರು ಉತ್ತಮ ಸಂಗಾತಿ ಆಗಿರುತ್ತಾರೆ ಹಾಗೂ ಇವರು ಬುದ್ಧಿವಂತ ಹಾಗೂ ಪ್ರಾಮಾಣಿಕ ಸಂಗಾತಿಯನ್ನು ಬಯಸುತ್ತಾರೆ.

ವೃಶ್ಚಿಕ ರಾಶಿಯವರು ತಮ್ಮ ಪ್ರೀತಿ ಪಾತ್ರರ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ ಹಾಗೂ ಇವರಿಗೆ ಪೊಸೆಸಿವ್ ನೆಸ್ ಇರುತ್ತದೆ ಇದರಿಂದ ಎಲ್ಲರ ಮೇಲು ಅನುಮಾನ ಪಡುತ್ತಿರುತ್ತಾರೆ. ಈ ರಾಶಿಯವರು ಎಲ್ಲರನ್ನು ಬೇಗನೆ ನಂಬುವುದಿಲ್ಲ ಇವರಿಗೆ ಮೋಸ ಮಾಡುವುದು ಕಷ್ಟ. ಈ ರಾಶಿಯವರು ರಾಜನೀತಿಯಲ್ಲಿ ನಿಪುಣರಾಗಿರುತ್ತಾರೆ ಇವರು ಯಾರಿಗೂ ಹೆದರುವುದಿಲ್ಲ. ಇವರು ಯಾವುದೆ ವಿಷಯವಾದರೂ ಸರಿ ಆಳಕ್ಕಿಳಿದು ಸತ್ಯವನ್ನು ಹುಡುಕುವ ಪ್ರಯತ್ನ ಮಾಡುತ್ತಾರೆ ಇವರು ಪ್ರಕೃತಿಯನ್ನು ಇಷ್ಟಪಡುತ್ತಾರೆ, ಇವರು ಧೈರ್ಯವಂತರಾಗಿರುತ್ತಾರೆ. ಇವರು ಯೋಚಿಸಿ ಖರ್ಚು ಮಾಡುತ್ತಾರೆ.

ಈ ರಾಶಿಯವರಿಗೆ ಕಷ್ಟ ಬಂದರೆ ಧೈರ್ಯವಾಗಿ ಎದುರಿಸುತ್ತಾರೆ ಇವರು ತಮ್ಮ ಜೀವನದ ಎಲ್ಲಾ ರಹಸ್ಯವನ್ನು ಎಲ್ಲರ ಬಳಿ ಹೇಳಿಕೊಳ್ಳುವುದಿಲ್ಲ ಆದರೆ ಹೇಳಿದರೆ ಎಲ್ಲವನ್ನು ಹೇಳಿಕೊಳ್ಳುತ್ತಾರೆ. ಇವರಿಗೆ ರಾಜನೀತಿ ಮಿಲಿಟರಿ ಪೊಲೀಸ್ ಸಮಾಜ ಸೇವೆ ಡಾಕ್ಟರ್ ಟೀಚರ್ ಇಂತಹ ಕ್ಷೇತ್ರದಲ್ಲಿ ಒಳ್ಳೆಯದಾಗುತ್ತದೆ. ವೃಶ್ಚಿಕ ರಾಶಿಯವರು ನಿರ್ಧಾರ ಮಾಡಿದ ನಂತರ ಅವರ ಮನಸನ್ನು ಚೇಂಜ್ ಮಾಡುವುದು ಕಷ್ಟದ ಕೆಲಸವಾಗಿದೆ. ವೃಶ್ಚಿಕ ರಾಶಿಯವರು ಕೆಲವೊಮ್ಮೆ ಅತಿ ಸೂಕ್ಷ್ಮರಾಗುತ್ತಾರೆ ನಮ್ಮ ಭಾವನೆಗಳನ್ನು ನೋಯಿಸಿದವರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾರೆ. ವೃಶ್ಚಿಕ ರಾಶಿಯವರು ವಿಶ್ವದ ಅತ್ಯಂತ ಬಾವುದ್ವೇಗತೆ ಹಾಗೂ ಬದ್ಧತೆಯ ಜನರಲ್ಲಿ ಸೇರಿದ್ದಾರೆ.

ವೃಶ್ಚಿಕ ರಾಶಿಯೊಂದಿಗೆ ಹೊಂದಾಣಿಕೆ ಆಗುವ ರಾಶಿ ಎಂದರೆ ಕರ್ಕಾಟಕ ವೃಶ್ಚಿಕ ರಾಶಿಯವರ ಭಾವೋದ್ವೇಗತೆಯನ್ನು ಕರ್ಕಾಟಕ ರಾಶಿಯವರು ಅಭಿನಂದಿಸುತ್ತಾರೆ. ಮಕರ ರಾಶಿಯವರು ಹಾಗೂ ಮೀನ ರಾಶಿಯವರು ವೃಶ್ಚಿಕ ರಾಶಿಯವರೊಂದಿಗೆ ಹೊಂದಾಣಿಕೆ ಆಗುತ್ತದೆ. ವೃಶ್ಚಿಕ ರಾಶಿಯವರಿಗೆ ಹೊಂದಾಣಿಕೆಯಾಗದ ರಾಶಿಗಳೆಂದರೆ ತುಲಾ ರಾಶಿ ವೃಶ್ಚಿಕ ರಾಶಿಯವರ ಅಸೂಯೆ ಇಂತಹ ಸ್ವಭಾವವು ತುಲಾ ರಾಶಿಯವರಿಗೆ ಇಷ್ಟವಾಗುವುದಿಲ್ಲ.

ಸಿಂಹ ರಾಶಿ ಹಾಗೂ ವೃಶ್ಚಿಕ ರಾಶಿಯವರಿಗೂ ಹೊಂದಾಣಿಕೆ ಆಗುವುದಿಲ್ಲ, ಮಿಥುನ ರಾಶಿಯವರಿಗೂ ಹೊಂದಾಣಿಕೆ ಆಗುವುದಿಲ್ಲ. ವೃಶ್ಚಿಕ ರಾಶಿಯವರಿಗೆ ಅಸಿಡಿಟಿ ಕತ್ತು ಹಾಗೂ ಕರುಳಿಗೆ ಸಂಬಂಧಿಸಿದ ಖಾಯಿಲೆಗಳು ಜನನಾಂಗಕ್ಕೆ ಸಂಬಂಧಿಸಿದ ಖಾಯಿಲೆಗಳು ಫೈಲ್ಸ್ ಅಲ್ಸರ್ ಅಂತಹ ಖಾಯಿಲೆಗಳು ಬರಬಹುದಾಗಿದೆ. ವೃಶ್ಚಿಕ ರಾಶಿಯವರು ಸಿಟ್ಟನ್ನು ಕಡಿಮೆ ಮಾಡಿಕೊಳ್ಳಬೇಕು, ಈ ರಾಶಿಯವರು ಹೆಚ್ಚು ಖಾರವಾದ ಆಹಾರವನ್ನು ಸೇವಿಸಬಾರದು. ಮಂಗಳವಾರದಂದು ಯಾರಿಗೂ ಸಾಲ ಕೊಡಬಾರದು ಹನುಮಾನ್ ಮಂದಿರದಲ್ಲಿ ಹನುಮಾನ್ ಚಾಲೀಸ ಪಠಿಸಬೇಕು ಓಂ ಮಂಗಳಾಯ ನಮಃ ಈ ಮಂತ್ರವನ್ನು 108 ಬಾರಿ ಪಠಿಸಿದರೆ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: