WhatsApp Group Join Now
Telegram Group Join Now

ಶನಿ ದೇವರ ಬಗ್ಗೆ ಹಲವು ಜನರಲ್ಲಿ ಭಯವಿದೆ. ಎಲ್ಲಾ ಗ್ರಹಗಳಿಗಿಂತ ಶನಿ ಗ್ರಹ ಹೆಚ್ಚು ಶಕ್ತಿಯುತ ಗ್ರಹವಾಗಿದೆ. ಶನಿ ದೇವರ ವಕ್ರ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವೆ ಇಲ್ಲ ಆದರೂ ಕೆಲವು ಕೆಲಸ ಮಾಡಿದರೆ ಶನಿ ದೇವರಿಂದ ತಪ್ಪಿಸಿಕೊಳ್ಳಬಹುದು. ಹಾಗಾದರೆ ಶನಿ ದೇವರಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ಈ ಲೇಖನದಲ್ಲಿ ನೋಡೋಣ

ಶನಿ ದೇವರ ವಕ್ರ ದೃಷ್ಟಿಯಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಶನಿ ದೇವರ ದೃಷ್ಟಿಯಿಂದ ತಪ್ಪಿಸಿಕೊಳ್ಳಬೇಕು ಎಂದಾದರೆ ಏಳು ಕೆಲಸಗಳನ್ನು ಮಾಡಬೇಕು. ಆಂಜನೇಯನ ಆಶೀರ್ವಾದ ಹಾಗೂ ಕೃಪೆ ನಮ್ಮ ಮೇಲೆ ಇದ್ದರೆ ಜೀವನದಲ್ಲಿ ಸಕಲ ಭೋಗ ಭಾಗ್ಯಗಳು ನಮಗೆ ಸಿಗುತ್ತದೆ. ನವಗ್ರಹಗಳಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಇದೆ. ಮನುಷ್ಯನ ಜೀವನದ ಸ್ಥಿತಿ ಗತಿ ಭವಿಷ್ಯ ಆಗು ಹೋಗುಗಳ ಮೇಲೆ ಅವುಗಳ ಪ್ರಭಾವ ಇರುತ್ತದೆ. ಮಗು ಜನಿಸಿದಾಗ ಅವುಗಳ ಸ್ಥಿತಿ ಯಾವ ರೀತಿ ಇರುತ್ತದೆ ಎನ್ನುವುದರ ಮೇಲೆ ಜಾತಕ ಬರೆಯಲಾಗುತ್ತದೆ ಜಾತಕದ ಮೇಲೆ ಅವರ ಭವಿಷ್ಯ ಇರುತ್ತದೆ. ವ್ಯಕ್ತಿಯ ಮೇಲೆ ಪ್ರತಿಯೊಂದು ಗ್ರಹವು ಪರಿಣಾಮ ಬೀರುತ್ತದೆ ಆದರೆ ಶನಿ ಗ್ರಹದ ಪ್ರಭಾವ ಹೆಚ್ಚಾಗಿರುತ್ತದೆ. ಶನಿ ಗ್ರಹವನ್ನು ಕೆಟ್ಟ ಪ್ರಭಾವ ಬೀರುವ ಗ್ರಹ ಅಥವಾ ಪಾಪಿ ಗ್ರಹ ಎನ್ನುತ್ತಾರೆ.

ಶನಿ ದೇವರು ನ್ಯಾಯ ದೇವರು ಮನುಷ್ಯ ಕೆಟ್ಟದ್ದನ್ನು ಮಾಡಿದರೆ ಶನಿ ದೇವರು ಸಾಡೇಸಾತಿ ಸಮಯದಲ್ಲಿ ಕೊಡಬಾರದ ಕಷ್ಟ ಕೊಡುತ್ತಾನೆ. ಒಳ್ಳೆಯದನ್ನು ಮಾಡಿದರೆ ಮೂರು ಪಟ್ಟು ಒಳ್ಳೆಯದನ್ನು ಮಾಡುತ್ತಾರೆ. ಶನಿಯ ಕೆಟ್ಟ ದೃಷ್ಟಿ ಯಾರ ಮೇಲೆ ಬೀಳುತ್ತದೋ ಅವರಿಗೆ ಕಷ್ಟಗಳನ್ನು ಅನುಭವಿಸುವ ಸಮಯ ಬಂತು ಎಂಬರ್ಥ. ಶನಿ ದೇವರಿಂದ ತಪ್ಪಿಸಿಕೊಳ್ಳಬೇಕು ಎಂದಾದರೆ ಜೀವನದಲ್ಲಿ ಒಳ್ಳೆಯದನ್ನು ಮಾಡಿ, ಗೊತ್ತಿದ್ದೊ ಗೊತ್ತಿಲ್ಲದೆಯೊ ತಪ್ಪು ಮಾಡಿದ್ದರೆ ದೇವರಲ್ಲಿ ಕ್ಷಮಾಪಣೆ ಕೇಳಿ. ಶನಿ ದೇವರ ಒಳ್ಳೆಯ ದೃಷ್ಟಿ ಭಿಕಾರಿಯನ್ನು ಶ್ರೀಮಂತನನ್ನಾಗಿ ಮಾಡುತ್ತಾನೆ ಅದೆ ಶನಿ ದೇವರ ಕೆಟ್ಟ ದೃಷ್ಟಿ ರಾಜನನ್ನು ಭಿಕಾರಿಯಾಗಿ ಮಾಡುತ್ತದೆ. ಪ್ರತಿ ಶನಿವಾರ ಸಾಸಿವೆ ಎಣ್ಣೆ ಹಾಗೂ ಕರಿ ಎಳ್ಳನ್ನು ದಾನ ಮಾಡಿದರೆ ಅದರಿಂದ ಶನಿ ದೇವರು ಒಳ್ಳೆಯದನ್ನು ಮಾಡುತ್ತಾನೆ. ಶನಿವಾರದಂದು ಕೆಲವು ವಸ್ತುಗಳನ್ನು ಖರೀದಿ ಮಾಡಬಾರದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುತ್ತಾರೆ. ಒಂದು ವೇಳೆ ಖರೀದಿ ಮಾಡಿದರೆ ಶನಿ ದೇವರ ವಕ್ರ ದೃಷ್ಟಿ ನಮ್ಮ ಮೇಲೆ ಬೀಳುತ್ತದೆ.

ಕರ್ಮದ ಅನುಸಾರ ಶನಿ ದೇವರು ಯಾರಿಗೆ ಏನು ಕೊಡಬೇಕೊ ಅದನ್ನು ಕೊಡುತ್ತಾರೆ. ಶನಿವಾರದಂದು ಮನೆಗೆ ಲೋಹ ಖರೀದಿಸಿ ತರಬಾರದು. ಶನಿವಾರ ಲೋಹವನ್ನು ಮನೆಗೆ ತರುವುದು ಅಶುಭ ಎಂದು ಹೇಳಲಾಗುತ್ತದೆ ಇದರಿಂದ ಶನಿ ದೇವರು ಕೋಪ ಮಾಡಿಕೊಳ್ಳುತ್ತಾರೆ. ಲೋಹ ಶನಿದೇವರ ಪ್ರಿಯವಾದದ್ದು ಅದನ್ನು ಶನಿವಾರ ಮನೆಗೆ ತಂದರೆ ಶನಿಯ ಪ್ರಭಾವ ಬೀಳುತ್ತದೆ. ಶನಿವಾರ ಲೋಹವನ್ನು ದಾನ ಮಾಡಬೇಕು ಇದರಿಂದ ಶನಿ ದೇವರ ಪ್ರೀತಿಗೆ ಪಾತ್ರರಾಗುತ್ತಾರೆ.

ಉಪ್ಪು ಪ್ರತಿಯೊಬ್ಬರ ಮನೆಯಲ್ಲಿ ಬಳಸಲಾಗುತ್ತದೆ ಒಂದಲ್ಲ ಒಂದು ಕಾರಣಕ್ಕೆ ಉಪ್ಪು ಅವಶ್ಯಕ. ಯಾರಿಗಾದರೂ ದೃಷ್ಟಿಯಾದರೆ ಉಪ್ಪಿನಿಂದ ದೃಷ್ಟಿಯನ್ನು ತೆಗೆಯುತ್ತಾರೆ. ಉಪ್ಪನ್ನು ಶನಿವಾರದಂದು ಖರೀದಿ ಮಾಡಿ ತರಬಾರದು. ಶನಿವಾರ ಉಪ್ಪನ್ನು ಖರೀದಿಸಿದರೆ ಮನೆಯಲ್ಲಿ ದಾರಿದ್ರ್ಯ ಉಂಟಾಗುತ್ತದೆ. ಮನೆಯಲ್ಲಿ ಸಾಲದ ಸಮಸ್ಯೆ ಹೆಚ್ಚಾಗುತ್ತದೆ. ರೋಗ ರುಜಿನ ಹೆಚ್ಚಾಗುತ್ತದೆ. ಸಾಡೇಸಾತಿ ನಡೆಯುತ್ತಿರುವವರ ಮನೆಯಲ್ಲಿ ಶನಿವಾರ ಉಪ್ಪನ್ನು ತರಲೆಬಾರದು. ಕತ್ತರಿಯನ್ನು ಶನಿವಾರ ಖರೀದಿ ಮಾಡುವುದು ಒಳ್ಳೆಯದಲ್ಲ.

ಶನಿವಾರ ಕತ್ತರಿಯನ್ನು ಖರೀದಿ ಮಾಡಿದರೆ ಮನೆಯ ಸದಸ್ಯರ ನಡುವೆ ಬಿರುಕು ಮೂಡುತ್ತದೆ, ಪತಿ ಪತ್ನಿಯರ ನಡುವೆ ಬಿರುಕಾಗಿ ಡಿವೋರ್ಸ್ ವರೆಗೆ ಹೋಗುತ್ತದೆ. ಹೆಚ್ಚು ಕಷ್ಟವನ್ನು ಅನುಭವಿಸುವವರು ಒಂದು ಕಡಾಯಿಯಲ್ಲಿ ಸಾಸಿವೆ ಎಣ್ಣೆಯನ್ನು ಹಾಕಿ ತಮ್ಮ ಮುಖವನ್ನು ನೋಡಿಕೊಳ್ಳಬೇಕು ನಂತರ ಆ ಎಣ್ಣೆಯನ್ನು ಬಡವರಿಗೆ ಅಥವಾ ಶನಿ ದೇವರ ಮಂದಿರದಲ್ಲಿ ದಾನ ಮಾಡಬೇಕು. ಎಣ್ಣೆಯನ್ನು ಶನಿವಾರ ಖರೀದಿ ಮಾಡಿದರೆ ಅದು ಅಶುಭ. ಶನಿವಾರದಂದು ಕರಿ ಎಳ್ಳನ್ನು ದಾನವಾಗಿ ನೀಡಬೇಕು ಆದರೆ ಶನಿವಾರ ಕರಿ ಎಳ್ಳನ್ನು ಖರೀದಿ ಮಾಡಬಾರದು. ಒಂದು ವೇಳೆ ಶನಿವಾರ ಕರಿ ಎಳ್ಳನ್ನು ಖರೀದಿ ಮಾಡಿದರೆ ಮಾಡುವ ಯಾವ ಕೆಲಸವೂ ಯಶಸ್ವಿಯಾಗುವುದಿಲ್ಲ.

ಶನಿವಾರ ಕಟ್ಟಿಗೆ ಅಥವಾ ಕಟ್ಟಿಗೆಯಿಂದ ತಯಾರಿಸುವ ವಸ್ತುಗಳನ್ನು ಖರೀದಿ ಮಾಡಬಾರದು ಒಂದು ವೇಳೆ ಖರೀದಿ ಮಾಡಿದರೆ ಕಲಹ ನಡೆಯುತ್ತದೆ. ಒಲೆ ಹಚ್ಚಲು ಸೀಮೆ ಎಣ್ಣೆ ಹಾಗೂ ಕಲ್ಲಿದ್ದಲನ್ನು ಖರೀದಿ ಮಾಡಬಾರದು. ಶನಿವಾರ ಮನೆಯನ್ನು ಮರೆಯದೆ ಸ್ವಚ್ಛಗೊಳಿಸಬೇಕು ಇದರಿಂದ ಶನಿ ದೇವರು ಒಳ್ಳೆಯದನ್ನು ಮಾಡುತ್ತಾನೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: