ತುಳಸಿ ಗಿಡವನ್ನು ವಾಸ್ತು ಪ್ರಕಾರವಾಗಿ ಇಡಬೇಕು ತುಳಸಿಯನ್ನು ವಾಸ್ತು ಪ್ರಕಾರ ಇಡುವುದರಿಂದ ನಮಗೆ ಒಳ್ಳೆಯದಾಗುತ್ತದೆ.ಸಾಮಾನ್ಯವಾಗಿ ತುಳಸಿ ಗಿಡವನ್ನು ಮನೆಯ ಮುಖ್ಯ ದ್ವಾರದ ಮುಂದೆ ಅಂಗಳದಲ್ಲಿ ನೆಡಲಾಗುತ್ತದೆ ಆದರೆ ವಾಸ್ತು ಶಾಸ್ತ್ರಗಳಲ್ಲಿ ಕೆಲವು ಸ್ಥಳಗಳನ್ನು ಉಲ್ಲೇಖಿಸಲಾಗಿದೆ ತುಳಸಿ ಗಿಡವನ್ನು ಅಂತ ಸ್ಥಳದಲ್ಲಿ ಇಡುವುದರಿಂದ ಮನೆಯಲ್ಲಿ ಜಗಳ ಕಮ್ಮಿಯಾಗುತ್ತದೆ.
ಸಾಮಾನ್ಯವಾಗಿ ಆಗ್ನೇಯ ಭಾಗದಿಂದ ವಾಯುವ್ಯದವರೆಗೆ ಎಲ್ಲಿ ಬೇಕಾದರೂ ನಾವು ತುಳಸಿ ಗಿಡವನ್ನು ನೆಡಬಹುದು ಇದು ಮನೆಯ ಎಲ್ಲಾ ವಾಸ್ತುದೋಷವನ್ನು ದೂರ ಮಾಡುತ್ತದೆ ಆದರೆ ತುಳಸಿಯನ್ನು ಸರಿಯಾದ ಸ್ಥಳದಲ್ಲಿ ಇಡದಿದ್ದರೆ ಅದು ನಮಗೆ ಅಶುಭ ಫಲವನ್ನು ನೀಡುತ್ತದೆ. ತುಳಸಿ ಕಟ್ಟೆ ವಿನ್ಯಾಸವನ್ನು ರಚಿಸುವಾಗ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ
ಮೊದಲನೇದಾಗಿ ತುಳಸಿ ಗಿಡದ ಸುತ್ತಮುತ್ತ ಸ್ವಚ್ಛವಾಗಿರಬೇಕು ತುಳಸಿ ಗಿಡಕ್ಕೆ ಕಳಸದಿಂದಲೇ ನೀರನ್ನು ಅರ್ಪಿಸಬೇಕು ಕಳಸವನ್ನು ಎರಡು ಕೈಯಿಂದ ಹಿಡಿದಿರಬೇಕು ಪ್ರತಿದಿನ ಎಣ್ಣೆ ದೀಪವನ್ನು ಹಚ್ಚಬೇಕು ಕುಂಕುಮ ಗಂಧ ಅರಿಶಿಣವನ್ನು ಸುಗಂಧಿತ ವಸ್ತುವನ್ನು ತುಳಸಿಗೆ ಅರ್ಪಿಸಬೇಕು. ತುಳಸಿ ಕಟ್ಟೆಯನ್ನು ಸುತ್ತುವಾಗ ಮಂತ್ರವನ್ನು ಜಪಿಸಬೇಕು
ತುಳಸಿ ಗಿಡ ನೆಡಲು ಇನ್ನೊಂದು ಸೂಕ್ತ ದಿಕ್ಕು ಎಂದರೆ ಅದು ಪೂರ್ವ. ವಾಸ್ತು ಪ್ರಕಾರ ತುಳಸಿ ಗಿಡಕ್ಕೆ ಗಂಧವನ್ನು ಅರ್ಪಿಸುವುದರಿಂದ ಒಳ್ಳೆಯದಾಗುತ್ತದೆ ತುಳಸಿ ಗಿಡವನ್ನು ಯಾವಾಗಲೂ ಮಣ್ಣಿನ ಪಾತ್ರೆಯಲ್ಲಿ ಇಡಬೇಕು ತುಳಸಿ ಗಿಡಕ್ಕೆ ನೀರನ್ನು ನೀಡಿ ನಂತರ ಪೂಜೆ ಮಾಡುವುದು ಪದ್ಧತಿ. ತುಳಸಿ ಎಲೆಯನ್ನು ಉಗುರಿನಿಂದ ಕೀಳಬಾರದು ಬೆರಳಿನ ಸಹಾಯದಿಂದ ಮೃದುವಾಗಿ ತೆಗೆಯುವುದು ಒಳ್ಳೆಯದು ತುಳಸಿಗೆ ನೀರನ್ನು ಅರ್ಪಿಸುವುದಲ್ಲದೆ ಹಸಿ ಹಾಲನ್ನು ಕೂಡ ಅರ್ಪಿಸಬಹುದು ಅದರಿಂದ ದುರಾದೃಷ್ಟಗಳು ದೂರವಾಗುತ್ತದೆ ಎಂದು ನಂಬಲಾಗಿದೆ .
ತುಳಸಿ ಎಲೆಗಳನ್ನು 15 ದಿನಗಳ ಕಾಲ ಕೃಷ್ಣನ ಫೋಟೋ ಅಥವಾ ವಿಗ್ರಹದ ಮೇಲೆ ಇಡಬಹುದು ಮತ್ತು ಎಲೆಗಳು ಒಣಗಿದಾಗ ಅದನ್ನು ಪ್ರಸಾದವಾಗಿ ಸ್ವೀಕರಿಸಬಹುದು. ತುಳಸಿಯ ಒಣ ಎಲೆಗಳನ್ನು ಗಂಗಾ ನೀರಿನಲ್ಲಿ ಹಾಕಿ ಮನೆ ಒಳಗಡೆ ಸಿಂಪಡಿಸುವುದರಿಂದ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಸಾಮಾನ್ಯವಾಗಿ ಜನರು ತುಳಸಿಗೆ ಕೆಂಪು ಬಣ್ಣದ ಬಳೆಗಳನ್ನು ನೀಡುತ್ತಾರೆ ಕೆಂಪು ಮಂಗಳನ ಸಂಕೇತವಾಗಿದೆ ಮತ್ತು ತುಳಸಿ ಬುಧನ ಸಂಕೇತವಾಗಿದೆ.
ಬುಧ ಮತ್ತು ಮಂಗಳ ಸ್ನೇಹಿತರಲ್ಲ, ಬುಧನ ಅನುಕೂಲಕರ ಗ್ರಹಗಳು ಶುಕ್ರ ಮತ್ತು ಶನಿ ಆದರಿಂದ ತುಳಸಿಗೆ ಬಿಳಿ ಮತ್ತು ಪ್ರಕಾಶಮಾನವಾದ ನೀಲಿ ಬಳೆಗಳನ್ನ ಅರ್ಪಿಸುವುದು ಸೂಕ್ತ. ತುಳಸಿಯನ್ನು ಕೊಳಕು ಕೈಯಿಂದ ಮುಟ್ಟಬಾರದು ಮುಟ್ಟಿದರೆ ಲಕ್ಷ್ಮಿ ತುಂಬಾ ಕೋಪಗೊಳ್ಳುತ್ತಾಳೆ ಎಂದು ನಂಬಲಾಗುತ್ತದೆ.
ತುಳಸಿಯಿಂದ ಮಾಡಿಕೊಳ್ಳುವ ಸಣ್ಣ ಪರಿಹಾರಗಳು ಹಣಗಳಿಸುವಲ್ಲಿ ಬಹಳ ಸಹಾಯಕಾರಿಯಾಗಿದೆ ಆ ಪರಿಹಾರಗಳು ಯಾವುದೆಂದರೆ ಜಾತಕದಲ್ಲಿ ನವಗ್ರಹ ಅಥವಾ ಯಾವುದೇ ರೀತಿ ದೋಷದಿಂದ ಅಥವಾ ಶನಿ ದೋಷ ಅಥವಾ ರವಿ ದೋಷದಿಂದ ಬಳಲುತ್ತಿದ್ದರೆ ತುಳಸಿಯ ಮೂಲವನ್ನು ಯಂತ್ರದಲ್ಲಿ ತಂಕದಲ್ಲಿಟ್ಟು ಕುತ್ತಿಗೆಯಲ್ಲಿ ಧರಿಸುವುದರಿಂದ ಎಲ್ಲಾ ರೀತಿಯ ದೋಷಗಳು ನಾಶವಾಗುತ್ತದೆ ಮತ್ತು ಆ ಮನುಷ್ಯನಿಗೆ ಸಂಪತ್ತಿನ ಕೊರತೆ ಬರುವುದಿಲ್ಲ.ಪ್ರತಿದಿನ ಸ್ನಾನ ಮಾಡಿದ ಬಳಿಕ ತುಳಸಿಯ ಬೇರಿಗೆ ನೀರ ಎರೆಯುವುದರಿಂದ ನವಗ್ರಹ ದೋಷ ನಿವಾರಣೆ ಆಗುತ್ತದೆ
ಲಕ್ಷ್ಮೀದೇವಿ ಅನುಗ್ರಹದಿಂದ ಮನೆಯಲ್ಲಿರುವ ಬಡತನ ನಿವಾರಣೆ ಆಗುತ್ತದೆ .ಸ್ನಾನ ಮಾಡಿದ ನಂತರ ತುಳಸಿ ಬೇರಿನ ಮಣ್ಣನ್ನು ತೆಗೆದುಕೊಂಡು ಹಣೆಗೆ ಹಚ್ಚಿಕೊಳ್ಳುವುದರಿಂದ ಇದು ವ್ಯಕ್ತಿಯ ಸಂಮೋಹನ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದುರದೃಷ್ಟವನ್ನು ದೂರ ಮಾಡುತ್ತದೆ.