ನಿಮ್ಮ ಜಾತಕದಲ್ಲಿ ಎಷ್ಟು ಗುಣಗಳು ಕೂಡಿದರೆ ಮದುವೆಗೆ ಯೋಗ್ಯ ನೋಡಿ..

0

ಸನಾತನ ಹಿಂದೂ ಸಂಸ್ಕೃತಿಯ ಮೌಲ್ಯಗಳು ಅತ್ಯಂತ ಮಹತ್ವದ್ದಾಗಿದೆ. ಶಾಸ್ತ್ರಗಳಲ್ಲಿ ತಿಳಿಸಲಾದ ನಿಯಮಗಳ ಪಾಲನೆಯಿಂದ ಜೀವನದಲ್ಲಿ ಸುಖ ಸಂತೋಷಗಳನ್ನು ಕಾಣಬಹುದಾಗಿದೆ. ಇಂತಹ ಶಾಸ್ತ್ರ ನಿಯಮಗಳಲ್ಲಿ ವಿವಾಹಕ್ಕೆ ಮೊದಲು ಹುಡುಗ ಮತ್ತು ಹುಡುಗಿಯ ಜಾತಕವನ್ನು ಹೊಂದಾಣಿಕೆ ಮಾಡುವುದು ಒಂದಾಗಿದೆ. ವೈವಾಹಿಕ ಜೀವನವು ಸಂತೋಷ ಮತ್ತು ನೆಮ್ಮದಿಯಿಂದ ಕೂಡಿರಬೇಕೆಂದರೆ ಹುಡುಗ ಹುಡುಗಿಯ ಜಾತಕವು ಹೊಂದಾಣಿಕೆ ಆಗಬೇಕು. ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವಂತೆ ಜಾತಕವು ವ್ಯಕ್ತಿಯ ಸ್ವಭಾವ ಗುಣ,ಲಕ್ಷಣಗಳನ್ನು ತಿಳಿಸುತ್ತದೆ. ಆದ್ದರಿಂದ ನಾವಿಲ್ಲಿ ಇದರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಜಾತಕ ಹೊಂದಾಣಿಕೆಯಾಗಬೇಕೆಂದರೆ ಗುಣಗಳ ಹೊಂದಾಣಿಕೆ ಅತ್ಯವಶ್ಯಕ. ಒಟ್ಟು 36 ಗುಣಗಳಿದ್ದು ಅವುಗಳಲ್ಲಿ ಕನಿಷ್ಠ 18 ಗುಣಗಳು ಹೊಂದಾಣಿಕೆ ಆಗಬೇಕು. ವೈವಾಹಿಕ ಜೀವನ ಸಫಲವಾಗಬೇಕೆಂದರೆ ಪತಿ, ಪತ್ನಿಯ ನಡುವೆ ಗುಣಗಳ ಹೊಂದಾಣಿಕೆ ಅತ್ಯಗತ್ಯವಾಗಿದೆ. ಈ ಗುಣಗಳನ್ನು ಜಾತಕದ ಮುಖಾಂತರ ತಿಳಿಯಲಾಗುತ್ತದೆ. ಜಾತಕ ಹೊಂದಾಣಿಕೆಯಲ್ಲಿ ಮುಖ್ಯವಾಗಿ ಒಟ್ಟು ಗುಣಕೂಟ ಎಂಟು. ಪ್ರತಿ ಗುಣಕ್ಕೂ ಅಂಕಗಳನ್ನಿಟ್ಟು ಹೊಂದಾಣಿಕೆಯನ್ನು ನೋಡಲಾಗುತ್ತದೆ. ವಿವಾಹಕ್ಕೆ ಕನಿಷ್ಠ 18 ಗುಣಗಳು ಹೊಂದಾಣಿಕೆಯಾಗುವುದು ಅವಶ್ಯಕ. 32 ರಿಂದ 36ಗುಣಗಳು ಹೊಂದಾಣಿಕೆಯಾದರೆ ಅದು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ.

36 ಗುಣಗಳು ಹೊಂದಾಣಿಕೆಯಾದರೆ ಶಾಸ್ತ್ರದಲ್ಲಿ ಉತ್ತಮವೆಂದು ಹೇಳಲಾಗುತ್ತದೆ. ಆದರೆ ವಿಪರೀತವೆಂಬಂತೆ ಶ್ರೀರಾಮ, ಸೀತೆ ಮಾತೆಯ ಜಾತಕ ಹೊಂದಾಣಿಕೆಯಲ್ಲಿ 36 ಗುಣಗಳು ಕೂಡಿಬಂದರೂ ಅವರ ವೈವಾಹಿಕ ಜೀವನ ಸುಖದಿಂದ ಕೂಡಿರಲಿಲ್ಲ. ಹಾಗಾಗಿ 36 ಗುಣಗಳು ಕೂಡಿಬಂದರೆ ಅದು ಉತ್ತಮ ವೈವಾಹಿಕ ಜೀವನವನ್ನು ಕಾಣುತ್ತದೆ ಎಂದು ಹೇಳಲಾಗುವುದಿಲ್ಲ. ಅಷ್ಟೇ ಅಲ್ಲದೆ ಒಟ್ಟು 36 ಗುಣಗಳು ಕೂಡಿ ಬರುವ ಸಾಧ್ಯತೆ ಕಡಿಮೆಯಾಗಿದೆ. ಗುಣಗಳನ್ನು ಹೊಂದಿಸುವ ಮೂಲಕ ಹುಡುಗ ಹುಡುಗಿಯ ಸ್ವಭಾವಗಳನ್ನು ಹೊಂದಾಣಿಕೆಯನ್ನು ನೋಡಲಾಗುತ್ತದೆ. ಹುಡುಗ ಅಥವಾ ಹುಡುಗಿಯ ಜಾತಕದ ಮೊದಲನೆ, ನಾಲ್ಕನೆ, ಏಳನೇ, ಎಂಟನೇ ಅಥವಾ ಹನ್ನೆರಡನೇ ಮನೆಯಲ್ಲಿ ಮಂಗಳ ಗ್ರಹವಿದ್ದರೆ ಅದಕ್ಕೆ ಮಂಗಳ ದೋಷ ಅಥವಾ ಕುಜದೋಷವೆಂದು ಕರೆಯುತ್ತಾರೆ.

ಜಾತಕ ಹೊಂದಾಣಿಕೆಯ ಸಂದರ್ಭದಲ್ಲಿ ಹುಡುಗ ಅಥವಾ ಹುಡುಗಿಗೆ ಕುಜ ದೋಷವಿದ್ದರೆ ಅದರ ಹೊಂದಾಣಿಕೆಯಲ್ಲಿ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಸಾಮಾನ್ಯವಾಗಿ ಇಂತಹ ಸಂದರ್ಭದಲ್ಲಿ ಮಂಗಳ ದೋಷವಿರುವ ವ್ಯಕ್ತಿಯನ್ನು ಮಂಗಳ ದೋಷವಿರುವ ಜಾತಕದೊಂದಿಗೆ ವಿವಾಹ ಮಾಡಿದರೆ ಆಗ ದೋಷವಿರುವುದಿಲ್ಲವೆಂದು ಹೇಳಲಾಗುತ್ತದೆ. ಒಬ್ಬರ ಜಾತಕದಲ್ಲಿ ಕುಜ ದೋಷವಿದ್ದು ವಿವಾಹಕ್ಕೆ ಹೊಂದಾಣಿಕೆ ಮಾಡುವ ಸಂದರ್ಭದಲ್ಲಿ ಅರ್ಹ ಜ್ಯೋತಿಷಿಗಳ ಸಲಹೆ ಪಡೆದು ಮುಂದುವರಿಯುವುದು ಅಗತ್ಯವಾಗಿದೆ. ಈ ರೀತಿಯಾಗಿ ಜಾತಕ ವಿಮರ್ಶೆಯ ಮೇಲೆ ವಿವಾಹವನ್ನು ಮಾಡಲಾಗುತ್ತದೆ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!