WhatsApp Group Join Now
Telegram Group Join Now

ಇದೆ 2024 ಮೇ ತಿಂಗಳ ದ್ವಾದಶ ರಾಶಿಗಳಲ್ಲಿ ಜನಿಸಿದವರ ರಾಶಿ ಭವಿಷ್ಯ ಹೇಗಿರುತ್ತದೆ ಯಾವ ರಾಶಿಯಲ್ಲಿ ಜನಿಸಿದವರಿಗೆ ಯಾವ ಯಾವ ಎಚ್ಚರಿಕೆಗಳಿವೆ ಹಾಗೂ ಯಾವ ಗ್ರಹದಿಂದ ಏನೆಲ್ಲಾ ಲಾಭವಿದೆ ಹೀಗೆ ನಾನಾ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಮೇ ತಿಂಗಳಿನಲ್ಲಿ ಗ್ರಹಗಳ ಸಂಚಾರ ನೋಡುವುದಾದರೆ ರಾಹು ಮೀನ ರಾಶಿಯಲ್ಲಿ ಕೇತು ಕನ್ಯಾ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾರೆ. ಶನಿ ಕುಂಭ ರಾಶಿಯಲ್ಲಿ ಹಾಗೂ ಗುರು ವೃಷಭ ರಾಶಿಗೆ ಪ್ರವೇಶ ಮಾಡುತ್ತಾನೆ. ಸೂರ್ಯ ಮೇ 14ರವರೆಗೆ ಮೇಷ ರಾಶಿಯಲ್ಲಿ ನಂತರ ವೃಷಭ ರಾಶಿಗೆ ಪ್ರವೇಶ ಮಾಡುತ್ತಾನೆ. ಕುಜ ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ ಬುಧ ಮೇ 10ನೇ ತಾರೀಖಿನ ನಂತರ ಮೇಷ ರಾಶಿಯಲ್ಲಿ ಸಂಚಾರ, ಶುಕ್ರ ಮೇ 19 ರಿಂದ ವೃಷಭ ರಾಶಿಯಲ್ಲಿ ಸಂಚಾರ ಮಾಡುತ್ತಾರೆ. ಸಿಂಹ ರಾಶಿಯವರಿಗೆ ಕಳೆದ ಮೂರು ನಾಲ್ಕು ತಿಂಗಳಿನಿಂದ ಹಣಕಾಸು, ಉದ್ಯೋಗದ ವಿಷಯದಲ್ಲಿ ಸ್ವಲ್ಪ ತೊಂದರೆ ಇತ್ತು ಈ ತಿಂಗಳಿನಲ್ಲಿ ಹಣಕಾಸು ವಿಷಯದಲ್ಲಿ ಸುಧಾರಣೆ ಆಗುತ್ತದೆ, ಈ ತಿಂಗಳಲ್ಲಿ ಸಿಂಹ ರಾಶಿಯವರ ಮಾನಸಿಕ ನೆಮ್ಮದಿ ಹೆಚ್ಚುತ್ತದೆ. ಹಿಂದೆ ಇನ್ವೆಸ್ಟ್ ಮಾಡಿದ್ದರೆ ಯಾರಿಗಾದರೂ ಸಾಲ ಕೊಟ್ಟಿದ್ದರೆ ಈ ತಿಂಗಳಿನಲ್ಲಿ ಅದು ವಾಪಸ್ ಬರುವ ಸಾಧ್ಯತೆ ಇದೆ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಇದು ಉತ್ತಮ ಅವಧಿಯಾಗಿದೆ.

ಸಿಂಹ ರಾಶಿಯ ಬೇರೆ ದೇಶಗಳಿಗೆ ಹೋಗಿ ಸೆಟ್ಲಾಗಬೇಕು ಎಂದುಕೊಂಡಿರುವವರಿಗೆ ಇದು ಒಳ್ಳೆಯಸಮಯವಾಗಿದೆ. ರಾಹು ಹಾಗೂ ಕುಜನಿಂದ ಸ್ವಲ್ಪ ತೊಂದರೆಗಳಾಗುವುದು ಸಣ್ಣಪುಟ್ಟ ಅಪಘಾತವಾಗುವುದು ತಂದೆಯ ಜೊತೆ ಭಿನ್ನಾಭಿಪ್ರಾಯ ಬರಬಹುದು ಹೀಗಾಗಿ ಮಾತಿನಲ್ಲಿ ಎಚ್ಚರಿಕೆ ಇರಲಿ. ಸಿಂಹ ರಾಶಿಯವರು ದೂರ ಪ್ರಯಾಣ ಮಾಡುವುದಾದರೆ ಎಚ್ಚರಿಕೆಯಿಂದ ಇರುವುದು ಗುಡ್ಡ ಬೆಟ್ಟ ಓಡಾಡುವುದಾದರೆ ಎಚ್ಚರಿಕೆಯಿಂದ ಇರಬೇಕು. ಮೇ 2ನೇ ವಾರ ಪ್ರಾಣಿಗಳಿಂದ ತೊಂದರೆಯಾಗಬಹುದು ಎಚ್ಚರಿಕೆಯಿಂದ ಇರಬೇಕು. ಸಿಂಹ ರಾಶಿಗೆ ಮೇ ತಿಂಗಳಿನಲ್ಲಿ ಸಣ್ಣ ಪುಟ್ಟ ತೊಂದರೆಗಳು ಬಿಟ್ಟು ಹೆಚ್ಚು ಚಿಂತಿಸುವ ಅಗತ್ಯವಿಲ್ಲ ಸುಬ್ರಹ್ಮಣ್ಯ ದೇವರ ಆರಾಧನೆ ಮಾಡಬೇಕು ಇದರಿಂದ ಒಳ್ಳೆಯದಾಗುತ್ತದೆ, ಪ್ರತಿನಿತ್ಯ ಆದಿತ್ಯ ಹೃದಯ ಸ್ತೋತ್ರವನ್ನು ಪಠಣ ಮಾಡಬೇಕು. ಗುರು ಬಲ ಹೆಚ್ಚಾಗಲು ದತ್ತಾತ್ರೇಯ ಹಾಗೂ ರಾಘವೇಂದ್ರರ ಆರಾಧನೆ ಮಾಡಬೇಕು ದತ್ತ ಚರಿತ್ರೆಯನ್ನು ಓದಬೇಕು.

ಮೀನ ರಾಶಿಯವರಿಗೆ ರಾಹು ಹಾಗೂ ಕುಜನಿಂದ ಅಪವಾದಗಳು ಬರುತ್ತದೆ ತಪ್ಪು ಮಾಡದೆ ಭಯ ಭ್ರಾಂತಿ ಇರುತ್ತದೆ. ಮೀನ ರಾಶಿಯ ಗಂಡ ಹೆಂಡತಿಯ ನಡುವೆ ಭಿನ್ನಾಭಿಪ್ರಾಯ ಇರುತ್ತದೆ ಕುಟುಂಬದಲ್ಲಿ ವಿನಾಕಾರಣ ಜಗಳವಾಗುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ಮೀನ ರಾಶಿಯವರು ಮೇ ತಿಂಗಳಿನಲ್ಲಿ ಯೋಚನೆ ಮಾಡುವುದು ಬೇಡ ಆದರೆ ವಿನಾಕಾರಣ ಜಗಳ ಆಡುವುದು, ಅಪವಾದ, ಅಪಘಾತವಾಗುವುದು ಇದರಿಂದ ಮನಸಿಗೆ ದುಃಖವಾಗುತ್ತದೆ. ಮೀನ ರಾಶಿಯ ಹಿರಿಯರಿಗೆ ಹೊಟ್ಟೆಗೆ ಸಂಬಂಧಿಸಿದ ನೋವು ಕಾಣಿಸಿಕೊಳ್ಳುತ್ತದೆ. ಉದ್ಯೋಗದಲ್ಲಿ ಎಷ್ಟೆ ತೊಂದರೆ ಬಂದರೂ ಮೇ ತಿಂಗಳ ಕೊನೆಯಲ್ಲಿ ನಿವಾರಣೆಯಾಗುತ್ತದೆ.

ಈ ತಿಂಗಳಿನಲ್ಲಿ ಮೀನ ರಾಶಿಯವರು ಕೆಲಸಕ್ಕೆ ಸಂಬಂಧಿಸಿ ಪ್ರಯಾಣ ಅಥವಾ ಜಗಳ ಮಾಡಿಕೊಂಡು ಸಂಬಂಧಿಗಳ ಮನೆಯಲ್ಲಿ ಇರುವುದು ಹೀಗೆ ಸ್ಥಾನ ಸಂಚಾರ ಕಂಡುಬರುತ್ತದೆ. ಮೀನ ರಾಶಿಯವರಿಗೆ ಮೇ ತಿಂಗಳ ಮೂರು ಮತ್ತು ನಾಲ್ಕನೇ ವಾರಗಳು ಶುಭದಾಯಕವಾಗಿದೆ. ಮೀನ ರಾಶಿಯ ವಿದ್ಯಾರ್ಥಿಗಳಿಗೆ ಈ ತಿಂಗಳಿನಲ್ಲಿ ಶುಭಫಲವಿದೆ. ಮೀನ ರಾಶಿಯವರು ಸುಬ್ರಹ್ಮಣ್ಯ ಹಾಗೂ ಇಷ್ಟಾರ್ಥ ದೇವಿಗೆ ಎಳನೀರಿನ ಅಭಿಷೇಕ ಮಾಡಿಸಬೇಕು, ಪ್ರತಿದಿನ ತಪ್ಪದೆ ಹನುಮಾನ ಚಾಲೀಸಾವನ್ನು 11 ಬಾರಿ ಪಠಿಸಬೇಕು ಹಾಗೂ ನವಗ್ರಹ ಶ್ಲೋಕವನ್ನು ಪಾಠಿಸಿವುದರಿಂದ ಜೀವನದಲ್ಲಿ ಒಳ್ಳೆಯದಾಗುತ್ತದೆ.

ಕುಂಭ ರಾಶಿಯವರಿಗೆ ಮೇ ತಿಂಗಳಿನಲ್ಲಿ ಆದಾಯದಲ್ಲಿ ಸ್ವಲ್ಪ ಕಡಿಮೆ ಇರುತ್ತದೆ, ಕುಟುಂಬದಲ್ಲಿ ಅವರ ಗೌರವಕ್ಕೆ ಧಕ್ಕೆ ಆಗಬಹುದು. ಕುಂಭ ರಾಶಿಯವರು ಮೇ ಎರಡನೆ ವಾರದಲ್ಲಿ ಮಾಡುವ ಕೆಲಸದಲ್ಲಿ ಹಾನಿ ಉಂಟಾಗಬಹುದು. ಆಸ್ತಿ ವಿಚಾರದಲ್ಲಿ ಕುಂಭ ರಾಶಿಯವರು ತೊಂದರೆ ಅನುಭವಿಸುತ್ತಾರೆ. ಅನಾವಶ್ಯಕವಾಗಿ ಕೋಪದಿಂದ ಮಾತನಾಡಿ ಕೀರ್ತಿ ಹಾಗೂ ಗೌರವಕ್ಕೆ ಧಕ್ಕೆ ಬರುವ ಸಾಧ್ಯತೆಯಿದೆ. ಕುಂಭ ರಾಶಿಯವರಿಗೆ ಮೇ ತಿಂಗಳಿನಲ್ಲಿ ಅನಾವಶ್ಯಕ ಹಣ ಖರ್ಚಾಗುತ್ತದೆ. ಕುಂಭ ರಾಶಿಯವರ ಉದ್ಯೋಗದಲ್ಲಿ ತೊಂದರೆ ಇರುವುದಿಲ್ಲ. ಕುಂಭ ರಾಶಿಯವರು ಮೇ ತಿಂಗಳಿನಲ್ಲಿ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು, ಹಣದ ವಿಚಾರದಲ್ಲಿ ಜಾಗರೂಕತೆ ವಹಿಸಬೇಕು. ಕುಂಭ ರಾಶಿಯವರು ಪ್ರತಿದಿನ ಹನುಮಾನ ಚಾಲೀಸಾವನ್ನು ಓದಬೇಕು, ದುರ್ಗಾ ಸ್ತೋತ್ರವನ್ನು ಓದಬೇಕು.

ನವಗ್ರಹ ಆರಾಧನೆ, ಕುಲದೇವರ ಆರಾಧನೆ ಹಾಗೂ ಸುಬ್ರಹ್ಮಣ್ಯ ದೇವರ ದರ್ಶನ ಹಾಗೂ ಆರಾಧನೆ ಮಾಡಬೇಕು. ತುಲಾ ರಾಶಿಯವರಿಗೆ ಆದಾಯದಲ್ಲಿ ಕೊರತೆ ಕಾಣುತ್ತದೆ ಮಾನಸಿಕ ನೆಮ್ಮದಿ ಕಡಿಮೆಯಾಗುತ್ತದೆ ಆದರೆ ತುಲಾ ರಾಶಿಯವರಿಗೆ ಮಿತ್ರರು ಹಾಗೂ ಬಂಧುಗಳಿಂದ ಸಹಾಯ ಸಹಕಾರ ಸಿಗುತ್ತದೆ. ಈ ತಿಂಗಳಿನಲ್ಲಿ ತುಲಾ ರಾಶಿಯವರಿಗೆ ಸಂತಾನ ಭಾಗ್ಯವಿದೆ. ಉದ್ಯೋಗ ಹುಡುಕುತ್ತಿರುವವರಿಗೆ ಈ ತಿಂಗಳಿನಲ್ಲಿ ಒಳ್ಳೆಯದಾಗುತ್ತದೆ. ಆರೋಗ್ಯದಲ್ಲಿ ಸಣ್ಣ ಪುಟ್ಟ ವ್ಯತ್ಯಾಸ ಕಂಡುಬರುತ್ತದೆ. ತುಲಾ ರಾಶಿಯವರು ಗುರು ಆರಾಧನೆ ಮಾಡಬೇಕು, ಒಂಭತ್ತು ಗುರುವಾರ ಈಶ್ವರನ ದೇವಾಲಯದಲ್ಲಿ ಅರಿಶಿಣ ನೀರಿನಲ್ಲಿ ಅಭಿಷೇಕ ಮಾಡಿಸಬೇಕು. ದೇವಿಯ ಆರಾಧನೆ ಹಾಗೂ ನವಗ್ರಹ ಆರಾಧನೆ ಮಾಡಬೇಕು ಆಗ ತುಲಾ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: