WhatsApp Group Join Now
Telegram Group Join Now

ಕ್ರೋಧಿನಾಮ ಸಂವತ್ಸರ ಉತ್ತರಾಯನ ಗ್ರೀಷ್ಮ ಋತು ಆಷಾಢ ಶುದ್ಧ ಅಷ್ಟಮಿಯಿಂದ ಹುಣ್ಣಿಮೆಯವರೆಗೆ ಕೆಲವು ರಾಶಿಗಳಿಗೆ ಶುಭ ಫಲವಿದ್ದರೆ ಇನ್ನು ಕೆಲವು ರಾಶಿಗಳಿಗೆ ಅಶುಭ ಫಲವಿದೆ ಹಾಗಾದರೆ ಯಾವ ರಾಶಿಗೆ ಶುಭ ಫಲ ಯಾವ ರಾಶಿಗೆ ಅಶುಭ ಫಲ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಮೇಷ ರಾಶಿಯವರು ವಾರದ ಮೊದಲಿನಿಂದಲೂ ಕುಜ ಮತ್ತು ಗುರು ಎರಡನೆ ಮನೆಯಲ್ಲಿ ಇರುತ್ತಾರೆ ಇದು ಮೇಷ ರಾಶಿಯವರಿಗೆ ಅಪರಮಿತ ರಾಜಯೋಗ ಕೊಡುತ್ತದೆ ಧನ ಲಾಭವಾಗುತ್ತದೆ ವಿದೇಶ ಪ್ರಯಾಣದ ಸಾಧ್ಯತೆ ಇದೆ. ನಾಲ್ಕನೆ ಮನೆಯಲ್ಲಿ ಬುಧ ಶುಕ್ರ ಸೂರ್ಯ ಇರುವುದರಿಂದ ಶುಭ ಫಲ ಸಿಗುತ್ತದೆ. 6ನೆ ಮನೆಯಲ್ಲಿರುವ ಕೇತು ಮೇಷ ರಾಶಿಯನ್ನು ರಕ್ಷಿಸುತ್ತಾನೆ. ವೃಷಭ ರಾಶಿಯವರ ಭವಿಷ್ಯ ನೋಡುವುದಾದರೆ ಇವರಿಗೆ ಸದಾ ಚಿಂತೆ ಕಾಡುತ್ತದೆ, ಇವರಿಗೆ ಧನ ಲಾಭವಾಗುತ್ತದೆ ಹಾಗೂ ಖರ್ಚು ಸಹ ಹೆಚ್ಚುತ್ತದೆ.

ಲಾಭ ಸ್ಥಾನದಲ್ಲಿರುವ ರಾಹು ಒಳ್ಳೆಯದನ್ನು ಮಾಡುತ್ತಾನೆ. ಮಿಥುನ ರಾಶಿಯವರಿಗೆ ಭೂಮಿಯಿಂದ ನಷ್ಟವಾಗುತ್ತದೆ ಹಾಗೂ ಆರೋಗ್ಯದಲ್ಲಿ ಏರುಪೇರು ಕಂಡುಬರುತ್ತದೆ. ಇವರಿಗೆ ಹಣದ ಹರಿವು ಉತ್ತಮವಾಗಿದೆ. ಕೇತುವಿನಿಂದ ಇವರ ತಾಯಿಗೆ ಕಷ್ಟ ಬರುತ್ತದೆ, ತಾಯಿಯ ಆರೋಗ್ಯದಲ್ಲಿ ಎಚ್ಚರಿಕೆ ಇರಲಿ. ಕಟಕ ರಾಶಿಯವರಿಗೆ ಮೈ ಮನಸಿಗೆ ತೃಪ್ತಿ ಕೊಡುವ ಸಂಗತಿಗಳು ನಡೆಯುತ್ತದೆ, ಇವರಿಗೆ ಧನ ಲಾಭವಾಗುತ್ತದೆ.

ಮನೆಯಲ್ಲಿ ಶುಭಕಾರ್ಯಗಳು ನಡೆಯುತ್ತದೆ ಅವಿವಾಹಿತರಿಗೆ ವಿವಾಹ ಯೋಗ ಬರುತ್ತದೆ. ಮನೆ ಕಟ್ಟುತ್ತಾರೆ ಇಲ್ಲ ಮನೆಯನ್ನು ಖರೀದಿ ಮಾಡುತ್ತಾರೆ. ಇವರು ಬಂಡವಾಳ ಹೂಡಿದರೆ ಲಾಭವಾಗುತ್ತದೆ. ಸಿಂಹ ರಾಶಿಯವರು ಹಣಕ್ಕಾಗಿ ಪರದಾಡಬೇಕಾಗುತ್ತದೆ ಮನಸ್ಸಿಗೆ ಕಸಿವಿಸಿ. ಸಿಂಹ ರಾಶಿಯವರು ಮೇಲಾಧಿಕಾರಿಗಳ ಕಿರುಕುಳವನ್ನು ಅನುಭವಿಸಬೇಕಾಗುತ್ತದೆ. ಕೆಲವು ಉತ್ತಮ ನಿರ್ಧಾರಗಳನ್ನು ಈಗಲೆ ತೆಗೆದುಕೊಳ್ಳಬೇಡಿ. ಕನ್ಯಾ ರಾಶಿಯವರಿಗೆ ವೈಭವದ ಕಾಲವಾಗಿದೆ, ಭಾಗ್ಯ ಲಭಿಸುತ್ತದೆ. ಹೇರಳ ಧನಲಾಭವಿದೆ ವ್ಯಾಪಾರ ಮಾಡುತ್ತಿರುವವರಿಗೆ ಲಾಭವಿದೆ ಹಾಗೂ ನಿಂತುಹೋದ ಕೆಲಸಗಳು ಪ್ರಾರಂಭವಾಗುತ್ತದೆ.

ಅವಿವಾಹಿತರಿಗೆ ವಿವಾಹ ಯೋಗವಿದೆ, ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ತುಲಾ ರಾಶಿಯವರಿಗೆ ಶನಿಯಿಂದ ಯಾವುದೆ ವಿಷಯದಲ್ಲಿ ಮುಂದುವರೆಯಲು ಅಡ್ಡಿ ಉಂಟಾಗುತ್ತದೆ, ಹಣದ ವ್ಯತ್ಯಯ ಉಂಟಾಗುತ್ತದೆ. ವೃಶ್ಚಿಕ ರಾಶಿಯವರಿಗೆ ಗುರುಬಲ ಇರುವುದರಿಂದ ಅಂದುಕೊಂಡ ಕೆಲಸಗಳು ಈಡೇರುತ್ತದೆ. ಬಂಡವಾಳದ ಕೊರತೆಯಿಂದಲೂ ಇನ್ನು ಯಾವುದೊ ಕಾರಣಕ್ಕೆ ನಿಂತು ಹೋದ ಕೆಲಸಗಳು ಈಗ ಚಾಲನೆ ಪಡೆದುಕೊಳ್ಳುತ್ತದೆ.

ವೃಶ್ಚಿಕ ರಾಶಿಯವರಿಗೆ ಸಂತಾನಕ್ಕೆ ಅಡ್ಡಿಯಾಗುತ್ತದೆ ದುರ್ಗಾದೇವಿ ಹಾಗೂ ಸುಬ್ರಹ್ಮಣ್ಯ ದೇವರ ಪೂಜೆ ಮಾಡಿದರೆ ಪರಿಹಾರವಾಗುತ್ತದೆ. ವ್ಯಾಪಾರದಲ್ಲಿ ಆರ್ಥಿಕ ಲಾಭವಾಗುತ್ತದೆ, ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಹಣಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು, ಅಗತ್ಯವಿದ್ದರೆ ಮಾತ್ರ ಹಣ ಖರ್ಚು ಮಾಡಿ ಸಾಧ್ಯವಾದರೆ ಹಣವನ್ನು ಉಳಿಸಿ. ಕೌಟುಂಬಿಕ ಜೀವನದಲ್ಲಿ ಸಂತೋಷ ಇರುತ್ತದೆ, ಸಮಸ್ಯೆಗಳು ಬಗೆಹರಿಯುತ್ತದೆ. ಸಂಗಾತಿಯೊಂದಿಗೆ ಜಗಳ ಮಾಡುವುದನ್ನು ತಪ್ಪಿಸಿ ಸಂಬಂಧದಲ್ಲಿ ಭಿನ್ನಾಭಿಪ್ರಯ ಹೆಚ್ಚಾಗಬಹುದು.

ಧನಸ್ಸು ರಾಶಿಯವರಿಗೆ ಶನಿಯಿಂದ ಪರಾಕ್ರಮ ಹಾಗೂ ಧನಲಾಭ ಕೊಡುತ್ತಾನೆ, ಈ ರಾಶಿಯವರಿಗೆ ಸದಾ ಚಿಂತೆ ಇರುತ್ತದೆ ನೆಮ್ಮದಿ ಇರುವುದಿಲ್ಲ. ತಾಯಿಯ ಆರೋಗ್ಯದಲ್ಲಿ ಏರುಪೇರು ಇದೆ ಜಾಗೃತರಾಗಿರಬೇಕು. ಕೆಲಸದ ಸ್ಥಳದಲ್ಲಿ ಅಧಿಕಾರಿಗಳಿಂದ ಬೆಂಬಲ ಪಡೆಯುತ್ತಾರೆ. ಕೌಟುಂಬಿಕ ಜೀವನದಲ್ಲಿ ಸಂತಸದ ವಾತಾವರಣ ಇರುತ್ತದೆ. ಅತಿಯಾದ ಕೋಪ ಮಾಡಿಕೊಳ್ಳುವುದನ್ನು ಬಿಡಬೇಕು. ಜೀವನದ ಗುರಿ ಸಾಧಿಸಲು ಹೊಸ ಪ್ರಯತ್ನ ಮಾಡಬೇಕು. ಕುಟುಂಬದ ಸದಸ್ಯರೊಂದಿಗೆ ಅನಗತ್ಯವಾದ ವಾದ ಮಾಡಬಾರದು. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಬರಬಹುದು. ಮಕರ ರಾಶಿಯವರಿಗೆ ಗುರುಬಲ ಇರುವುದರಿಂದ ಯೋಚಿಸಿದ ಕೆಲಸ ಕಾರ್ಯ ಯಶಸ್ವಿಯಾಗುತ್ತದೆ,

ಮಕರ ರಾಶಿಯವರಿಗೆ ಶುಭ ಫಲ ಸಿಗುತ್ತದೆ. ಅವಿವಾಹಿತರಿಗೆ ವಿವಾಹ ಭಾಗ್ಯವಿದೆ ಹಾಗೂ ವಿದೇಶ ಪ್ರಯಾಣ ಮಾಡುವ ಸಾಧ್ಯತೆ ಇದೆ. ಬದುಕಿನಲ್ಲಿ ಈಗ ಹೊಸ ಬೆಳಕು ಕಾಣುವ ಸಮಯ. ಮಕರ ರಾಶಿಯವರು ತಮ್ಮ ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಬೇಕು. ಮಕರ ರಾಶಿಯ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಬಹುದು. ಉದ್ಯಮಿಗಳು ಯಾರನ್ನು ಹೆಚ್ಚು ನಂಬಬಾರದು. ಸ್ನೇಹಿತರ ಸಹಾಯದಿಂದ ಉದ್ಯೋಗದಲ್ಲಿನ ಸಮಸ್ಯೆಗಳು ನಿವಾರಣೆಯಾಗಬಹುದು. ವೃತ್ತಿಪರ ಜೀವನದಲ್ಲಿ ಏರಿಳಿತಗಳು ಕಂಡು ಬರಬಹುದು. ಕುಂಭ ರಾಶಿಯವರಿಗೆ ಪರಿಸ್ಥಿತಿ ಗಂಭೀರವಾಗಿರುತ್ತದೆ ಏನೆ ನಿರ್ಧಾರ ತೆಗೆದುಕೊಳ್ಳಬೇಕಾದರೂ ಯೋಚಿಸಿ ತೆಗೆದುಕೊಳ್ಳಬೇಕು, ಇವರು ದುಡುಕಿ ಏನು ಮಾತನಾಡಬಾರದು.

ಕುಂಭ ರಾಶಿಯವರು ಅಪವಾದವನ್ನು ಅನುಭವಿಸಬೇಕಾಗಬಹುದು. ಕುಂಭ ರಾಶಿಯ ರಾಜಕೀಯದಲ್ಲಿ ಇರುವವರಿಗೆ ಪರೀಕ್ಷಾ ಸಮಯ, ದತ್ತಾತ್ರೇಯನನ್ನು ಆರಾಧಿಸಬೇಕು. ಹಣದ ಹೊಸ ಮಾರ್ಗಗಳು ಸಿಗುತ್ತದೆ. ವಾಹನದ ನಿರ್ವಹಣೆಗೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಕುಂಭ ರಾಶಿ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಪಡೆಯುತ್ತಾರೆ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಬರಬಹುದು. ಮೀನ ರಾಶಿಯವರಿಗೂ ಹಣಕಾಸು ಹಾಗೂ ಆರೋಗ್ಯದ ವಿಷಯದಲ್ಲಿ ಸಮಸ್ಯೆ ಕಾಣುತ್ತದೆ. ಮೀನ ರಾಶಿಯವರು ಕೆಲಸದ ಜವಾಬ್ದಾರಿಯನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಸಕಾರಾತ್ಮಕ ಭಾವನೆಯಿಂದ ಕನಸುಗಳನ್ನು ಈಡೇರಿಸಿಕೊಳ್ಳಬೇಕು. ಈ ರಾಶಿಯ ವ್ಯಾಪಾರಸ್ಥರಿಗೆ ಶುಭಫಲವಿದೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: