WhatsApp Group Join Now
Telegram Group Join Now

ಜೂನ್ ತಿಂಗಳಿನಲ್ಲಿ ಕನ್ಯಾ ರಾಶಿಯಲ್ಲಿ ಜನಿಸಿದವರ ಗ್ರಹ ಗತಿ ಹೇಗಿರುತ್ತದೆ ಅದಕ್ಕೆ ಅನುಗುಣವಾದ ರಾಶಿ ಭವಿಷ್ಯ ಹೇಗಿರುತ್ತದೆ ಹಾಗೂ ಈ ತಿಂಗಳಿನಲ್ಲಿ ಅವರಿಗೆ ಯಾವೆಲ್ಲಾ ವಿಷಯದಲ್ಲಿ ಲಾಭವಿದೆ, ನಷ್ಟವೇನು ಜೊತೆಗೆ ಕನ್ಯಾ ರಾಶಿಯವರು ಜೂನ್ ತಿಂಗಳಲ್ಲಿ ಏನೆಲ್ಲ ಎಚ್ಚರಿಕೆ ವಹಿಸಬೇಕು ಎಂಬೆಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಜೂನ್ ತಿಂಗಳಿನಲ್ಲಿ ಕನ್ಯಾ ರಾಶಿಯ ಗ್ರಹಗತಿಯನ್ನು ನೋಡುವುದಾದರೆ ಕುಜ ಎಂಟನೆ ಮನೆಯಲ್ಲಿ ಬುಧ, ರವಿ, ಗುರು, ಶುಕ್ರ 9ನೆ ಮನೆಯಲ್ಲಿ ಕೇತು ಒಂದನೆ ಮನೆಯಲ್ಲಿ ಶನಿ ಆರನೆ ಮನೆಯಲ್ಲಿ ರಾಹು 7ನೆ ಮನೆಯಲ್ಲಿ ವಾಸವಾಗಿದ್ದಾರೆ. ಕುಜ ಅಷ್ಟಮ ಸ್ಥಾನದಲ್ಲಿ ಇರುವುದರಿಂದ ಪಿತೃ ಶಾಪ ಸೂಚಿಸುತ್ತದೆ ಕನ್ಯಾ ರಾಶಿಯವರು ತೆಗೆದುಕೊಂಡ ನಿರ್ಧಾರಕ್ಕೆ ತಂದೆ ತಾಯಿಯ ವಿರೋಧ ವ್ಯಕ್ತವಾಗುತ್ತದೆ ಹೀಗಾಗಿ ಕನ್ಯಾ ರಾಶಿಯವರು ತಂದೆ ತಾಯಿಯ ಮಾತಿಗೆ ವಿರೋಧಿಸದೆ ಅವರ ಒಪ್ಪಿಗೆಯನ್ನು ತೆಗೆದುಕೊಂಡು ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು ಒಂದು ವೇಳೆ ಅವರ ಮಾತಿಗೆ ವಿರುದ್ಧವಾಗಿ ನಿರ್ಧಾರ ತೆಗೆದುಕೊಂಡಲ್ಲಿ ಇಡಿ ತಿಂಗಳು ಅವರ ಆಶೀರ್ವಾದವಿಲ್ಲದೆ ಕನ್ಯಾ ರಾಶಿಯವರು ಮಾಡುವ ಯಾವ ಕೆಲಸವು ಯಶಸ್ವಿಯಾಗುವುದಿಲ್ಲ.

ವಿಷ್ಣು ಸಹಸ್ರನಾಮವನ್ನು ಪ್ರತಿನಿತ್ಯ ಪಠಿಸುವುದರಿಂದ ಕನ್ಯಾ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣ ಇದ್ದಾಗ ಮಾತ್ರ ಕೈಗೊಳ್ಳುವ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತದೆ. ತಂದೆ ತಾಯಿಯೊಂದಿಗೆ ಭಿನ್ನಾಭಿಪ್ರಾಯವಿದ್ದಲ್ಲಿ ಕೂತು ಬಗೆಹರಿಸಿಕೊಳ್ಳುವುದು ಉತ್ತಮ. ತಂದೆ ತಾಯಿಯರು ಮಕ್ಕಳು ತಮ್ಮ ಮಾತನ್ನು ಕೇಳುತ್ತಿಲ್ಲ ತಮಗೆ ಗೌರವ ಕೊಡುತ್ತಿಲ್ಲವೆಂದಾಗ ವೃದ್ಧಾಶ್ರಮಕ್ಕೆ ಹೋಗುತ್ತಾರೆ ಅಥವಾ ಕೆಲವು ಮನೆಯಲ್ಲಿ ಮಕ್ಕಳೆ ಹೋಗಿ ವೃದ್ಧಾಶ್ರಮಕ್ಕೆ ತಂದೆ ತಾಯಿಯನ್ನು ಬಿಟ್ಟು ಬರುತ್ತಾರೆ ಇದು ಒಳ್ಳೆಯ ಸೂಚನೆಯಲ್ಲ ಇಂತಹ ಸ್ಥಿತಿಯನ್ನು ಕನ್ಯಾ ರಾಶಿಯವರು ತಂದುಕೊಳ್ಳದೆ ಇರಲಿ.

ರವಿ ಬುಧ ಗುರು ಶುಕ್ರ ಭಾಗ್ಯ ಸ್ಥಾನದಲ್ಲಿದ್ದಾರೆ ಆರೋಗ್ಯಕಾರಕ ವರ್ಚಸ್ಸುಕಾರಕ ಪಿತ್ರಕಾರಕ ರವಿಯಿಂದ ಕನ್ಯಾ ರಾಶಿಯವರು ತಂದೆ-ತಾಯಿಯ ಮಾತನ್ನು ಕೇಳುವುದರಿಂದ ಉತ್ತಮ ಫಲವನ್ನು ಪಡೆಯುತ್ತಾರೆ. ಗುರುವಿನಿಂದ ಅಂದುಕೊಂಡ ಎಲ್ಲಾ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತದೆ. ಬುಧನು ಉತ್ತಮ ಸ್ಥಾನದಲ್ಲಿದ್ದಾನೆ ಸಂಪತ್ತಿಗೆ ಕೊರತೆ ಆಗುವುದಿಲ್ಲ ಬುಧ ರವಿಯಿಂದ ಬುದಾದಿತ್ಯ ಯೋಗ ಗುರು ಶುಕ್ರರ ಯತಿಯಿಂದ ರಾಜಯೋಗ ಉಂಟಾಗುತ್ತದೆ. ಶುಕ್ರನು ಮನೆಯಲ್ಲಿ ಮಂಗಳ ಕಾರ್ಯವನ್ನು ಮಾಡಿಸುತ್ತಾನೆ.

ಕೇತು ಒಂದನೆ ಮನೆಯಲ್ಲಿ ಇರುವುದರಿಂದ ಕನ್ಯಾ ರಾಶಿಯವರಿಗೆ ಸರ್ಪ ಶಾಪ ನೀಡಬಹುದು, ರಾತ್ರಿ ಕೆಟ್ಟ ಸ್ವಪ್ನಗಳು ಬರಬಹುದು ಹೀಗಾಗಿ ಕನ್ಯಾ ರಾಶಿಯವರು ನಾಗರಾಧನೆ ಮಾಡಿಕೊಳ್ಳಬೇಕು. ಸಾಲದ ಬಾಧೆ ಹೆಚ್ಚಾಗಬಹುದು ಸಾಲದ ಬಾಧೆಯಿಂದ ಹೊರಬರಲು ಪ್ರತಿದಿನ ರಾತ್ರಿ ಉಪ್ಪಿನಿಂದ ಕೈ ತೊಳೆಯಬೇಕು. ರಾಹು ಸಪ್ತಮದಲ್ಲಿದ್ದು ಅನಾರೋಗ್ಯವಾಗಬಹುದು ಯಾವುದಾದರೂ ಒಂದು ಅಂಗದಲ್ಲಿ ಊನತೆ ಕಾಣಿಸಿಕೊಳ್ಳಬಹುದು.

ಕನ್ಯಾ ರಾಶಿಯವರು ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಬೇಕು. ಅಕ್ಕಿಯ ಮೇಲೆ ಬೆಲ್ಲದ ಅಚ್ಚಿನಲ್ಲಿ ತುಪ್ಪದ ದೀಪವನ್ನು ಹಚ್ಚಬೇಕು ಇದರಿಂದ ಅನಾರೋಗ್ಯ ಸಮಸ್ಯೆ ನಿವಾರಣೆ ಆಗುತ್ತದೆ. ಶನಿ ಆರನೆ ಮನೆಯಲ್ಲಿದ್ದಾನೆ ಸಾಧಕನು ಹೌದು ಶತ್ರುವು ಹೌದು ಉದ್ಯೋಗದಲ್ಲಿ ಹಾಗೂ ಮನೆಯಲ್ಲಿ ಶತ್ರು ಕಾಟವಿರುತ್ತದೆ. ಒಟ್ಟಿನಲ್ಲಿ ಕನ್ಯಾ ರಾಶಿಯವರಿಗೆ ಒಳ್ಳೆಯ ಫಲಗಳು ಹಾಗೂ ಕೆಟ್ಟ ಫಲಗಳು ಎರಡು ಇವೆ ಹೇಳಿದ ಎಲ್ಲಾ ಪರಿಹಾರವನ್ನು ಮಾಡಿಕೊಂಡಲ್ಲಿ ಜೀವನದಲ್ಲಿ ಸಂತೋಷದಿಂದ ಇರಬಹುದಾಗಿದೆ. ಈ ಮಾಹಿತಿಯನ್ನು ತಪ್ಪದೆ ಕನ್ಯಾ ರಾಶಿಯವರಿಗೆ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: